ಆ್ಯಪ್ನಗರ

ನಿರ್ದೇಶಕನಿಂದ ಕಿರುಕುಳ ಆದಾಗ ನನಗೆ ಸಹಾಯ ಮಾಡಿದ್ದೇ ಸಂಜಯ್‌ ದತ್‌: ನಟಿ ಮಹಿಮಾ ಚೌಧರಿ!

ಸಂಜಯ್‌ ದತ್‌ ಕ್ಯಾನ್ಸರ್‌ನಿಂದ ಬಳಲುತ್ತಿರುವ ವಿಷಯ ಗೊತ್ತಾದ ಬೆನ್ನಲ್ಲೇ ಮತ್ತೊಂದು ಸುದ್ದಿ ಹೊರಬಿದ್ದಿದೆ. ಅವರಿಗೆ ಸಂಬಂಧಿಸಿದ ಹಳೇ ಘಟನೆಯ ಬಗ್ಗೆ ನಟಿ ಮಹಿಮಾ ಚೌಧರಿ ಈಗ ಬಾಯಿ ಬಿಟ್ಟಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ...

Vijaya Karnataka Web 12 Aug 2020, 11:23 am
ನಟ ಸಂಜಯ್‌ ದತ್‌ ಅವರ ಬದುಕು ಸಖತ್‌ ವರ್ಣರಂಜಿತವಾಗಿದೆ. ಅನೇಕ ಏಳು-ಬೀಳುಗಳನ್ನು ಕಂಡಿರುವ ಅವರ ಬಗ್ಗೆ ಆರಂಭದ ದಿನಗಳಲ್ಲಿ ಅನೇಕ ಇಂಟರೆಸ್ಟಿಂಗ್‌ ಗಾಸಿಪ್‌ಗಳು ಕೇಳಿಬರುತ್ತಿದ್ದವು. ಅವರ ಜೀವನದ ಮುಖ್ಯ ಸಂಗತಿಗಳನ್ನು ಇಟ್ಟುಕೊಂಡು ನಿರ್ದೇಶಕ ರಾಜ್‌ಕುಮಾರ್‌ ಹಿರಾನಿ ಅವರು ಬಯೋಪಿಕ್‌ (ಸಂಜು) ಕೂಡ ಮಾಡಿದ್ದರು. ಆ ಚಿತ್ರ ಸೂಪರ್‌ ಹಿಟ್‌ ಆಯಿತು.
Vijaya Karnataka Web actress mahima chaudhry says sanjay dutt stood by her when subhash ghai bullied her
ನಿರ್ದೇಶಕನಿಂದ ಕಿರುಕುಳ ಆದಾಗ ನನಗೆ ಸಹಾಯ ಮಾಡಿದ್ದೇ ಸಂಜಯ್‌ ದತ್‌: ನಟಿ ಮಹಿಮಾ ಚೌಧರಿ!


ಸಂಜಯ್‌ ದತ್‌ ಅವರ ರಿಯಲ್‌ ಲೈಫ್‌ ವ್ಯಕ್ತಿತ್ವದ ಬಗ್ಗೆ ಗೊತ್ತಿರದ ಅನೇಕ ಸತ್ಯಗಳು ಇನ್ನೂ ಬೇಕಾದಷ್ಟಿವೆ. ಆ ಪೈಕಿ ಒಂದು ಸಂಗತಿಯನ್ನು ನಟಿ ಮಹಿಮಾ ಚೌಧರಿ ನೆನಪಿಸಿಕೊಂಡಿದ್ದಾರೆ. ನಿರ್ದೇಶಕ ಸುಭಾಷ್‌ ಘಾಯ್‌ ಅವರಿಂದ ಮಹಿಮಾ ಚೌಧರಿಗೆ ತುಂಬ ಕಿರುಕುಳ ಆಗಿತ್ತಂತೆ. ಆಗ ಅವರಿಗೆ ಸಹಾಯ ಮಾಡಿದ ಕೆಲವೇ ಕೆಲವರಲ್ಲಿ ಸಂಜಯ್‌ ದತ್‌ ಕೂಡ ಒಬ್ಬರು ಎಂಬುದನ್ನು ಮಹಿಮಾ ಈಗ ಹೇಳಿಕೊಂಡಿದ್ದಾರೆ. ಅಂದಿನ ಪರಿಸ್ಥಿತಿ ಹೇಗಿತ್ತು ಎಂಬುದನ್ನೂ ಅವರು ವಿವರಿಸಿದ್ದಾರೆ.

1997ರಲ್ಲಿ ಶಾರುಖ್‌ ಖಾನ್‌ ನಟನೆಯ 'ಪರ್ದೇಸ್‌' ಚಿತ್ರಕ್ಕೆ ನಾಯಕಿ ಆಗುವ ಮೂಲಕ ಬಾಲಿವುಡ್‌ಗೆ ಕಾಲಿಟ್ಟರು ಮಹಿಮಾ ಚೌಧರಿ. ಆ ಚಿತ್ರಕ್ಕೆ ನಿರ್ದೇಶನ ಮಾಡಿದ್ದವರು ಸುಭಾಷ್‌ ಘಾಯ್‌. ನಂತರದ ದಿನಗಳಲ್ಲಿ ಅದೇ ಸುಭಾಷ್‌ ಅವರು ಮಹಿಮಾಗೆ ಕಿರುಕುಳ ನೀಡಲು ಆರಂಭಿಸಿದರಂತೆ. 'ಸುಳ್ಳು ಕಾಂಟ್ರ್ಯಕ್ಟ್‌ನ ನೆಪ ಹೇಳಿ ಅವರು ನನ್ನ ವೃತ್ತಿಜೀವನಕ್ಕೆ ಅಡ್ಡಗಾಲು ಹಾಕಿದರು. ಆಗ ನನ್ನ ಸಹಾಯಕ್ಕೆ ಬಂದಿದ್ದು ಸಂಜಯ್‌ ದತ್‌, ಡೇವಿಡ್‌ ಧವನ್‌, ರಾಜ್‌ಕುಮಾರ್‌ ಸಂತೋಷಿ ಮತ್ತು ಸಲ್ಮಾನ್‌ ಖಾನ್‌ ಮಾತ್ರ' ಎಂದು ಮಹಿಮಾ ಹೇಳಿದ್ದಾರೆ.

also read: 3ನೇ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಸಂಜಯ್‌ ದತ್‌ಗೆ ಧೈರ್ಯ ತುಂಬಿದ ಯುವರಾಜ್‌ ಸಿಂಗ್‌!

ಬಾಲಿವುಡ್‌ ಅಂಗಳದಲ್ಲಿ ಜೋರಾಗಿರುವ ಇನ್‌ಸೈಡರ್‌ ವರ್ಸಸ್‌ ಔಟ್‌ಸೈಡರ್‌ ಚರ್ಚೆಯಲ್ಲಿ ಮಹಿಮಾ ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ವೇಳೆ ಅವರು ಹಳೇ ಘಟನೆಯನ್ನು ಮೆಲುಕು ಹಾಕಿದ್ದಾರೆ. 'ಒಂದು ವೇಳೆ ನಾನು ಕೂಡ ಇನ್‌ಸೈಡರ್‌ ಆಗಿದ್ದರೆ ನನಗೆ ಇಂಥ ಕಿರುಕುಳು ಆಗುತ್ತಿರಲಿಲ್ಲ' ಎಂದು ಅವರು ಹೇಳಿದ್ದಾರೆ. ಸಂಜಯ್‌ ದತ್‌ ವಿಚಾರಕ್ಕೆ ಬರುವುದಾದರೆ, ಮಂಗಳವಾರ (ಆ.11) ಅವರಿಗೆ ಶ್ವಾಸಕೋಶದ ಕ್ಯಾನ್ಸರ್‌ ಇರುವುದು ಬಹಿರಂಗ ಆಗಿದೆ. ಅಮೆರಿಕದಲ್ಲಿ ಅವರು ಚಿಕಿತ್ಸೆ ಪಡೆಯಲಿದ್ದಾರೆ.

also read: 'ಕೆಜಿಎಫ್‌ 2' ಸಿನಿಮಾದ ಅಧೀರ ಪಾತ್ರಧಾರಿ ಬಾಲಿವುಡ್ ನಟ ಸಂಜಯ್ ದತ್‌ಗೆ ಕ್ಯಾನ್ಸರ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌