ಆ್ಯಪ್ನಗರ

ಮಾಂಸಾಹಾರ ತ್ಯಜಿಸಿದ 'ಅಭಿನವ ಸೀತೆ' ನಯನತಾರಾ

ವಿಜಯ್‌ ನಟನೆಯ ನನ್ಬನ್‌ ಮತ್ತು ಅಜಿತ್‌ ನಟನೆಯ ನೆರ್ಕೊಂಡ ಪಾರ್ವೈ ಸಿನಿಮಾಗಳಂತೆ ಮೂಕುಥಿ ಅಮ್ಮನ್‌ ಸಿನಿಮಾವೂ ಸಮಾಜಕ್ಕೆ ಒಂದು ಪ್ರಬಲ ಸಂದೇಶ ಕೊಡಲಿದೆ ಎಂದು ಅವರು ವಿವರಿಸಿದ್ದಾರೆ. ಈ ಭಕ್ತಿಪ್ರಧಾನ ಸಿನಿಮಾ ಮುಂದಿನ ವರ್ಷ ತೆರೆ ಕಾಣಲಿದೆ.

Vijaya Karnataka 20 Nov 2019, 8:12 pm
ಮುಂಬರುವ 'ಮೂಕುಥಿ ಅಮ್ಮನ್‌' ಸಿನಿಮಾಗಾಗಿ ನಟಿ ನಯನತಾರಾ ಮಾಂಸಾಹಾರ ತ್ಯಜಿಸಿ ಸಂಪೂರ್ಣ ಸಸ್ಯಾಹಾರವನ್ನು ರೂಢಿಸಿಕೊಂಡಿದ್ದಾರೆ. ಈ ಸಿನಿಮಾದ ಶೂಟಿಂಗ್‌ ಮುಗಿಯುವವರೆಗೆ ಅವರು ಮಾಂಸಾಹಾರ ಸೇವಿಸುವುದಿಲ್ಲ ಎಂದು ಈ ಸಿನಿಮಾದ ನಿರ್ದೇಶಕ ಆರ್‌ಜೆ ಬಾಲಾಜಿ ಹೇಳಿದ್ದಾರೆ.
Vijaya Karnataka Web ನಯನತಾರಾ


ಮೂಕುಥಿ ಅಮ್ಮನ್‌ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸುತ್ತಿರುವ ನಯನತಾರಾ ಈ ಮೊದಲು ರಾಮರಾಜ್ಯಂ ಸಿನಿಮಾದಲ್ಲಿ ಸೀತಾ ದೇವಿಯ ಪಾತ್ರ ಮಾಡಿದ್ದಾಗಲೂ ಮಾಂಸಾಹಾರ ತ್ಯಜಿಸಿದ್ದರು. ಈ ಸಿನಿಮಾದಲ್ಲಿ ನಾಯಕರಾಗಿಯೂ ನಟಿಸುತ್ತಿರುವ ಆರ್‌ಜೆ ಬಾಲಾಜಿ, ಈ ಸಿನಿಮಾದ ಇಡೀ ತಂಡವೇ ಈ ಸಿನಿಮಾ ಮುಗಿಯುವವರೆಗೆ ಮಾಂಸಾಹಾರ ಸೇವಿಸದಿರಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

'ಸೈರಾ' ಸಿನಿಮಾಗಾಗಿ ನಟಿ ನಯನತಾರಾ ಎಣಿಸಿದ್ದೆಷ್ಟು ಗೊತ್ತಾ?

ವಿಜಯ್‌ ನಟನೆಯ ನನ್ಬನ್‌ ಮತ್ತು ಅಜಿತ್‌ ನಟನೆಯ ನೆರ್ಕೊಂಡ ಪಾರ್ವೈ ಸಿನಿಮಾಗಳಂತೆ ಮೂಕುಥಿ ಅಮ್ಮನ್‌ ಸಿನಿಮಾವೂ ಸಮಾಜಕ್ಕೆ ಒಂದು ಪ್ರಬಲ ಸಂದೇಶ ಕೊಡಲಿದೆ ಎಂದು ಅವರು ವಿವರಿಸಿದ್ದಾರೆ. ಈ ಭಕ್ತಿಪ್ರಧಾನ ಸಿನಿಮಾ ಮುಂದಿನ ವರ್ಷ ತೆರೆ ಕಾಣಲಿದೆ.

ರಜನಿಕಾಂತ್ 'ದರ್ಬಾರ್‌' ಭಂಗ ಮಾಡಲಿರುವ ಸುನಿಲ್ ಶೆಟ್ಟಿ!

ಈ ಹಿಂದೆ ಅನ್ನಮಯ್ಯ, ನಮೋ ವೆಂಕಟೇಶಾಯದಂತಹ ಭಕ್ತಿ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸುವಾಗ ಟಾಲಿವುಡ್ ಹೀರೋ ನಾಗಾರ್ಜುನ ಸೇರಿದಂತೆ ಇಡೀ ಚಿತ್ರತಂಡ ಸೆಟ್‌ನಲ್ಲಿ ಪಾದರಕ್ಷೆಯನ್ನೇ ಬಳಸಲಿಲ್ಲವಂತೆ. ಸದ್ಯಕ್ಕೆ ನಯನತಾರಾ ಸಹ ಅಂತಹದ್ದೇ ದೃಢ ನಿರ್ಧಾರಕ್ಕೆ ಬಂದಿದ್ದಾರಂತೆ.

ಮಾಂಸಾಹಾರಕ್ಕೆ ದೂರವಾಗಿ ಇರುವುದಷ್ಟೇ ಅಲ್ಲದೆ ಉಪವಾಸ ಸಹ ಮಾಡಬೇಕೆಂದು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಚಿತ್ರತಂಡದಿಂದ ಹೊರಬಿದ್ದಿದೆ. ಕ್ರಿಶ್ಚಿಯನ್ ಆಗಿದ್ದರೂ ಹಿಂದೂ ದೇವತೆಯ ಪಾತ್ರ ಪೋಷಿಸುವಾಗ ಇಷ್ಟೆಲ್ಲಾ ನಿಯಮ ನಿಷ್ಠೆಗಳನ್ನು ಪಾಲಿಸುತ್ತಿರುವ ನಯನತಾರಾ ಸಮರ್ಪಣಾ ಭಾವ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌