ರಾಜನಾಥ್ ಸಿಂಗ್ ಬಗ್ಗೆ
ಭಾರತ ರಕ್ಷಣಾ ಸಚಿವರಾಗಿ 2014ರಿಂದ ಅಧಿಕಾರದಲ್ಲಿರುವ ರಾಜನಾಥ್ ಸಿಂಗ್ ಅವರು ಜನಪರ ಹೋರಾಟಗಳಿಂದಲೇ ಗುರುತಿಸಿಕೊಂಡು ಬೆಳೆದವರು. 1951ರ ಜುಲೈ 10ರಂದು ಚಂದ್ರೌಲಿ ಜಿಲ್ಲೆಯ ಬಧುವಾರಾ ಎಂಬ ಹಳ್ಳಿಯಲ್ಲಿ ಜನಿಸಿದ ರಾಜನಾಥ್ ಸಿಂಗ್, ಬಾಲ್ಯದಲ್ಲಿ ಅವರ ಹಳ್ಳಿಯ ಸರ್ಕಾರಿ ಶಾಲೆಯಲ್ಲೇ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿದರು. ಆನಂತರ ಗೋರಖ್ ಪುರ ವಿಶ್ವವಿದ್ಯಾಲಯದಲ್ಲಿ ಸ್ನಾತಕ ಪದವಿ, ಆನಂರ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮುಗಿಸಿದರು. ಉತ್ತರ ಪ್ರದೇಶದ ಮಿರ್ಜಾಪುರದ ಕೆ.ಬಿ. ಸ್ನಾತಕೋತ್ತರ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು.
ಚಿಕ್ಕವಯಸ್ಸಿನಿಂದಲೂ ಆರ್ ಎಸ್ ಎಸ್ ನಲ್ಲಿ ಸಕ್ರಿಯ
ಶಾಲಾ ದಿನಗಳಲ್ಲಿಯೇ ಅಂದರೆ, ಸುಮಾರು 13 ವರ್ಷ ವಯಸ್ಸಿನಿಂದಲೇ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಒಡನಾಟ ಹೊಂದಿದ್ದ ಅವರು, ಪದವಿ, ಸ್ನಾತಕೋತ್ತರ ವ್ಯಾಸಂಗದ ಸಂದರ್ಭದಲ್ಲಿಯೂ ಆರ್ ಎಸ್ ಎಸ್ ನ ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದರು. 1972ರಲ್ಲಿ ಮಿರ್ಜಾಪುರದಲ್ಲಿ ಆರ್ ಎಸ್ ಎಸ್ ನ ಸಹಕಾರ್ಯವಾಹರಾಗಿ ಸೇವೆ ಸಲ್ಲಿಸಿದರು. 1969ರಿಂದ 1971ರವರೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಗೋರಖ್ ಪುರ ಶಾಖೆಯ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. 1972ರಲ್ಲಿ ಆರ್ ಎಸ್ ಎಸ್ ನ ಮಿರ್ಜಾಪುರ ಶಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು.
1974ರಲ್ಲಿ ಜನಸಂಘಕ್ಕೆ (ಬಿಜೆಪಿಯ ಮೊದಲ ಹೆಸರು) ಸೇರ್ಪಡೆಗೊಂಡರು. ಜನಸಂಘಟನೆಯಲ್ಲಿ ಮೊದಲೇ ಹೆಸರು ಮಾಡಿದ್ದರಿಂದಾಗಿ ಅದೇ ವರ್ಷವೇ ಅವರು ಜನಸಂಘದ ಮಿರ್ಜಾಪುರ ಶಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. 1974ರಲ್ಲಿ ತಮ್ಮ 25ನೇ ವಯಸ್ಸಿನಲ್ಲಿ ಜಿಲ್ಲಾ ಕಾರ್ಯದರ್ಶಿಯಾಗಿ ನೇಮಕವಾದರು.
ಜಯಪ್ರಕಾಶ್ ನಾರಾಯಣ್ ಪ್ರಭಾವ
70ರ ದಶಕದಲ್ಲಿ ಪ್ರಖರವಾಗಿದ್ದ ಜಯಪ್ರಕಾಶ್ ನಾರಾಯಣ್ ಅವರ ಚಳುವಳಿಯ ಸಂದರ್ಭದಲ್ಲಿ ಅವರು ಹೆಚ್ಚಾಗಿ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದರು. 1975ರಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಜಾರಿಯಾದಾಗ ಅವರನ್ನು ಬಂಧಿಸಲಾಗಿತ್ತು.
ಆ ದಿನಗಳಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಪ್ರಭಾವಕ್ಕೊಳಗಾಗಿದ್ದ ರಾಜನಾಥ್ ಸಿಂಗ್, ಜೈಲಿನಿಂದ ಬಿಡುಗಡೆಗೊಳ್ಳುತ್ತಲೇ ಜಯಪ್ರಕಾಶ್ ನಾರಾಯಣ್ ಅವರು ಸ್ಥಾಪನೆ ಮಾಡಿದ ಜನತಾದಳಕ್ಕೆ ಸೇರ್ಪೆಡಗೊಂಡರು. 1977ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮಿರ್ಜಾಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.
ಮರಳಿ ಬಿಜೆಪಿಗೆ
1980ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಅವರು, 1984ರಲ್ಲಿ ಉತ್ತರ ಪ್ರದೇಶ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾದರು. 1986ರಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾದರು. 1988ರಲ್ಲಿ ಅಧ್ಯಕ್ಷರಾದರು. 1991ರಿಂದ 2000ರವರೆಗೆ ಉತ್ತರ ಪ್ರದೇಶ ಸರ್ಕಾರದಲ್ಲಿ ನಾನಾ ಇಲಾಖೆಗಳ ಸಚಿವರಾಗಿದ್ದ ಅವರು, 2001ರಿಂದ 2022ರವರೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
ರಾಜನಾಥ್ ಸಿಂಗ್ ಅವರ ಸಂಘಟನಾ ಚಾತುರ್ಯ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಎಳೆದು ತಂದಿತು. 2009ರಿಂದ 2014ರವರೆಗೆ ಉತ್ತರ ಪ್ರದೇಶದ ಗಾಜಿಯಾಬಾದ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿದ್ದ ಅವರು, ಆ ಅವಧಿಯಲ್ಲಿ ವಾಜಪೇಯಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2014ರಲ್ಲಿ ಲಖ್ನೋದಿಂದ ಸಂಸದರಾಗಿ ಆಯ್ಕೆಯಾಗಿ ಮೋದಿ ಸರ್ಕಾರದಲ್ಲಿ ಮೊದಲು ಗೃಹ ಮಂತ್ರಿಯಾಗಿದ್ದರು. 2019ರ ಚುನಾವಣೆಯ ನಂತರ ಅವರು ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.