ಆ್ಯಪ್ನಗರ

ಟಾರ್ಗೆಟ್​ ಮಾಡೋರು ಹುಷಾರಾಗಿರಿ: ಎಚ್ಚರಿಕೆಗೇ 'ಎಚ್ಚರಿಕೆ' ಕೊಟ್ಟ ಯಶ್!

ಜೊಡೆತ್ತು ಖ್ಯಾತಿ ಗಳಿಸಿರುವ ದರ್ಶನ್-ಯಶ್ ಅವರಿಬ್ಬರ ಬಗ್ಗೆ ಸಿಎಂ ಕುಮಾರಸ್ವಾಮಿಯೂ ಸೇರಿದಂತೆ ವಿರೋಧಿಗಳು ಬಹಿರಂಗವಾಗಿ ನಟ ಯಶ್ ಮತ್ತು ದರ್ಶನ್ ಅವರನ್ನು ಟೀಕಿಸಿದ್ದರು. ಅಷ್ಟೇ ಅಲ್ಲ, ಸಿಎ ಕುಮಾರಸ್ವಾಮಿ "ಜೋಡೆತ್ತುಗಳಿಗೆ ಮುಂದಿದೆ ಹಬ್ಬ" ಎಂದು ಎಚ್ಚರಿಕೆಯಂತಿರುವ ಟಾಂಗ್ ಕೂಡ ನೀಡಿದ್ದರು.

Vijaya Karnataka Web 22 Apr 2019, 7:40 pm
ಇಂಡಿಯಾ ಲೋಕಸಭೆ ಚುನಾವಣೆಯಲ್ಲಿ ಎಲ್ಲಕ್ಕಿಂತ ಮಂಡ್ಯ ಲೋಕಸಭೆ ಚುನಾವಣೆ ಎಲ್ಲರ ಗಮನ ಸೆಳೆದಿರುವುದು ಗೊತ್ತೇ ಇದೆ. ನಿಜವಾಗಿಯೂ ಹೇಳಬೇಕೆಂದರೆ, 'ಲೋಕಸಭೆ ಚುನಾವಣೆ ಇಂಡಿಯಾಗೋ ಅಥವಾ ಬರೀ ಮಂಡ್ಯಾಗೋ ಎಂಬಷ್ಟು ಕಾವು ಏರಿತ್ತು. ಅದು ಈಗಲೂ ಸಂಪೂರ್ಣ ತಣ್ಣಗಾಗಿಲ್ಲ ಎನ್ನಬಹುದು.
Vijaya Karnataka Web yash-2


ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಟಿ, ಅಂಬರೀಷ್ ಪತ್ನಿ ಸುಮಲತಾ ಅವರಿಗೆ ಬೆಂಬಲ ನೀಡಿ ಪ್ರಚಾರಕ್ಕೆ ಮಂಡ್ಯಕ್ಕೆ ಹೋಗಿದ್ದರು ನಟರಾದ ಯಶ್ ಹಾಗೂ ದರ್ಶನ್. ಈ ವೇಳೆ ಜೊಡೆತ್ತು ಖ್ಯಾತಿ ಗಳಿಸಿರುವ ದರ್ಶನ್-ಯಶ್ ಅವರಿಬ್ಬರ ಬಗ್ಗೆ ಸಿಎಂ ಕುಮಾರಸ್ವಾಮಿಯೂ ಸೇರಿದಂತೆ ವಿರೋಧಿಗಳು ಬಹಿರಂಗವಾಗಿ ನಟ ಯಶ್ ಮತ್ತು ದರ್ಶನ್ ಅವರನ್ನು ಟೀಕಿಸಿದ್ದರು. ಅಷ್ಟೇ ಅಲ್ಲ, ಸಿಎ ಕುಮಾರಸ್ವಾಮಿ "ಜೋಡೆತ್ತುಗಳಿಗೆ ಮುಂದಿದೆ ಹಬ್ಬ" ಎಂದು ಎಚ್ಚರಿಕೆಯಂತಿರುವ ಟಾಂಗ್ ಕೂಡ ನೀಡಿದ್ದರು.

ಇದೀಗ, ಸಿಎಂ ಕುಮಾರಸ್ವಾಮಿ ಹೇಳಿಕೆಗೂ ಸೇರಿದಂತೆ ವಿರೋಧಿ ಪಾಳಯಕ್ಕೆ "ನನ್ನನ್ನು ಟಾರ್ಗೆಟ್ ಮಾಡೋರು, ಹುಷಾರಾಗಿರಿ, ನಾನಂತೂ ಸುಮ್ಮನೆ ಇರುವುದಿಲ್ಲ" ಎಂದು ನಟ ಯಶ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ತಮಗೆ ಯಾರು ಏನೇ ಹೇಳಿದರೂ ಸುಮ್ಮನಿರಬೇಕಾದ ಅಗತ್ಯ ತಮಗೇನೂ ಇಲ್ಲ ಎಂದು ಯಶ್ ಸ್ಪಷ್ಟ ಪಡಿಸಿದ್ದಾರೆ ಎನ್ನಬಹುದು.

'ಅವನಿ ಫೌಂಡೇಶನ್ನಿಂದ ವಿಶ್ವ ಭೂಮಿ ದಿನ ಪ್ರಯುಕ್ತ ನಡೆದ ಸಮಾರಂಭಕ್ಕೆ ಆಗಮಿಸಿದ್ದ ಯಶ್, ಆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಚುನಾವಣೆ ವೇಳೆಯಲ್ಲಿ ಹಲವು ನಾಯಕರು ನೀಡಿದ್ದ ಹೇಳಿಕೆಗೆ ಸಂಬಂಧಪಟ್ಟತೆ ಉತ್ತರಿಸಿದ ಯಶ್ "ನನ್ನನ್ನು ಟಾರ್ಗೆಟ್ ಮಾಡುವುದು ಅಷ್ಟು ಸುಲಭವಲ್ಲ. ಅಷ್ಟೇ ಅಲ್ಲ, ನನ್ನ ನನ್ನನ್ನು ಟಾರ್ಗೆಟ್ ಮಾಡೋರು ತುಂಬಾ ಹುಷಾರಾಗಿರಬೇಕು" ಎಂದು ಹೇಳಿದ್ದಾರೆ. ಈ ಮೂಲಕ ಎದುರಾಳಿಗಳ ಎಚ್ಚರಿಕೆಗೆ ತಿರುಗೇಟು ಕೊಟ್ಟಿದ್ದಾರೆ.

ಇದೇ ವೇಳೆ ಮಾತನಾಡಿದ ನಟ ಯಶ್ " ಮಂಡ್ಯದಲ್ಲಿ ಶೇ. 80ರಷ್ಟು ಮತದಾನ ಆಗಿರುವುದು ನಿಜಕ್ಕೂ ಗ್ರೇಟ್" ಎಂದು ಹೇಳಿ ಸಂತೋಷ ವ್ಯಕ್ತ ಪಡಿಸಿದ್ದಾರೆ. ಅಂತ ತಮ್ಮ ಎದುರಾಳಿಗಳಿಗೆ ಎಚ್ಚರಿಕೆ ನೀಡಿದರು. ಇನ್ನು ಮಂಡ್ಯದಲ್ಲಿ ಶೇಕಡ 80ರಷ್ಟು ಮತದಾನ ಆಗಿರುವುದಕ್ಕೆ ಸಂತೋಷ ವ್ಯಕ್ತಪಡಿಸದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌