ಆ್ಯಪ್ನಗರ

ನಿನ್ನ ಗಂಡ ಪಾಕಿಸ್ತಾನಿ, ಭಯೋತ್ಪಾದಕ ಎಂದವರಿಗೆ ಸರಿಯಾದ ಉತ್ತರ ಕೊಟ್ಟ ನಟಿ ಊರ್ಮಿಳಾ ಮಾತೋಂಡ್ಕರ್!

ನಟಿ ಹಾಗೂ ರಾಜಕಾರಣಿ ಊರ್ಮಿಳಾ ಮಾತೋಡ್ಕರ್ ಅವರ ಗಂಡನನ್ನು ಭಯೋತ್ಪಾದಕ, ಪಾಕಿಸ್ತಾನಿ ಅಂತೆಲ್ಲ ಕರೆದು ಟ್ರೋಲ್ ಮಾಡಲಾಗುತ್ತಿದೆ. ಗಂಡನ ಕುಟುಂವನ್ನು ಕೂಡ ಟಾರ್ಗೆಟ್ ಮಾಡಲಾಗಿದೆ. ಈ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

THE TIMES OF INDIA NEWS SERVICE 20 Dec 2020, 12:15 pm
ನಟಿ-ರಾಜಕಾರಣವಿ ಊರ್ಮಿಳಾ ಮಾತೋಂಡ್ಕರ್ ಅವರ ಗಂಡ ಮೊಹ್ಸಿನ್ ಖಾನ್ ಹಾಗೂ ಅವರ ಕುಟುಂಬ ಬಗ್ಗೆ ಸದಾ ಟ್ರೋಲ್ ಆಗುತ್ತಿರುತ್ತದೆ. ಇನ್ನು ಊರ್ಮಿಳಾ ಅವರ ವಿಕಿಪೀಡಿಯ ಪೇಜ್‌ನ್ನು ಕೂಡ ಹಾಳು ಮಾಡಿದ್ದಾರೆ. ಇನ್ನು ಅವರ ಪಾಲಕರ ಹೆಸರನ್ನು ಕೂಡ ಬದಲಾಯಿಸಿದ್ದಾರೆ. ಈ ಬಗ್ಗೆ ನಟಿ ಮೌನ ಮುರಿದಿದ್ದಾರೆ.
Vijaya Karnataka Web actress urmila reacts on trolls that her husband being called pakistani terrorist
ನಿನ್ನ ಗಂಡ ಪಾಕಿಸ್ತಾನಿ, ಭಯೋತ್ಪಾದಕ ಎಂದವರಿಗೆ ಸರಿಯಾದ ಉತ್ತರ ಕೊಟ್ಟ ನಟಿ ಊರ್ಮಿಳಾ ಮಾತೋಂಡ್ಕರ್!


ನಾನು ತೆಳ್ಳಗಿಲ್ಲ: ಊರ್ಮಿಳಾ ಮಾತೋಂಡ್ಕರ್

ಹೆಣ್ಣುಮಕ್ಕಳು ತುಂಬ ಸೂಕ್ಷ್ಮಮತಿಗಳು ಎಂದು ನಂಬಿರುವ ಊರ್ಮಿಳಾರನ್ನು ಯಾರಾದರೂ ಸಣ್ಣಗಿದ್ದೀರಾ ಎಂದರೆ ಒಪ್ಪುವುದಿಲ್ಲವಂತೆ ಮತ್ತು ಅವರನ್ನು ಅವರೇ ತೆಳ್ಳಗಿದ್ದೇನೆ ಅಂತ ಕರೆದುಕೊಳ್ಳುವುದಿಲ್ಲವಂತೆ. ಇನ್ನು ನನ್ನ ಚರ್ಮ ಸುಂದರವಾಗಿದೆ ಎಂದು ಅವರೇ ಹೇಳಿದ್ದಾರೆ.

ನನ್ನ ಗಂಡನನ್ನು ಭಯೋತ್ಪಾದಕ ಅಂತ ಹೇಳಿದ್ರು!
'ನನ್ನ ಗಂಡನನ್ನು ಪಾಕಿಸ್ತಾನಿ, ಭಯೋತ್ಪಾದಕ ಎಂದು ಕರೆಯಲಾಯ್ತು. ಈ ರೀತಿ ಮಾತನಾಡೋದಿಕ್ಕೂ ಒಂದು ಲಿಮಿಟ್ ಇರುತ್ತದೆ. ನನ್ನ ವಿಕಿಪೀಡಿಯ ಪೇಜ್ ಹಾಳು ಮಾಡಿದ್ದಾರೆ. ನನ್ನ ತಂದೆಯ ಹೆಸರನ್ನು ಶಿವಿಂದರ್ ಸಿಂಗ್, ತಾಯಿಯ ಹೆಸರನ್ನು ರುಕ್ಷಾನಾ ಅಂತ ಬದಲಾಯಿಸಿದ್ದಾರೆ. ಈ ಹೆಸರು ಇರುವ ವ್ಯಕ್ತಿಗಳು ಭಾರತದಲ್ಲಿಯೇ ಇರಬಹುದು, ಆದರೆ ನನಗೆ ಗೊತ್ತಿಲ್ಲ. ನನ್ನ ತಂದೆ ಶ್ರೀಕಾಂತ್ ಮಾತೋಂಡ್ಕರ್, ತಾಯಿ ಸುನೀತಾ ಮಾತೋಂಡ್ಕರ್' ಎಂದು ಊರ್ಮಿಳಾ ಹೇಳಿದ್ದಾರೆ.

ನಮ್ಮಿಬ್ಬರ ಧರ್ಮವನ್ನು ಪಾಲಿಸುತ್ತೇವೆ!

'ನನ್ನ ಗಂಡ ಕೇವಲ ಮುಸ್ಲಿಂ ಅಲ್ಲ, ಕಾಶ್ಮೀರಿ ಮುಸ್ಲಿಂ. ನಾವಿಬ್ಬರೂ ನಮ್ಮ ಧರ್ಮವನ್ನು ಪಾಲಿಸುತ್ತೇವೆ. ಇದು ನಮ್ಮನ್ನು ಟ್ರೋಲ್ ಮಾಡಲು ದೊಡ್ಡ ದಾರಿ ಮಾಡಿಕೊಟ್ಟಿದೆ. ಅಷ್ಟೇ ಅಲ್ಲದೆ ನನ್ನ ಗಂಡ ಹಾಗೂ ಆತನ ಕುಟುಂವನ್ನು ಟಾರ್ಗೆಟ್ ಮಾಡಲಾಗಿದೆ. ಇದು ನಿಜಕ್ಕೂ ದುರದೃಷ್ಟಕರ' ಎಂದು ಊರ್ಮಿಳಾ ಹೇಳಿದ್ದಾರೆ.

ಊರ್ಮಿಳಾ ಮದುವೆಗೆ ಕೆಲವೇ ಕೆಲವರು ಹಾಜರ್!
ಊರ್ಮಿಳಾ ಹಾಹೂ ಮೋಹ್ಸಿನ್ ಖಾನ್ ಅವರು 2016ರ ಮಾರ್ಚ್ ತಿಂಗಳಲ್ಲಿ ಮದುವೆಯಾಗಿದ್ದರು. ಈ ಮದುವೆಗೆ ಕೆಲವೇ ಕೆಲವು ಮಂದಿ ಆಗಮಿಸಿದ್ದರು. ಈ ಮದುವೆಗೆ ಡಿಸೈನರ್ ಮನೀಶ್ ಮಲ್ಹೋತ್ರಾ ಬಿಟ್ಟರೆ ಯಾವೊಬ್ಬ ಸೆಲೆಬ್ರಿಟಿಯೂ ಬಂದಿರಲಿಲ್ಲ.

Also Read-ಕಾಂಗ್ರೆಸ್ ಪಕ್ಷ ತೊರೆದು ಶಿವ ಸೇನಾ ಸೇರಿಕೊಂಡ ನಟಿ ಊರ್ಮಿಳಾ ಮಾತೋಂಡ್ಕರ್!

ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಊರ್ಮಿಳಾ 1991ರಲ್ಲಿ 'ನರಸಿಂಹ' ಚಿತ್ರದ ಮೂಲಕ ನಾಯಕಿಯಾಗಿ ಪರಿಚಿತರಾದರು. 'ರಂಗೀಲಾ', 'ಜುಡಾಯಿ', 'ಸತ್ಯ', 'ಕೌನ್', 'ಪ್ಯಾರ್ ತುನೆ ಕ್ಯಾ ಕಿಯಾ', 'ಭೂತ್ & ಏಕ್ ಹಸಿನಾ ಥಿ' ಚಿತ್ರದ ಮೂಲಕ ಖ್ಯಾತಿ ಪಡೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌