ಅಮೀರ್ ಮಗ ರಾಮ, ಐಶ್ವರ್ಯಾ ರೈ ಮಗಳು ಸೀತೆ!
ಇದೇ ಭಾನುವಾರ ಶಾಲೆಯ ವಾರ್ಷಿಕೋತ್ಸವ ನಡೆಯಿತು. ಈ ಕಾರ್ಯಕ್ರಮದಲ್ಲಿ ಆಜಾದ್, ಆರಾಧ್ಯ ತನ್ನ ಸ್ನೇಹಿತರ ಜತೆಗೆ ರಾಮಾಯಣ ನಾಟಕವನ್ನು ಪ್ರದರ್ಶಿಸಿದರು.
Times Now 13 Nov 2018, 3:18 pm
ಸ್ಟಾರ್ ಕಿಡ್ಸ್ಗೆ ಇರುವ ಜನಪ್ರಿಯತೆ ಬಗ್ಗೆ ಬಿಡಿಸಿ ಹೇಳಬೇಕಾಗಿಲ್ಲ. ಅವರು ಎಲ್ಲಿಗೆ ಹೋದರೂ, ಏನೇ ಮಾಡಿದರೂ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತದೆ. ಈಗಾಗಲೆ ಕರೀನಾ-ಸೈಫ್ ಪುತ್ರ ತೈಮೂರ್, ಶಾರುಖ್-ಗೌರಿ ಮಕ್ಕಳಾದ ಸುಹಾನಾ, ಆರ್ಯನ್, ಅಬ್ರಾಮ್, ಐಶ್-ಅಭಿಷೇಕ್ ಮಗಳು ಆರಾಧ್ಯಾ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.
ಇದೀಗ ಐಶ್ವರ್ಯಾ ರೈ ಪುತ್ರಿ ಆರಾಧ್ಯ, ಅಮೀರ್ ಖಾನ್ ಮಗ ಆಜಾದ್ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಅವರಿಬ್ಬರೂ ಧೀರುಭಾಯ್ ಅಂತಾರಾಷ್ಟ್ರೀಯ ಪಾಠಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಇತ್ತೀಚೆಗೆ ಇಬ್ಬರೂ ಅಭಿನಿಯಿಸಿರುವ ನಾಟಕದ ದೃಶ್ಯಗಳು ಎಲ್ಲರ ಗಮನಸೆಳೆದಿವೆ.
ಇದೇ ಭಾನುವಾರ ಶಾಲೆಯ ವಾರ್ಷಿಕೋತ್ಸವ ನಡೆಯಿತು. ಈ ಕಾರ್ಯಕ್ರಮದಲ್ಲಿ ಆಜಾದ್, ಆರಾಧ್ಯ ತನ್ನ ಸ್ನೇಹಿತರ ಜತೆಗೆ ರಾಮಾಯಣ ನಾಟಕವನ್ನು ಪ್ರದರ್ಶಿಸಿದರು. ಈ ನಾಟಕದಲ್ಲಿ ಆಜಾದ್ ರಾಮನ ಪಾತ್ರ ಪೋಷಿಸಿದರೆ, ಆರಾಧ್ಯ ಸೀತೆಯ ಪಾತ್ರದಲ್ಲಿ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅವರಿಬ್ಬರೂ ನಾಟಕದಲ್ಲಿ ಅಭಿನಯಿಸುತ್ತಿರುವ ವೀಡಿಯೋವನ್ನು ಅಭಿಮಾನಿಗಳು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಹಾಗಾಗಿ ಆ ವೀಡಿಯೋ, ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ತಂದೆತಾಯಿ ರೀತಿಯಲ್ಲೇ ಆರಾಧ್ಯ, ಆಜಾದ್ ಸಹ ಬಣ್ಣದ ಜಗತ್ತಿಗೆ ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ತನ್ನ ಮಗಳು ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿಕೊಂಡರೂ ತಾನು ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಈ ಹಿಂದೊಮ್ಮೆ ಐಶ್ವರ್ಯಾ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದೀಗ ಐಶ್ವರ್ಯಾ ರೈ ಪುತ್ರಿ ಆರಾಧ್ಯ, ಅಮೀರ್ ಖಾನ್ ಮಗ ಆಜಾದ್ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಅವರಿಬ್ಬರೂ ಧೀರುಭಾಯ್ ಅಂತಾರಾಷ್ಟ್ರೀಯ ಪಾಠಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಇತ್ತೀಚೆಗೆ ಇಬ್ಬರೂ ಅಭಿನಿಯಿಸಿರುವ ನಾಟಕದ ದೃಶ್ಯಗಳು ಎಲ್ಲರ ಗಮನಸೆಳೆದಿವೆ.
ಇದೇ ಭಾನುವಾರ ಶಾಲೆಯ ವಾರ್ಷಿಕೋತ್ಸವ ನಡೆಯಿತು. ಈ ಕಾರ್ಯಕ್ರಮದಲ್ಲಿ ಆಜಾದ್, ಆರಾಧ್ಯ ತನ್ನ ಸ್ನೇಹಿತರ ಜತೆಗೆ ರಾಮಾಯಣ ನಾಟಕವನ್ನು ಪ್ರದರ್ಶಿಸಿದರು. ಈ ನಾಟಕದಲ್ಲಿ ಆಜಾದ್ ರಾಮನ ಪಾತ್ರ ಪೋಷಿಸಿದರೆ, ಆರಾಧ್ಯ ಸೀತೆಯ ಪಾತ್ರದಲ್ಲಿ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅವರಿಬ್ಬರೂ ನಾಟಕದಲ್ಲಿ ಅಭಿನಯಿಸುತ್ತಿರುವ ವೀಡಿಯೋವನ್ನು ಅಭಿಮಾನಿಗಳು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಹಾಗಾಗಿ ಆ ವೀಡಿಯೋ, ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ತಂದೆತಾಯಿ ರೀತಿಯಲ್ಲೇ ಆರಾಧ್ಯ, ಆಜಾದ್ ಸಹ ಬಣ್ಣದ ಜಗತ್ತಿಗೆ ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ತನ್ನ ಮಗಳು ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿಕೊಂಡರೂ ತಾನು ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಈ ಹಿಂದೊಮ್ಮೆ ಐಶ್ವರ್ಯಾ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.