ಆ್ಯಪ್ನಗರ

ಅಜಮ್‌ಗಢದಲ್ಲಿ ಯಾದವರ ಸಮರ

'ನಿರಾಹುವಾ' ಹೆಸರಿನ ಆಲ್ಬಂಗಳಿಂದ 'ನಿರಾಹುವಾ' ಎಂಬ ಹೆಸರಿನಿಂದಲೇ ಖ್ಯಾತರಾಗಿರುವ ದಿನೇಶ್‌ ಲಾಲ್‌ ಯಾದವ್‌ ಅವರಿಗೆ ಯುವಕರು ಹಾಗೂ ಮಧ್ಯಮ ವರ್ಗದ ಬೆಂಬಲವಿದೆ. ಹೀಗಾಗಿ ಅಖಿಲೇಶ್‌ ವಿರುದ್ಧ ಸಮರ್ಥ ಅಭ್ಯರ್ಥಿಯಾಗಬಹುದು ಎನ್ನುವುದು ಬಿಜೆಪಿ ಲೆಕ್ಕಾಚಾರವಾಗಿದೆ.

Vijaya Karnataka 5 Apr 2019, 5:00 am
ಲಖನೌ: ಉತ್ತರ ಪ್ರದೇಶದ ಅಜಮ್‌ಗಢ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯು ಭೋಜ್‌ಪುರಿ ನಟ ಹಾಗೂ ಸಂಗೀತ ಕಲಾವಿದ ದಿನೇಶ್‌ ಲಾಲ್‌ ಯಾದವ್‌ ಅವರನ್ನು ಕಣಕ್ಕೆ ಇಳಿಸುವುದರೊಂದಿಗೆ 'ಯಾದವರ ಸಮರ'ಕ್ಕೆ ನಾಂದಿ ಹಾಡಿದೆ. ಸಮಾಜವದಿ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಈ ಕ್ಷೇತ್ರದಿಂದಲೇ ಸ್ಪರ್ಧಿಸುತ್ತಿದ್ದಾರೆ.
Vijaya Karnataka Web yadav


'ನಿರಾಹುವಾ' ಹೆಸರಿನ ಆಲ್ಬಂಗಳಿಂದ 'ನಿರಾಹುವಾ' ಎಂಬ ಹೆಸರಿನಿಂದಲೇ ಖ್ಯಾತರಾಗಿರುವ ದಿನೇಶ್‌ ಲಾಲ್‌ ಯಾದವ್‌ ಅವರಿಗೆ ಯುವಕರು ಹಾಗೂ ಮಧ್ಯಮ ವರ್ಗದ ಬೆಂಬಲವಿದೆ. ಹೀಗಾಗಿ ಅಖಿಲೇಶ್‌ ವಿರುದ್ಧ ಸಮರ್ಥ ಅಭ್ಯರ್ಥಿಯಾಗಬಹುದು ಎನ್ನುವುದು ಬಿಜೆಪಿ ಲೆಕ್ಕಾಚಾರವಾಗಿದೆ. ಈ ನಡೆ ಬಿಜೆಪಿಯ ಮಾಸ್ಟರ್‌ಸ್ಟ್ರೋಕ್‌ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

''ನಾನು ಯಾದವನಾಗಿರಬಹುದು. ಅದಕ್ಕಿಂತ ಮೊದಲು ನಾನೊಬ್ಬ ಬಾರತೀಯ. ಅಖಿಲೇಶ್‌ ಕುಟುಂಬ ಎಷ್ಟು ಯಾದವರಿಗೆ ಟಿಕೆಟ್‌ ನೀಡಿದೆ? ಹಾಗೆಯೇ ಮಾಯಾವತಿ ಅವರ ಬಹುಜನ ಸಮಾಜ ಪಾರ್ಟಿ ಎಷ್ಟು ದಲಿತರಿಗೆ ಟಿಕೆಟ್‌ ನೀಡಿದೆ?,'' ಎಂದು ದಿನೇಶ್‌ ಪ್ರಶ್ನಿಸಿದ್ದಾರೆ. ದಿನೇಶ್‌ ಅವರಿಗೆ ತಾವು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಬಹುದು ಎನ್ನುವ ಕಲ್ಪನೆಯೂ ಇರಲಿಲ್ಲ. ಕೆಲವು ದಿನಗಳ ಹಿಂದೆ ಅವರು ವಾರಾಣಸಿಯಲ್ಲಿ ತಮ್ಮ ಸಿನಿಮಾವೊಂದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.

ಅಜಮ್‌ಗಢ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮಾಕಾಂತ್‌ ಯಾದವ್‌ 2009ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. 2014ರಲ್ಲಿ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್‌ ಯಾದವ್‌ ಜಯ ಗಳಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌