ಆ್ಯಪ್ನಗರ

ಸಲ್ಮಾನ್ ಖಾನ್ ಸಿನಿಮಾದಿಂದ ಹೊರನಡೆದ ಆಯುಷ್‌ ಶರ್ಮಾ; ಬಾವ-ಬಾಮೈದ ನಡುವೆ ಏನಾಯ್ತು?

ಬಾಲಿವುಡ್‌ ನಟ ಸಲ್ಮಾನ್ ಖಾನ್ ಅಭಿನಯದ 'ದಬಾಂಗ್ 3' ಮತ್ತು 'ರಾಧೆ' ಸಿನಿಮಾಗಳು ಅಂದುಕೊಂಡ ಮಟ್ಟಕ್ಕೆ ಯಶಸ್ಸು ಕಾಣಲಿಲ್ಲ. ಆದ್ದರಿಂದ ಈ ಬಾರಿ ಗೆಲ್ಲಲೇಬೇಕು ಎಂಬ ಛಲದೊಂದಿಗೆ 'ಕಭಿ ಈದ್ ಕಭಿ ದಿವಾಲಿ' ಸಿನಿಮಾಗೆ ಕೈ ಹಾಕಿದ್ದಾರೆ. ಆದರೆ ಆರಂಭದಲ್ಲೇ ಈ ಸಿನಿಮಾಗೆ ತೊಂದರೆಗಳು ಎದುರಾಗುತ್ತಿವೆ. ಈ ಸಿನಿಮಾದಲ್ಲಿ ನಟಿಸಬೇಕಿದ್ದ ಸಲ್ಮಾನ್ ಖಾನ್‌ ಅವರ ತಂಗಿ ಅರ್ಪಿತಾ ಖಾನ್ ಗಂಡ ಆಯುಷ್ ಶರ್ಮಾ, 'ಕಭಿ ಈದ್ ಕಭಿ ದಿವಾಲಿ' ಚಿತ್ರತಂಡದಿಂದ ಹೊರನಡೆದಿದ್ದಾರೆ.

Authored byಅವಿನಾಶ್ ಜಿ. ರಾಮ್ | Vijaya Karnataka Web 22 May 2022, 11:34 am

ಹೈಲೈಟ್ಸ್‌:

  • ಸಲ್ಮಾನ್ ಖಾನ್ ನಟನೆಯ 'ಕಭಿ ಈದ್ ಕಭಿ ದಿವಾಲಿ' ಸಿನಿಮಾ
  • ಈ ಸಿನಿಮಾದಲ್ಲಿ ನಟಿಸಬೇಕಿತ್ತು ಸಲ್ಮಾನ್ ತಂಗಿ ಗಂಡ ಆಯುಷ್ ಶರ್ಮಾ
  • 'ಕಭಿ ಈದ್ ಕಭಿ ದಿವಾಲಿ' ಚಿತ್ರದಿಂದ ಆಯುಷ್ ಹೊರನಡೆದಿದ್ದು ಏಕೆ?
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web aayush sharma quits salman khan pooja hegdes kabhi eid kabhi diwali movie due to creative differences
ಸಲ್ಮಾನ್ ಖಾನ್ ಸಿನಿಮಾದಿಂದ ಹೊರನಡೆದ ಆಯುಷ್‌ ಶರ್ಮಾ; ಬಾವ-ಬಾಮೈದ ನಡುವೆ ಏನಾಯ್ತು?
ಬಾಲಿವುಡ್ ನಟ ಸಲ್ಮಾನ್ ಖಾನ್ ಫುಲ್ ಆಕ್ಟೀವ್ ಆಗಿದ್ದಾರೆ. ಅವರ ಈ ಹಿಂದಿನ 'ದಬಾಂಗ್ 3' ಮತ್ತು 'ರಾಧೆ' ಸಿನಿಮಾಗಳು ಅಂದುಕೊಂಡ ಮಟ್ಟಕ್ಕೆ ಗೆದ್ದಿಲ್ಲ. ಹಾಗಾಗಿ, ಈ ಬಾರಿ ಅವರು ಗೆದ್ದೇ ಗೆಲ್ಲಬೇಕು ಎಂಬ ಹಠದೊಂದಿಗೆ 'ಕಭಿ ಈದ್ ಕಭಿ ದಿವಾಲಿ' ಸಿನಿಮಾ ಶುರು ಮಾಡಿದ್ದಾರೆ. ಆದರೆ ಈ ಸಿನಿಮಾಗೆ ಒಂದಾದ ಮೇಲೊಂದು ತೊಡಕುಗಳು ಎದುರಾಗುತ್ತಲೇ ಇವೆ. ಸಲ್ಮಾನ್ ಖಾನ್ ಅವರ ತಂಗಿ ಅರ್ಪಿತಾ ಖಾನ್‌ರ ಪತಿ ಆಯುಷ್ ಶರ್ಮಾ ಈ 'ಕಭಿ ಈದ್ ಕಭಿ ದಿವಾಲಿ' ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ ಅವರೀಗ ಸಿನಿಮಾದ ಭಾಗವಾಗಿ ಉಳಿದಿಲ್ಲ. ಕೆಲವು ಕಾರಣಗಳಿಂದಾಗಿ ಅವರು ಸಿನಿಮಾದಿಂದ ಹೊರನಡೆದಿದ್ದಾರೆ!
ಆಯುಷ್‌ ಶರ್ಮಾ ಹೊರನಡೆಯಲು ಕಾರಣವೇನು?
ಸಲ್ಮಾನ್ ಖಾನ್ ಮತ್ತು ಆಯುಷ್ ಶರ್ಮಾ ಮಧ್ಯೆ ಉತ್ತಮ ಒಡನಾಟ ಇದೆ. ಆಯುಷ್‌ಗಾಗಿ 'ಲವ್ ಯಾತ್ರಿ', 'ಅಂತಿಮ್' ಸಿನಿಮಾಗಳನ್ನು ಸಲ್ಮಾನ್ ನಿರ್ಮಾಣ ಮಾಡಿದ್ದರು. ಅಷ್ಟೇ ಅಲ್ಲದೆ, 'ಅಂತಿಮ್' ಸಿನಿಮಾದಲ್ಲಿ ಆಯುಷ್ ಜೊತೆಗೆ ತೆರೆಹಂಚಿಕೊಂಡಿದ್ದರು ಕೂಡ. ಇದೀಗ 'ಕಭಿ ಈದ್ ಕಭಿ ದಿವಾಲಿ' ಸಿನಿಮಾದಲ್ಲೂ ಸಲ್ಮಾನ್ ಜೊತೆಗೆ ಆಯುಷ್ ನಟಿಸುತ್ತಾರೆ ಎಂದು ಕಾದಿದ್ದವರಿಗೆ ನಿರಾಸೆ ಆಗಿದೆ. ಅಷ್ಟಕ್ಕೂ ಅವರು ಹೊರನಡೆಯಲು ಕಾರಣವೇನು? 'ಚಿತ್ರತಂಡವು 'ಕಭಿ ಈದ್ ಕಭಿ ದಿವಾಲಿ' ಸಿನಿಮಾದ ಶೂಟಿಂಗ್ ಆರಂಭಿಸಿದೆ. ಆದರೆ ಸಲ್ಮಾನ್ ಖಾನ್ ಫಿಲ್ಮ್ಸ್‌ ಮತ್ತು ಆಯುಷ್ ಮಧ್ಯೆ ಕೆಲವು ಕ್ರಿಯೇಟಿವ್ ಡಿಫರೆನ್ಸ್ ಉಂಟಾಗಿದೆ. ಆದ್ದರಿಂದ ಆಯುಷ್ ಈ ಸಿನಿಮಾದಿಂದ ಹೊರನಡೆಯಲು ನಿರ್ಧಾರ ಮಾಡಿದ್ದಾರೆ' ಎಂದು ಹೇಳಲಾಗಿದೆ.

ನಟ ಸಲ್ಮಾನ್ ಖಾನ್‌ ಮುಂದಿನ ತಿಂಗಳು ಸೊಸೆ ಅಲಿಜೆ ಸಿನಿಮಾ ಘೋಷಣೆ ಮಾಡಲಿದ್ದಾರಾ?
ಶೂಟಿಂಗ್ ಆರಂಭಿಸಿದ್ದ ಆಯುಷ್
'ಕಭಿ ಈದ್ ಕಭಿ ದಿವಾಲಿ' ಸಿನಿಮಾದ ಶೂಟಿಂಗ್ ಈಗಾಗಲೇ ಆರಂಭವಾಗಿದ್ದು, ಆಯುಷ್ ಕೂಡ ಮೊದಲ ದಿನ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಇಡೀ ದಿನ ಚಿತ್ರೀಕರಣದಲ್ಲಿ ಆಯುಷ್‌ ಇದ್ದರು. ಆದರೆ ಸಲ್ಮಾನ್ ಖಾನ್ ಫಿಲ್ಮ್ಸ್‌ ಮತ್ತು ಅವರ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಅಲ್ಲದೆ, 'ಅಂತಿಮ್' ಸಿನಿಮಾದಲ್ಲಿ ಇದ್ದಷ್ಟು ದೊಡ್ಡ ಪಾತ್ರ ಇಲ್ಲಿರಲಿಲ್ಲ. ಈ ಎಲ್ಲ ಕಾರಣಗಳಿಂದ ಆಯುಷ್ ಹೊರನಡೆದರು ಎನ್ನಲಾಗಿದೆ.

ಸಲ್ಮಾನ್ ಖಾನ್‌ಗೆ ಮದುವೆಯಾಗಲು ಸಮಯವಿಲ್ಲ ಎಂದ ತಂಗಿ ಅರ್ಪಿತಾ ಖಾನ್ ಗಂಡ ಆಯುಷ್ ಶರ್ಮಾ!
'ಕಭಿ ಈದ್ ಕಭಿ ದಿವಾಲಿ' ಸಿನಿಮಾ ಡೈರೆಕ್ಟರ್ ಯಾರು?
ಇನ್ನು, ಆಯುಷ್ ಹೊರನಡೆದಿರುವುದು ಮಾತ್ರವಲ್ಲ, ನಿರ್ಮಾಪಕ ಸಾಜಿದ್ ನಾದಿಯಾದ್ವಾಲಾ ಕೂಡ ನಿರ್ಮಾಣದಿಂದ ಹಿಂದೆ ಸರಿದಿದ್ದಾರೆ. ಈಗ ಸಲ್ಮಾನ್ ಖಾನ್ ಒಬ್ಬರೇ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬಂದಿದೆ. ಇದೆಲ್ಲದರ ಮಧ್ಯೆ ಈ ಸಿನಿಮಾವನ್ನು ಫರ್ಹಾದ್ ಸಾಮ್ಜಿ ನಿರ್ದೇಶನ ಮಾಡುತ್ತಾರೆ ಎಂದು ಅಧಿಕೃತ ಮಾಹಿತಿ ಕೇಳಿಬಂದಿತ್ತು. ಆದರೆ ಶೂಟಿಂಗ್ ಶುರುವಾದರೂ, ಸೆಟ್‌ ಕಡೆಗೆ ಫರ್ಹಾದ್ ತಲೆ ಹಾಕಿಲ್ಲ. ಸಹಾಯಕ ನಿರ್ದೇಶಕರ ಜೊತೆಗೆ ಸೇರಿಕೊಂಡು ಸಲ್ಮಾನ್ ಖಾನ್ ಅವರೇ ಇದರ ನಿರ್ದೇಶನ ಮಾಡುತ್ತಿದ್ದಾರೆ ಎಂಬ ಮಾತು ಕೂಡ ಕೇಳಿಬಂದಿದೆ. ಸಲ್ಮಾನ್‌ ಖಾನ್‌ಗೆ ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ. ಪೂಜಾ ಅಣ್ಣನ ಪಾತ್ರದಲ್ಲಿ ವಿಕ್ಟರಿ ವೆಂಕಟೇಶ್ ನಟಿಸುವ ಸಾಧ್ಯತೆ ಇದೆ.
ಲೇಖಕರ ಬಗ್ಗೆ
ಅವಿನಾಶ್ ಜಿ. ರಾಮ್
'ವಿಜಯ ಕರ್ನಾಟಕ' ಡಿಜಿಟಲ್ ವಿಭಾಗದಲ್ಲಿ 2019ರ ಸೆಪ್ಟೆಂಬರ್‌ನಿಂದ ಪತ್ರಕರ್ತನಾಗಿ ಅವಿನಾಶ್ ಜಿ. ರಾಮ್ ಕೆಲಸ ಮಾಡುತ್ತಿದ್ದಾರೆ. ಚಿನ್ನದ ಪದಕದೊಂದಿಗೆ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ ಕಳೆದ 10 ವರ್ಷಗಳಿಂದ ಸಿನಿಮಾ ವರದಿಗಾರರಾಗಿ ಕೆಲಸ ಮಾಡಿದ ಅನುಭವವಿದೆ. ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ನಾಲ್ಕು ವರ್ಷ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಅವಿನಾಶ್‌ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ವರದಿಗಾರಿಕೆ ಜೊತೆಗೆ ಪ್ರವಾಸ, ಓದು, ಸಂಗೀತ ಕೇಳುವುದು ಇವರ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌