ಆ್ಯಪ್ನಗರ

ನಟ, ಗಾಯಕ ಹಿಮೇಶ್ ರೇಶ್ಮಿಯಾ ಕಾರು ಅಪಘಾತ ನಿಜವೇ?

ನಟ, ಗಾಯಕ, ಸಂಗೀತ ನಿರ್ದೇಶಕ ಹಿಮೇಶ್ ರೇಶ್ಮಿಯಾ ಕಾರು ಅಪಘಾತಕ್ಕೀಡಾಗಿದೆ ಎಂಬ ಸುದ್ದಿ ಬಾಲಿವುಡ್‌ನಲ್ಲಿ ಹಬ್ಬಿದ್ದು ಈ ಬಗ್ಗೆ ಸ್ವತಃ ಅವರೇ ಪ್ರತಿಕ್ರಿಯಿಸಿದ್ದಾರೆ. ಅಪಘಾತಕ್ಕೀಡಾದ ಕಾರಿನಲ್ಲಿ ನಾನು ಇರಲ್ಲಿಲ್ಲ. ನಾನು ಕ್ಷೇಮವಾಗಿದ್ದೇನೆ ಎಂದಿದ್ದಾರೆ.

Vijaya Karnataka Web 2 Jul 2019, 5:37 pm
ಬಾಲಿವುಡ್ ನಟ, ಗಾಯಕ, ಸಂಗೀತ ನಿರ್ದೇಶಕ ಹಿಮೇಶ್ ರೇಷ್ಮಿಯಾ ಕಾರು ಅಪಘಾತಕ್ಕೀಡಾಗಿದೆ ಎಂಬ ಸುದ್ದಿ ಬಾಲಿವುಡ್‌ನಲ್ಲಿ ಭಾರಿ ಸದ್ದು ಮಾಡಿದ್ದು ಅವರ ಅಭಿಮಾನಿಗಳ ಆತಂಕಕ್ಕೂ ಕಾರಣವಾಗಿತ್ತು. ಈ ಬಗ್ಗೆ ಸ್ವತಃ ಹಿಮೇಶ್ ಸ್ಪಷ್ಟೀಕರಣ ನೀಡಿದ್ದಾರೆ. ಕಾರು ಅಪಘಾತ ಸುದ್ದಿಯನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ ಹಿಮೇಶ್.
Vijaya Karnataka Web himesh


"ಅಪಘಾತವಾಗಿರುವ ಕಾರಿನಲ್ಲಿ ನಾನು ಇರಲಿಲ್ಲ. ಈ ಕಾರನ್ನು ನನ್ನ ತಂದೆಯ ಚಾಲಕರು ಓಡಿಸುತ್ತಿದ್ದರು. ಅವರಿಗೂ ಏನೂ ಆಗಿಲ್ಲ ಕ್ಷೇಮವಾಗಿದ್ದಾರೆ. ಘಟನೆಯಲ್ಲಿ ಅವರ ಕಾಲಿಗೆ ಗಾಯವಾಗಿದ್ದು ಸದ್ಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದಿದ್ದಾರೆ.

"ಶೀಘ್ರದಲ್ಲೇ ಅವರು ಕರ್ತವ್ಯಕ್ಕೆ ಮರಳಲಿದ್ದಾರೆ. ಕಾರಿನಿಂದ ಇಳಿಯಬೇಕಾದರೆ ಇನ್ನೊಂದು ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ನಮ್ಮ ಕಾರು ಸಹ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿದೆ" ಎಂದಿದ್ದಾರೆ.

"ನಾನು ಕ್ಷೇಮವಾಗಿದ್ದೇನೆ. ನನಗೇನು ಆಗಿಲ್ಲ. ನನಗೆ ಅಪಘಾತವಾಗಿದೆ ಎಂಬುದು ಸುಳ್ಳು" ಎಂದಿದ್ದಾರೆ. ಮುಂಬೈ-ಪುಣೆ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಹಿಮೇಶ್ ರೇಶ್ಮಿಯಾ ಗಾಯಗೊಂಡಿದ್ದಾರೆ, ಅವರ ಕಾರು ಅಪಘಾತಕ್ಕೀಡಾಗಿದೆ ಎಂಬ ಸುದ್ದಿ ಹರಿದಾಡಿತ್ತು.

ಆಶಿಕ್ ಬನಾಯಾ ಅಪ್ನೆ, ಝಲಕ್ ದಿಕ್ಲಾಜಾ, ನಾಮ್ ಹೈ ತೇರಾ, ತೇರಾ ಸುರೂರ್ ಮತ್ತು ಆಪ್ ಕಿ ಕಾಶಿಶ್‍ನಂತಹ ಹಲವಾರು ಹಿಟ್ ಹಾಡುಗಳು ಹಿಮೇಶ್ ರೇಶ್ಮಿಯಾ ಕಂಠಸಿರಿಯಲ್ಲಿ ಮೂಡಿಬಂದಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌