ಆ್ಯಪ್ನಗರ

ಮಕ್ಕಳ ಆನ್‌ಲೈನ್ ಶಿಕ್ಷಣಕ್ಕಾಗಿ ಹಸು ಮಾರಿದ ವ್ಯಕ್ತಿಯನ್ನು ಹುಡುಕುತ್ತಿರುವ ಸೋನು ಸೂದ್‌!

ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಸಾವಿರಾರು ಬಡವರಿಗೆ ಆಸರೆಯಾಗಿ ನಿಂತಿದ್ದಾರೆ ನಟ ಸೋನು ಸೂದ್‌. ಈಗಾಗಲೇ ಅನೇಕ ವಲಸೆ ಕಾರ್ಮಿಕರು ಊರು ಸೇರುವಂತೆ ಮಾಡುವಲ್ಲಿ ಅವರ ಶ್ರಮ ಅಪಾರವಾದದ್ದು. ಇದೀಗ ಅವರು ಹಸು ಮಾರಾಟ ಮಾಡಿದ ವ್ಯಕ್ತಿಯನ್ನು ಹುಡುಕುತ್ತಿದ್ದಾರೆ.

Vijaya Karnataka Web 24 Jul 2020, 10:59 pm
ವಲಸೆ ಕಾರ್ಮಿಕರ ಪಾಲಿನ 'ರಿಯಲ್ ಹೀರೋ' ಸೋನು ಸೂದ್ ಈಗಾಗಲೇ ಹಲವಾರು ಸಾಮಾಜಿಕ ಕೆಲಸಗಳನ್ನು ಮಾಡಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಅನೇಕ ವಲಸೆ ಕಾರ್ಮಿಕರು ಹುಟ್ಟೂರು ಸೇರುವಂತೆ ಮಾಡಿದ್ದಾರೆ. ಇದೀಗ ಅವರು ಓರ್ವ ವ್ಯಕ್ತಿಯ ಹುಡುಕಾಟಕ್ಕೆ ಮುಂದಾಗಿದ್ದಾರೆ. ಯಾರಿಗಾದರೂ, ಆ ವ್ಯಕ್ತಿಯ ವಿಳಾಸ ಗೊತ್ತಿದ್ದರೆ ನನಗೆ ತಿಳಿಸಿ ಎಂದಿದ್ದಾರೆ. ಅಷ್ಟಕ್ಕೂ ಅವರು ಹುಡುಕುತ್ತಿರುವ ಆ ವ್ಯಕ್ತಿ ಯಾರು? ಆ ಕುರಿತು ಮಾಹಿತಿ ಇಲ್ಲಿದೆ.
Vijaya Karnataka Web actor sonu sood wants to help the man who sold his cow for children education
ಮಕ್ಕಳ ಆನ್‌ಲೈನ್ ಶಿಕ್ಷಣಕ್ಕಾಗಿ ಹಸು ಮಾರಿದ ವ್ಯಕ್ತಿಯನ್ನು ಹುಡುಕುತ್ತಿರುವ ಸೋನು ಸೂದ್‌!


ಹಿಮಾಚಲ ಪ್ರದೇಶದ ಕುಲ್‌ದೀಪ್‌ಕುಮಾರ್‌ ಈಚೆಗೆ ತಮ್ಮ ಮಕ್ಕಳಿಗಾಗಿ ಹಸುವನ್ನು ಮಾರಿದ್ದರು. ಈಗ ಎಲ್ಲೆಡೆ ಕೊರೊನಾ ಮಹಾಮಾರಿ ರಣಕೇಕೆ ಹಾಕುತ್ತಿರುವುದರಿಂದ ಶಾಲೆಗಳನ್ನು ಬಂದ್ ಮಾಡಲಾಗಿದೆ. ಆದ್ದರಿಂದ ಮಕ್ಕಳಿಗೆ ಆನ್‌ಲೈನ್ ಮೂಲಕವೇ ಶಿಕ್ಷಣ ನೀಡುವುದಕ್ಕೆ ಶಿಕ್ಷಕರು ನಿರ್ಧಾರ ಮಾಡಿದ್ದಾರೆ. ಆದರೆ, ಆನ್‌ಲೈನ್‌ ಮೂಲಕ ಶಿಕ್ಷಣ ಪಡೆಯುವುದಕ್ಕೆ ಕುಲ್‌ದೀಪ್ ಮಕ್ಕಳ ಬಳಿ ಸ್ಮಾರ್ಟ್ ಫೋನ್ ಇಲ್ಲ. ಫೋನ್ ಕೊಳ್ಳಬೇಕೆಂದರೆ, ಕನಿಷ್ಠ 6 ಸಾವಿರ ರೂ.ಗಳಾದರೂ ಅವರಿಗೆ ಬೇಕಾಗಿತ್ತು. ಅದಕ್ಕಾಗಿ ಅವರಿವರ ಬಳಿ ಕುಲ್‌ದೀಪ್‌ ಸಾಲ ಕೇಳಿದ್ದಾರೆ.

ಎಲ್ಲಿಯೂ ಸಾಲ ದೊರಕದೇ ಹೋದಾಗ ಕೊನೆಗೆ ತನ್ನ ಬಳಿ ಇದ್ದ ಹಸುವನ್ನು 6 ಸಾವಿರ ರೂ,ಗಳಿಗೆ ಮಾರಿ ಸ್ಮಾರ್ಟ್ ಫೋನ್ ತೆಗೆದುಕೊಂಡಿದ್ದರು. ಕುಲ್‌ದೀಪ್‌ ಮಗಳು ಅನು 4ನೇ ಕ್ಲಾಸ್ ಓದುತ್ತಿದ್ದರೆ, ಮಗ ವನ್ಷ್‌ 2ನೇ ಕ್ಲಾಸ್‌ ಕಲಿಯುತ್ತಿದ್ದಾನೆ. ಹಸು ನೀಡುತ್ತಿದ್ದ ಹಾಲನ್ನು ಕುಲ್‌ದೀಪ್‌ ಮಾರಾಟ ಮಾಡುತ್ತಿದ್ದರಂತೆ. ಇದರಿಂದ ಕುಟುಂಬಕ್ಕೆ ಆರ್ಥಿಕ ಸಹಾಯವಾಗುತ್ತಿತ್ತು. ಆದರೆ, ಈಗ ಮಕ್ಕಳ ಶಿಕ್ಷಣಕ್ಕಾಗಿ ಹಸುವನ್ನೇ ಮಾರಾಟ ಮಾಡಲಾಗಿದೆ. ಈ ವಿಚಾರ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

ಬಾಲಿವುಡ್‌ನಲ್ಲಿ ನಟ ಸೋನು ಸೂದ್‌ ಬಯೋಪಿಕ್‌ಗೆ ಸಿದ್ಧತೆ! ಇದರ ಹೀರೋ ಯಾರು?

ಇದನ್ನು ಕಂಡ ನಟ ಸೋನು ಸೂದ್ ಮನಸ್ಸಿಗೆ ಬೇಸರವಾಗಿದೆ. ಕೂಡಲೇ ಅವರು ಟ್ವೀಟ್ ಮಾಡಿ, 'ಈತನಿಗೆ ಹಸುವನ್ನು ಮರಳಿ ಕೊಡಿಸಬೇಕು. ಯಾರಾದರೂ, ಈತನ ಬಗ್ಗೆ ಮಾಹಿತಿ ಇದ್ದರೆ ನೀಡಿ' ಎಂದಿದ್ದಾರೆ. ಸೋನು ಅವರ ಟ್ವೀಟ್ ನೋಡುತ್ತಿದ್ದಂತೆಯೇ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಈಗಾಗಲೇ ಅನೇಕ ಒಳ್ಳೆಯ ಕೆಲಸ ಮಾಡಿರುವ ಸೋನು ಬಗ್ಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಕೆಲ ದಿನಗಳ ಹಿಂದಷ್ಟೇ ಅವರು ಮುಂಬೈ ಪೊಲೀಸರ ಸುರಕ್ಷತೆಯ ದೃಷ್ಟಿಯಿಂದ 25 ಸಾವಿರ ಫೇಸ್‌ ಶೀಲ್ಡ್‌ಗಳನ್ನು ನೀಡಿದ್ದರು.

ವಾರಿಯರ್ ಅಜ್ಜಿಗೆ ನಟ ರಿತೇಶ್ ದೇಶ್‌ಮುಖ್ ನೆರವಾದ್ರೆ, ಸೋನು ಸೂದ್ ಮಾಸ್ಟರ್ ಪ್ಲ್ಯಾನ್ ಮಾಡಿದ್ರು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌