ಆ್ಯಪ್ನಗರ

ರಾಮನಾದ ಪ್ರಭಾಸ್‌ಗೆ ಸೀತೆ ಆಗ್ತಾರಾ ಅನುಷ್ಕಾ ಶರ್ಮಾ? ಪ್ರೆಗ್ನೆನ್ಸಿ ಬಳಿಕ ಇನ್ನೊಂದು ಸಿಹಿ ಸುದ್ದಿ!

ಪ್ರಭಾಸ್‌ ನಟಿಸಲಿರುವ ಬಹುಕೋಟಿ ವೆಚ್ಚದ 'ಆದಿಪುರುಷ್‌' ಚಿತ್ರಕ್ಕೆ ನಾಯಕಿ ಯಾರು ಎಂಬ ಬಗ್ಗೆ ಹಲವು ಗಾಸಿಪ್‌ಗಳು ಕೇಳಿಬರುತ್ತಿವೆ. ಈ ನಡುವೆ ನಟಿ ಅನುಷ್ಕಾ ಶರ್ಮಾ ಜೊತೆ ನಿರ್ದೇಶಕರು ಒಂದು ಸುತ್ತಿನ ಮಾತುಕತೆ ಮುಗಿಸಿದ್ದಾರೆ ಎನ್ನಲಾಗುತ್ತಿದೆ.

Vijaya Karnataka Web 11 Sep 2020, 6:05 pm
ನಟಿ ಅನುಷ್ಕಾ ಶರ್ಮಾ ಸದ್ಯದಲ್ಲೇ ನಟನೆಯಿಂದ ಬ್ರೇಕ್‌ ತೆಗೆದುಕೊಳ್ಳುತ್ತಾರೆ ಎಂದು ಎಲ್ಲರೂ ಊಹಿಸಿದ್ದರು. ಯಾಕೆಂದರೆ ಅವರು ತಾಯಿ ಆಗುತ್ತಿದ್ದಾರೆ ಎಂಬ ಸುದ್ದಿ ಕೆಲವೇ ದಿನಗಳ ಹಿಂದೆ ಹೊರಬಿದ್ದಿತ್ತು. ಆದರೆ ಅದರ ನಡುವೆಯೂ ಈಗ ಇನ್ನೊಂದು ಗುಸುಗುಸು ಕೇಳಿಬಂದಿದೆ. ಬಿಗ್‌ ಬಜೆಟ್‌ನ 'ಆದಿಪುರುಷ್‌' ಚಿತ್ರಕ್ಕೆ ಅವರೇ ನಾಯಕಿ ಆಗುವ ಸಾಧ್ಯತೆ ದಟ್ಟವಾಗಿದೆ.
Vijaya Karnataka Web ಅನುಷ್ಕಾ ಶರ್ಮಾ, ಪ್ರಭಾಸ್‌


ಪ್ರಭಾಸ್‌ ನಾಯಕತ್ವದ 'ಆದಿಪುರುಷ್‌' ಚಿತ್ರದ ತಾರಾಗಣದ ಬಗ್ಗೆ ಭಾರಿ ಕುತೂಹಲ ನಿರ್ಮಾಣ ಆಗಿದೆ. ರಾಮಾಯಣದ ಕಥೆ ಆಧರಿಸಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಪ್ರಭಾಸ್‌ ರಾಮನ ಪಾತ್ರ ಮಾಡಲಿದ್ದಾರೆ. ಲಂಕೇಶನಾಗಿ ಸೈಫ್‌ ಅಲಿ ಖಾನ್‌ ನಟಿಸುವುದು ಖಚಿತ ಆಗಿದೆ. ಹಾಗಾದರೆ ಸೀತೆ ಯಾರು ಎಂಬ ಪ್ರಶ್ನೆ ಸಿನಿಪ್ರಿಯರ ತಲೆಯಲ್ಲಿ ಕೊರೆಯುತ್ತಿದೆ. ಈ ಮೊದಲು ಕೀರ್ತಿ ಸುರೇಶ್‌ ಹೆಸರು ಕೇಳಿಬಂದಿತ್ತು. ಆದರೆ ಈಗ ಅನುಷ್ಕಾ ಶರ್ಮಾ ಬಗ್ಗೆ ಹೊಸ ಸುದ್ದಿ ಕೇಳಿಬರುತ್ತಿದೆ.

ನಿರ್ದೇಶಕ ಓಂ ರಾವುತ್‌ ಅವರು ಈಗಾಗಲೇ ಅನುಷ್ಕಾ ಶರ್ಮಾ ಅವರನ್ನು ಭೇಟಿ ಮಾಡಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಅನುಷ್ಕಾ ಕೂಡ ಒಪ್ಪಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಅದೆಲ್ಲ ಸರಿ, ಈಗ ಪ್ರೆಗ್ನೆಂಟ್‌ ಆಗಿರುವ ಅನುಷ್ಕಾ ಈ ಸಿನಿಮಾದಲ್ಲಿ ನಟಿಸಲು ಸಾಧ್ಯವೇ? ಈ ಪ್ರಶ್ನೆ ಮೂಡುವುದು ಸಹಜ. ಮಗುವಿಗೆ ಜನ್ಮ ನೀಡಿದ ಕೇವಲ ಎರಡೇ ತಿಂಗಳ ಬಳಿಕ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲು ಅನುಷ್ಕಾ ಸಿದ್ಧರಿದ್ದಾರೆ ಎನ್ನುತ್ತಿವೆ ಮೂಲಗಳು.

also read: ಪ್ರಭಾಸ್‌ 'ಆದಿಪುರುಷ್‌' ಚಿತ್ರದ ಗ್ರಾಫಿಕ್ಸ್‌ಗೆ 250 ಕೋಟಿ ರೂ.! ಹಾಗಾದರೆ ಪೂರ್ತಿ ಸಿನಿಮಾ ಬಜೆಟ್‌ ಎಷ್ಟು?

ಚಿತ್ರೀಕರಣವನ್ನು ಆದಷ್ಟು ಬೇಗ ಮುಗಿಸಬೇಕು ಎಂದುಕೊಂಡಿದೆ ಚಿತ್ರತಂಡ. ಅನುಷ್ಕಾ ಇಲ್ಲದ ದೃಶ್ಯಗಳನ್ನು ಮೊದಲು ಚಿತ್ರಿಸಿಕೊಳ್ಳಲು ನಿರ್ದೇಶಕರು ಪ್ಲ್ಯಾನ್‌ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಅನುಷ್ಕಾ ಕಡೆಯಿಂದ ಗ್ರೀನ್‌ ಸಿಗ್ನಲ್‌ ಸಿಗದಿದ್ದರೆ ಮತ್ತೋರ್ವ ಬಾಲಿವುಡ್‌ ಬೆಡಗಿ ಕಿಯಾರಾ ಅಡ್ವಾಣಿಗೆ ಮಣೆ ಹಾಕಲಾಗುವುದು ಎಂಬ ಸುದ್ದಿಯೂ ಹರಿದಾಡುತ್ತಿದೆ. ಅಂತಿಮವಾಗಿ ಸೀತೆಯ ಪಾತ್ರ ಮಾಡುವ ಅವಕಾಶ ಯಾರಿಗೆ ಸಿಗಲಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಸಿನಿಪ್ರಿಯರಲ್ಲಿ ಮೂಡಿದೆ.

also read: 7 ಸಾವಿರ ವರ್ಷಗಳ ಹಿಂದಿನ ಬುದ್ಧಿವಂತ ರಾಕ್ಷಸನಾದ ಸೈಫ್! 'ಆದಿಪುರುಷ'ನ ಅಂಗಳಕ್ಕೆ ಲಂಕೇಶ ಎಂಟ್ರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌