ಆ್ಯಪ್ನಗರ

ನಾನು ಮಾಡಿದ್ದು ಸರಿಯಾಗಿಯೇ ಇದೆ : ಕಂಗನಾ ರಣಾವತ್

"ಆ ಘಟನೆ ನಡೆದ ತಕ್ಷಣ, ಆ ಬಗ್ಗೆ ಆಳವಾಗಿ ಚಿಂತಿಸುವವರ ಮನಸ್ಥಿತಿ ಅಂತಹ ಸ್ಟೇಟ್‌ಮೆಂಟ್ ಕೊಡುವ ರೀತಿಯಲ್ಲಿಯೇ ಸಹಜವಾಗಿ ಇರುತ್ತದೆ. ಅದಕ್ಕೆ ನಾನು ಕೂಡ ಹೊರತಲ್ಲ. ಪುಲ್ವಾಮಾದಲ್ಲಿ ನಡೆದಿದ್ದು ನಿಜವಾಗಿಯೂ ಅಮಾನವೀಯತೆ ಮತ್ತು ಕ್ರೂರತನದ ಪರಮಾವಧಿ. ಅದನ್ನು ಖಂಡಿಸುವುದಕ್ಕೆ ಯಾವ ಪದವೂ ಸಾಲದು" ಎಂದಿದ್ದಾರೆ ಕಂಗನಾ.

Vijaya Karnataka Web 3 Mar 2019, 10:07 am
ನಟಿ ಕಂಗನಾ ರಣಾವತ್ ಮತ್ತೆ ಗರಮ್ ಆಗಿದ್ದಾರೆ. ಇತ್ತೀಚಿಗೆ ಪುಲ್ವಾಮಾದಲ್ಲಿ ಭಾರತೀಯ ಸೈನಿಕರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 44 ಸೈನಿಕರು ಹುತಾತ್ಮರಾದ ದುರಂತ ಘಟನೆಯ ಬಗ್ಗೆ ಕಂಗನಾ ಕ್ರೋಧದಿಂದ ಟ್ವೀಟ್ ಮಾಡಿದ್ದಾರೆ. ಆದರೆ, ಆ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಚರ್ಚೆಗೆ ಕಾರಣವಾಗಿತ್ತು. ಕೆಲವರು ಕಂಗನಾ ಅವರ ದೇಶಪ್ರೇಮವನ್ನೇ ಕೆಣಕಿದ್ದರು. ಇದರಿಂದ ಕೆಂಡಾಮಂಡಲವಾದ ಕಂಗನಾ "ನಾನು ಮಾಡಿದ್ದು ಸರಿ, ನಿಮ್ಮನ್ನು ನೀವು ಪರೀಕ್ಷಿಸಿಕೊಳ್ಳಿ" ಎಂದು ಹೇಳುವ ಮೂಲಕ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ.
Vijaya Karnataka Web kangana0303


ಫೆಬ್ರವರಿ 14, 2019ರಂದು ಪುಲ್ವಾಮಾದಲ್ಲಿ ಭಾರತೀಯ ಯೋಧರ ಮೇಲೆ ನಡೆದ ದಾಳಿಯ ಬಗ್ಗೆ ಟ್ವೀಟ್ ಮಾಡಿದ್ದ ಕಂಗನಾ ಅವರು "ಪಾಕಿಸ್ತಾನ ಬ್ಯಾನ್ ಮಾಡುವುದು ಪರಿಹಾರವಲ್ಲ; ನಾಶ ಮಾಡುವುದು ಸರಿಯಾದ ಪರಿಹಾರ" ಎಂದು ಟ್ವೀಟ್ ಮಾಡಿದ್ದರು. ಈ ಸೆನ್ಸೇಷನಲ್ ಎನ್ನಬಹುದಾದ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಾದ-ವಿವಾದಕ್ಕೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ಪ್ರಶ್ನಿಸಿ ಕೆಲವರು ಮಾಡಿದ್ದ ಕಾಮೆಂಟ್ಸ್‌ ಗಳಿಗೆ ಕಂಗನಾ ತಕ್ಕ ಪ್ರತಿಕ್ರಿಯೆ ಕೊಟ್ಟಿದ್ದಾರೆ.

"ಆ ಘಟನೆ ನಡೆದ ತಕ್ಷಣ, ಆ ಬಗ್ಗೆ ಆಳವಾಗಿ ಚಿಂತಿಸುವವರ ಮನಸ್ಥಿತಿ ಅಂತಹ ಸ್ಟೇಟ್‌ಮೆಂಟ್ ಕೊಡುವ ರೀತಿಯಲ್ಲಿಯೇ ಸಹಜವಾಗಿ ಇರುತ್ತದೆ. ಅದಕ್ಕೆ ನಾನು ಕೂಡ ಹೊರತಲ್ಲ. ಪುಲ್ವಾಮಾದಲ್ಲಿ ನಡೆದಿದ್ದು ನಿಜವಾಗಿಯೂ ಅಮಾನವೀಯತೆ ಮತ್ತು ಕ್ರೂರತನದ ಪರಮಾವಧಿ. ಅದನ್ನು ಖಂಡಿಸುವುದಕ್ಕೆ ಯಾವ ಪದವೂ ಸಾಲದು. ಸದ್ಯದ ಪರಿಸ್ಥಿತಿಯಲ್ಲಿ ಪಾಕಿಸ್ತಾನ ತೋರುತ್ತಿರುವ ಭಯೋತ್ಪಾದನೆಗೆ ನನಗೆ ತೋಚಿರುವುದು ಅದೊಂದೇ ಪರಿಹಾರ. ಸ್ವಲ್ಪ ಸಮಯ ಕೊಡಿ, ಇನ್ನೇನಾದರೂ ಪರಿಹಾರ ಕಂಡರೆ ನಿಮಗೆ ಹೇಳುತ್ತೇನೆ. ಅಲ್ಲಿಯವರೆಗೆ ಬೇಕಾದರೆ, ನೀವು ಹೀಗೇ ನನ್ನ ಬಗ್ಗೆ ಮಾತನಾಡುತ್ತಲೇ ಇರಬಹುದು, ನನಗೇನೂ ತೊಂದರೆಯಿಲ್ಲ" ಎಂದಿದ್ದಾರೆ ನಟಿ ಕಂಗನಾ ರಣಾವತ್.

ಅಷ್ಟೇ ಅಲ್ಲ, ನಟಿ ಕಂಗನಾ ಅವರು ದೇಶಭಕ್ತಿ ವಿಷಯಕ್ಕೆ ಬಂದಾಗ ತುಂಬಾ ನೇರವಾಗಿ ಮಾತನಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಪುಲ್ವಾಮಾ ದಾಳಿಯನ್ನು ದೇಶಭಕ್ತೆ ಖ್ತಾತಿಯ ಕಂಗನಾ ಅದೆಷ್ಟು ಸೀರಿಯಸ್‌ ಆಗಿ ತೆಗೆದುಕೊಂಡಿದ್ದಾರೆ ಎಂದರೆ "ದೇಶದ ಗಡಿಗೆ ಹೋಗಿ ಯಾರದ್ದಾದರೂ ಗನ್ ಕಸಿದುಕೊಂಡು ಪಾಕಿಸ್ತಾನವನ್ನು ನಾನೇ ಮುಗಿಸಿ ಬಿಡಬೇಕು ಎಂದೇ ಈಗಲೂ ನನಗೆ ಅನ್ನಿಸುತ್ತಿದೆ" ಎಂದು ಹೇಳುವ ಮೂಲಕ ಇನ್ನೂ ಹೆಚ್ಚಿನ ಧೈರ್ಯವನ್ನು ಪ್ರದರ್ಶಿಸಿದ್ದಾರೆ ಬಾಲಿವುಡ್ ಬೆಡಗಿ ಕಂಗನಾ ರಣಾವತ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌