ಆ್ಯಪ್ನಗರ

ಪುಣ್ಯ, ನಾವಿಬ್ಬರೂ ಆಗ ದೂರ ದೂರ ಆಗಲಿಲ್ಲ: ನಟಿ ದೀಪಿಕಾ ಪಡುಕೋಣೆ!

ಬಹು ಬೇಡಿಕೆಯ ನಟಿ ದೀಪಿಕಾ ಪಡುಕೋಣೆ ಅವರು ಲಾಕ್‌ಡೌನ್ ಟೈಮ್‌ನಲ್ಲಿ ದೇವರಿಗೆ ಧನ್ಯವಾದ ತಿಳಿಸಿದ್ದಾರಂತೆ. ಇನ್ನು ರಣವೀರ್ ಸಿಂಗ್ ಜೊತೆಗೆ ಅವರಿಗೆ ಹೆಚ್ಚಿನ ಸಮಯ ಕಳೆಯಲು ಅವಕಾಶ ಕೂಡ ಸಿಕ್ಕಿದೆ.

THE TIMES OF INDIA NEWS SERVICE 26 Nov 2020, 9:40 pm
ನಟಿ ದೀಪಿಕಾ ಪಡುಕೋಣೆ ಪ್ರಸ್ತುತ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್‌ಡೌನ್ ಟೈಮ್‌ನಲ್ಲಿ ದೀಪಿಕಾ ಅವರು ಪತಿ ರಣ್‌ವೀರ್ ಸಿಂಗ್ ಜೊತೆಗೆ ಏಳು ತಿಂಗಳು ಸಮಯ ಕಳೆದಿದ್ದರು. ಈ ಬಗ್ಗೆ ಅವರು ಮೊದಲ ಬಾರಿಗೆ ಮಾತನಾಡಿದ್ದಾರೆ.
Vijaya Karnataka Web actress deepika padukone spend time with ranveer singh
ಪುಣ್ಯ, ನಾವಿಬ್ಬರೂ ಆಗ ದೂರ ದೂರ ಆಗಲಿಲ್ಲ: ನಟಿ ದೀಪಿಕಾ ಪಡುಕೋಣೆ!


ಲಾಕ್‌ಡೌನ್ ಟೈಮ್‌ನಲ್ಲಿ ದೀಪಿಕಾಗೆ ಒಳ್ಳೆಯದಾಗಿದ್ದೇನು?

ಕೊರೊನಾ ವೈರಸ್‌ ಸೋಂಕಿನಿಂದಾಗಿ ಇಡೀ ರಾಷ್ಟ್ರಕ್ಕೆ ರಾಷ್ಟ್ರವೇ ಲಾಕ್‌ಡೌನ್ ಆಗಿತ್ತು. ಎಲ್ಲರೂ ಮನೆಯಲ್ಲಿ ಕೂರುವ ಪರಿಸ್ಥಿತಿ ಬಂದಿತ್ತು. ಮದುವೆಯ ನಂತರ ಪತಿ ರಣವೀರ್ ಸಿಂಗ್ ಜೊತೆಗೆ ಹೆಚ್ಚಿನ ಸಮಯ ಕಳೆಯಲು ಅವಕಾಶ ಸಿಕ್ಕಿದ್ದಕ್ಕಾಗಿ ದೀಪಿಕಾ ತುಂಬ ಖುಷಿಯಾಗಿದ್ದಾರಂತೆ. ಕೆಟ್ಟದ್ದರಲ್ಲೂ ಕೂಡ ದೀಪಿಕಾಗೆ ಈ ವಿಷಯದಲ್ಲಿ ಮಾತ್ರ ಒಳ್ಳೆಯದ್ದಾಗಿದೆ ಅಂತ ಅನಿಸಿದೆಯಂತೆ.

ದೇವರಿಗೆ ಯಾಕೆ ದೀಪಿಕಾ ಧನ್ಯವಾದ ತಿಳಿಸಿದರು?
ಲಾಕ್‌ಡೌನ್ ಅನೇಕರಿಗೆ ಕಷ್ಟವನ್ನುಂಟು ಮಾಡಿದೆ. ಎಲ್ಲರಿಗೂ ಮನೆಯಲ್ಲಿ ಕುಟುಂಬಸ್ಥರ ಜೊತೆ ಹೆಚ್ಚಿನ ಸಮಯ ಕಳೆಯಲು ಅವಕಾಶ ಸಿಕ್ಕಿದ್ದಕ್ಕಾಗಿ ದೀಪಿಕಾ ತುಂಬ ಸಂತಸಪಟ್ಟಿದ್ದಾರೆ. ಹೀಗಾಗಿ ಈ ವರ್ಷ ಒಂದು ಲೆಕ್ಕದಲ್ಲಿ ಅವರಿಗೆ ಒಳ್ಳೆಯದು ಅಂತ ಅನಿಸಿದೆ. ರಣವೀರ್ ಹಾಗೂ ದೀಪಿಕಾ ಬೇರೆ ಬೇರೆ ಸ್ಥಳದಲ್ಲಿದ್ದಾಗ ಲಾಕ್‌ಡೌನ್ ಘೋಷಣೆಯಾಗಲಿಲ್ಲ ಅಂತ ದೀಪಿಕಾ ದೇವರಿಗೆ ಧನ್ಯವಾದ ತಿಳಿಸಿದ್ದಾರಂತೆ.

Also read-ಗೋವಾದಲ್ಲಿ ತಪ್ಪು ಮಾಡಿದ ಕರಣ್‌ ಜೋಹರ್‌ & ದೀಪಿಕಾ? ಬೇಜವಾಬ್ದಾರಿ ಕೆಲಸ ಕಂಡು ಕಂಗನಾ ಗರಂ!

ಕಪಿಲ್ ದೇವ್ ಬಯೋಪಿಕ್‌ನಲ್ಲಿ ದೀಪಿಕಾ, ರಣವೀರ್!

ಲಾಕ್‌ಡೌನ್‌ನಿಂದಾಗಿ ದೀಪಿಕಾ ಹಾಗೂ ರಣವೀರ್ ಒಟ್ಟಾಗಿ ಹೆಚ್ಚಿನ ಸಮಯ ಕಳೆದಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ದೀಪಿಕಾ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದು, ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡಿದ್ದರು. ಈಗ ದೀಪಿಕಾ ಹಾಗೂ ರಣವೀರ್ ಕೆಲಸದ ಕಡೆಗೆ ಗಮನ ನೀಡುತ್ತಿದ್ದಾರೆ. ಕಬೀರ್ ಖಾನ್ ಅವರ '83' ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಕಪಿಲ್ ದೇವ್ ಅವರ ಬಯೋಪಿಕ್ ಇದಾಗಿದ್ದು, ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ನಟಿಸಿದ್ದಾರೆ, ರೋಮಿ ದೇವ್ ಪಾತ್ರದಲ್ಲಿ ದೀಪಿಕಾ ನಟಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ ಕೂಡ ಈ ಚಿತ್ರಕ್ಕೆ ಸಹ ನಿರ್ಮಾಣ ಮಾಡಿದ್ದಾರೆ. ಸಿದ್ದಾರ್ಥ್ ಆನಂದ್ ಅವರ 'ಪಠಾಣ್' ಸಿನಿಮಾದಲ್ಲಿ ನಟ ಶಾರುಖ್ ಖಾನ್, ಜಾನ್ ಅಬ್ರಹಾಂ ದೀಪಿಕಾ ಅಭಿನಯಿಸುತ್ತಿದ್ದಾರೆ.

Also Read-ನಟಿ ದೀಪಿಕಾ ಪಡುಕೋಣೆ ಮ್ಯಾನೇಜರ್‌ ಮನೆ ಮೇಲೆ NCB ಅಧಿಕಾರಿಗಳ ದಾಳಿ! ಪತ್ತೆಯಾಯ್ತು ಡ್ರಗ್ಸ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌