ಆ್ಯಪ್ನಗರ

ಕತ್ರಿನಾಗೆ ನ್ಯಾಷನಲ್ ಅವಾರ್ಡ್ ಬರಬೇಕು: ಸಲ್ಮಾನ್ ಖಾನ್

ಸಲ್ಮಾನ್ ಅವರು ಈ ಚಿತ್ರದ ನನ್ನ ನಟನೆಗೆ ನ್ಯಾಷನಲ್ ಅವಾರ್ಡ್ ಬರಬೇಕು ಎನ್ನುತ್ತಾರೆ. ಅದು ಅವರ ಪ್ರಾಮಾಣಿಕ ಅಭಿಪ್ರಾಯವೇ ಇರಬಹುದು. ಏಕೆಂದರೆ, ಅವರು ಶೂಟಿಂಗ್‌ನಲ್ಲಿ ಜೊತೆಗೇ ಇದ್ದವರು. ಫೇಸ್‌ ಟು ಫೇಸ್ ಎಲ್ಲವನ್ನೂ ನೋಡಿದವರು. ಹೀಗಾಗಿ ಅವರಿಗೆ ಹಾಗೆ ಖಂಡಿತ ಅನ್ನಿಸಿರಲೂಬಹುದು.

TIMESOFINDIA.COM 26 May 2019, 5:31 pm
ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಇದೀಗ ತಮ್ಮ ಭಾರತ್ ಚಿತ್ರದ ಪ್ರಮೋಶನ್‌ ಕಾರ್ಯದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರವು ಸದ್ಯದಲ್ಲೇ ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರತಂಡವು ಭಾರಿ ಎಂಬಂತೆ ಪ್ರಚಾರ ನಡೆಸುತ್ತಿದೆ. ಸಲ್ಮಾನ್-ಕತ್ರಿನಾ ಮುಖ್ಯ ಭೂಮಿಕೆಯ ಈ ಚಿತ್ರದಲ್ಲಿ ದಿಶಾ ಪಠಾಣಿ, ಜಾಕಿ ಶ್ರಾಫ್ ಮುಂತಾದವರು ಸಹ ನಟಿಸಿದ್ದಾರೆ. ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ಈ ಚಿತ್ರವು ಕೋರಿಯನ್ ಸಿನಿಮಾ 'ಓಡ್‌ಟು ದ ಫಾದರ್' ರೀಮೇಕ್ ಎನ್ನಲಾಗಿದೆ.
Vijaya Karnataka Web sallu-katrina2605


ಚಿತ್ರದ ಪ್ರಮೋಶನ್ ವೇಳೆ ನಾಯಕ ಸಲ್ಮಾನ್ ಖಾನ್ "ಈ ಚಿತ್ರದ ನಟನೆಗಾಗಿ ನಟಿ ಕತ್ರಿನಾ ಕೈಫ್ ಅವರಿಗೆ 'ನ್ಯಾಷನಲ್ ಅವಾರ್ಡ್' ಕೊಡಬೇಕು. ಅಷ್ಟು ಚೆನ್ನಾಗಿ ಕತ್ರಿನಾ ನಟಿಸಿದ್ದಾರೆ ಎಂದಿದ್ದಾರೆ". ಈ ಬಗ್ಗೆ ಮಾತನಾಡಿರುವ ಸಲ್ಮಾನ್ ಖಾನ್ ಅವರು "ಈ ಚಿತ್ರದ ನಟನೆಗೆ ನಿಮಗೆ ನ್ಯಾಷನಲ್ ಬರಬೇಕು ಎಂದು ಹೇಳಿದರೆ ಕತ್ರಿನಾ ಅದು ನಾನು ಮಾಡುತ್ತಿರುವ ಜೋಕ್ ಎನ್ನುತ್ತಾಳೆ. ನಾನು ಸತ್ಯವನ್ನೇ ನುಡಿದರೂ ಸಹ ಅವಳು ಒಪ್ಪುತಿಲ್ಲ. ನಿನ್ನ ಮಾತನ್ನು ಯಾರಾದರೂ ಕೇಳಿದರೆ ಖಂಡಿತ ಇದು ಜೋಕ್ ಎಂದುಕೊಳ್ಳುತ್ತಾರೆ ಎಂದಿದ್ದಾರೆ ಕತ್ರಿನಾ" ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

ಆದರೆ, ಈ ಬಗ್ಗೆ ಮಾತನಾಡಿರುವ ಕತ್ರಿನಾ" ಸಲ್ಮಾನ್ ಅವರು ಈ ಚಿತ್ರದ ನನ್ನ ನಟನೆಗೆ ನ್ಯಾಷನಲ್ ಅವಾರ್ಡ್ ಬರಬೇಕು ಎನ್ನುತ್ತಾರೆ. ಅದು ಅವರ ಪ್ರಾಮಾಣಿಕ ಅಭಿಪ್ರಾಯವೇ ಇರಬಹುದು. ಏಕೆಂದರೆ, ಅವರು ಶೂಟಿಂಗ್‌ನಲ್ಲಿ ಜೊತೆಗೇ ಇದ್ದವರು. ಫೇಸ್‌ ಟು ಫೇಸ್ ಎಲ್ಲವನ್ನೂ ನೋಡಿದವರು. ಹೀಗಾಗಿ ಅವರಿಗೆ ಹಾಗೆ ಖಂಡಿತ ಅನ್ನಿಸಿರಲೂಬಹುದು. ಆದರೆ ನನ್ನ ನಟನೆಯನ್ನು ಮೆಚ್ಚಿ ಅಂಥ ಒಂದು ಅಭಿಪ್ರಾಯಕ್ಕೆ ಬರಬೇಕಾದವರು ಪ್ರೇಕ್ಷಕರು. ಪ್ರೇಕ್ಷಕರು ಮೆಚ್ಚಿ ಸಿನಿಮಾ ಚೆನ್ನಾಗಿ ಓಡಿದರೆ, ನನಗೆ ನ್ಯಾಷನಲ್ ಅವಾರ್ಡ್ ದೊರೆತರೆ ನನಗೂ ಖುಷಿಯೇ" ಎಂದಿದ್ದಾರೆ.

ಒಟ್ಟಿನಲ್ಲಿ, ಭಾರತ್ ಚಿತ್ರಕ್ಕೆ ಮೊದಲು ಸಲ್ಮಾನ್ ಎದುರು ನಾಯಕಿಯಾಗಿ ಆಯ್ಕೆಯಾಗಿದ್ದು ನಟಿ ಪ್ರಿಯಾಂಕಾ ಚೋಪ್ರಾ. ಆದರೆ, ಅದ್ಯಾಕೋ ಗೊತ್ತಿಲ್ಲ, ಪ್ರಿಯಾಂಕಾ ಹೊರಹೋಗಿ, ಆ ಜಾಗಕ್ಕೆ ಕತ್ರಿನಾ ಕೈಫ್ ಬಂದು ಇದೀಗ ಭಾರತ್ ಚಿತ್ರದ ಶೂಟಿಂಗ್ ಸಹ ಮುಗಿದು ಪ್ರಚಾರಕಾರ್ಯ ನಡೆಯುತ್ತಿದೆ. ಸಲ್ಮಾನ್ ಖಾನ್ ಹೇಳಿರುವಂತೆ, ಈ ಚಿತ್ರದ ನಟನೆಗೆ ಕತ್ರಿನಾಗೆ ನ್ಯಾಷನಲ್ ಅವಾರ್ಡ್ ಬಂದರೆ ಕತ್ರಿನಾ ಸೇರಿದಂತೆ ಅವರ ಎಲ್ಲ ಅಭಿಮಾನಿಗಳಿಗೆ ಖಂಡಿತವಾಗಿಯೂ ಖುಷಿಯಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌