ಆ್ಯಪ್ನಗರ

ಈದ್‌ ಆಚರಿಸಲು ಊರೂರು ಸುತ್ತಿದ ನವಾಜುದ್ದೀನ್ ಸಿದ್ದಿಕಿ! ಇಡೀ ಕುಟುಂಬವೇ ಈಗ ಕ್ವಾರಂಟೈನ್‌ನಲ್ಲಿ!

ಕೊರೊನಾ ವೈರಸ್‌ ಭೀತಿಯ ನಡುವೆಯೂ ಜನಪ್ರಿಯ ನಟ ನವಾಜುದ್ದೀನ್ ಸಿದ್ದಿಕಿ ದೂರ ಪ್ರಯಾಣ ಮಾಡಿದ್ದಾರೆ. ಪರಿಣಾಮವಾಗಿ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇಡೀ ಕುಟುಂಬ ಕ್ವಾರಂಟೈನ್‌ನಲ್ಲಿ ಇರಬೇಕಾಗಿದೆ.

Vijaya Karnataka Web 19 May 2020, 11:14 am
ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ಸೆಲೆಬ್ರಿಟಿಗಳು ಹೆಚ್ಚು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗುತ್ತದೆ. ಯಾಕೆಂದರೆ ಅವರನ್ನು ನೋಡಿ ಫಾಲೋ ಮಾಡುವ ಲಕ್ಷಾಂತರ ಅಭಿಮಾನಿಗಳಿರುತ್ತಾರೆ. ಆದರೆ ಅದೇಕೋ ಗೊತ್ತಿಲ್ಲ, ಲಾಕ್‌ಡೌನ್‌ ವಿಚಾರದಲ್ಲಿ ಕೆಲವು ಸಿನಿಮಾ ಕಲಾವಿದರು ಎಡವುತ್ತಿದ್ದಾರೆ.
Vijaya Karnataka Web ನವಾಜುದ್ದೀನ್ ಸಿದ್ದಿಕಿ


ಬಾಲಿವುಡ್‌ನ ಖ್ಯಾತ ನಟ ನವಾಜುದ್ದೀನ್‌ ಸಿದ್ದಿಕಿ ಈಗ ಅಂಥದ್ದೇ ಕಾರಣಕ್ಕಾಗಿ ಸುದ್ದಿ ಆಗಿದ್ದಾರೆ. ಸಿನಿಮಾ ಶೂಟಿಂಗ್‌, ಡಬ್ಬಿಂಗ್‌ ಏನೂ ಇಲ್ಲದ ಕಾರಣ ಅವರು ತಮ್ಮ ಸಂಬಂಧಿಕರ ಜೊತೆ ಈದ್‌ ಹಬ್ಬ ಆಚರಿಸುವ ಸಲುವಾಗಿ ಪ್ರಯಾಣ ಬೆಳೆಸಿದ್ದರು. ಅದೇ ಈಗ ಸಮಸ್ಯೆಗೆ ಕಾರಣ ಆಗಿದೆ. ಮನೆಮಂದಿಯೆಲ್ಲ ಕ್ವಾರಂಟೈನ್‌ನಲ್ಲಿ ಇರಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ.

ನವಾಜುದ್ದೀನ್‌ ಸಿದ್ದಿಕಿ ಕೆಲವೇ ದಿನಗಳ ಹಿಂದೆ ಮುಂಬೈನಿಂದ ಉತ್ತರ ಪ್ರದೇಶದಲ್ಲಿ ಇರುವ ತಮ್ಮ ಹಳ್ಳಿಗೆ ತೆರಳಿದ್ದರು. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಂದ ಅಗತ್ಯ ಪಾಸ್‌ಗಳನ್ನು ಪಡೆದುಕೊಂಡೇ ಅವರೇ ಪ್ರಯಾಣ ಬೆಳೆಸಿದ್ದರು. ಮೇ 15ರಂದು ಅವರು ಹಳ್ಳಿ ತಲುಪಿದ್ದರು. ವಿಷಯ ತಿಳಿಯುತ್ತಿದ್ದಂತೆ ಮುಜಾಫರ್‌ ನಗರ್‌ ಜಿಲ್ಲಾಡಳಿತವು ನವಾಜುದ್ದೀನ್‌ ಸಿದ್ದಿಕಿಗೆ ಕೊರೊನಾ ಸೋಂಕು ಪರೀಕ್ಷೆ ಮಾಡಿದೆ.

ನವಾಜುದ್ದೀನ್‌ ಸಿದ್ದಿಕಿ ಜತೆ ರೊಮ್ಯಾನ್ಸ್‌ ಮಾಡಲಿರುವ ತಮನ್ನಾ

ಪ್ರಯಾಣದ ವೇಳೆ 25 ಕಡೆಗಳಲ್ಲಿ ನವಾಜುದ್ದೀನ್‌ ಕುಟುಂಬಕ್ಕೆ ಸ್ಕ್ರೀನಿಂಗ್‌ ಮಾಡಲಾಗಿತ್ತು. ಈಗ ಕೊರೊನಾ ಸೋಂಕು ಪರೀಕ್ಷೆಯಲ್ಲೂ ಅದೃಷ್ಟವಶಾತ್‌ ನೆಗೆಟಿವ್‌ ವರದಿ ಬಂದಿದೆ. ಹಾಗಿದ್ದರೂ ಮುಂಜಾಗೃತಾ ಕ್ರಮವಾಗಿ ಮೇ 25ರವರೆಗೂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ. ನವಾಜುದ್ದೀನ್‌ ಜೊತೆ ಇಡೀ ಫ್ಯಾಮಿಲಿ ಕೂಡ ಕ್ವಾರಂಟೈನ್‌ ಆಗಬೇಕಿದೆ.

ದಲಿತನ ಪಾತ್ರದಲ್ಲಿ ನವಾಜುದ್ದೀನ್‌ ಸಿದ್ದಿಕಿ
---------------------
ಈ ಪ್ರಶ್ನೆಗೆ ಕಾಮೆಂಟ್‌ ಬಾಕ್ಸ್‌ನಲ್ಲಿ ಉತ್ತರಿಸಿ
1. ಕೊರೊನಾ ವೈರಸ್‌ ಕಡಿಮೆ ಆಗದಿದ್ದರೂ ಲಾಕ್‌ಡೌನ್‌ ಸಡಿಲಿಕೆ ಮಾಡಿರುವ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌