ಆ್ಯಪ್ನಗರ

ಮಂಗಳಮುಖಿಯಾಗಿ ಅಭಿಮಾನಿಗಳನ್ನು ಬೆಚ್ಚಿಬೀಳಿಸಿದ ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್ ಅಭಿನಯಿಸಿರುವ ಲಕ್ಷ್ಮಿ ಬಾಂಬ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ನವರಾತ್ರಿ ಪ್ರಯುಕ್ತ ದುರ್ಗಾ ಮಾತೆಯ ಮುಂದೆ ಅಕ್ಷಯ್ ಕುಮಾರ್ ಮಂಗಳಮುಖಿಯಾಗಿ ನಿಂತಿರುವ ಭಂಗಿ ಅಭಿಮಾನಿಗಳನ್ನು ಚಕಿತಗೊಳಿಸಿದೆ.

Vijaya Karnataka Web 3 Oct 2019, 1:01 pm
ಕೇವಲ ತಮಿಳಿನಲ್ಲಷ್ಟೇ ಅಲ್ಲದೆ ಕನ್ನಡ, ತೆಲುಗಿನಲ್ಲೂ ಜಯಭೇರಿ ಭಾರಿಸಿದ ಸಿನಿಮಾ 'ಕಾಂಚನ' (ಕನ್ನಡದಲ್ಲಿ ಕಲ್ಪನ). ಜನಪ್ರಿಯ ನಟ, ಕೊರಿಯೋಗ್ರಾಫರ್, ನಿರ್ದೇಶಕ ರಾಘವ ಲಾರೆನ್ಸ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಓರ್ವ ವ್ಯಕ್ತಿಗೆ ಅನ್ಯಾಯ ಆಗಿ ಆತನನ್ನು ಕೊಂದ ಬಳಿಕ ಆ ವ್ಯಕ್ತಿಯ ಆತ್ಮ ರಾಘವ ಲಾರೆನ್ಸ್ ದೇಹದಲ್ಲಿ ಪ್ರವೇಶಿಸಿ ಪ್ರತೀಕಾರ ತೀರಿಸಿಕೊಳ್ಳುವುದೇ ಈ ಸಿನಿಮಾದ ಕಥಾಹಂದರ.
Vijaya Karnataka Web laxmmi-bomb


ಈಗಾಗಲೆ ಈ ಸರಣಿಯಲ್ಲಿ ನಾಲ್ಕು ಸಿನಿಮಾಗಳು ಬಂದಿವೆ. ಇವೆಲ್ಲವೂ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಹಿಟ್ ಆಗಿರುವಂತಹವು. ಹಾಗಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಈ ಸಿನಿಮಾ ನೋಡಿ ಇಂಪ್ರೆಸ್ ಆಗಿ ಹಿಂದಿಗೆ ರೀಮೇಕ್ ಮಾಡಬೇಕು ಎಂದುಕೊಂಡರು. ರೀಮೇಕ್ ಸಿನಿಮಾಗೆ 'ಲಕ್ಷ್ಮಿ ಬಾಂಬ್' ಎಂಬ ಟೈಟಲ್ ಇಟ್ಟಿರುವುದು ಗೊತ್ತೇ ಇದೆ. ವಿಶೇಷ ಎಂದರೆ ಈ ಸಿನಿಮಾಗೂ ರಾಘವ ಲಾರೆನ್ಸ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಜಾಲತಾಣದಲ್ಲಿ ಹವಾ ಎಬ್ಬಿಸಿದ ಪ್ರಿಯಾಂಕಾ-ಕರೀನಾ ಚುಂಬನ

ಇದೀಗ ನವರಾತ್ರಿ ಸಂದರ್ಭದಲ್ಲಿ ಅಕ್ಷಯ್ ಈ ಚಿತ್ರಕ್ಕೆ ಸಂಬಂಧಿಸಿದ ಫಸ್ಟ್‌ಲುಕ್‌ನ್ನು ಅಭಿಮಾನಿಗಳ ಜತೆಗೆ ಹಂಚಿಕೊಂಡಿದ್ದಾರೆ. ದುರ್ಗೆಯ ಮುಂದೆ ಮಂಗಳಮುಖಿ ಗೆಟಪ್‌ನಲ್ಲಿ ನಿಂತಿರುವ ಲುಕ್ ಅಭಿಮಾನಿಗಳನ್ನು ಚಕಿತಗೊಳಿಸುತ್ತಿದೆ. ಇದುವರೆಗೂ ಅಕ್ಷಯ್ ಕುಮಾರ್ ಮಂಗಳಮುಖಿ ಪಾತ್ರದಲ್ಲಿ ನಟಿಸಿಲ್ಲ. ಆದರೆ ಹೊಸಹೊಸ ಪ್ರಯೋಗಗಳನ್ನು ಮಾಡುವಲ್ಲಿ ಸದಾ ಮುಂದಿರುತ್ತಾರೆ.

ತಮ್ಮ ಪಾತ್ರ ಪ್ರೇಕ್ಷಕರಿಗೆ ಇಷ್ಟವಾಗುತ್ತದೆಯೇ ಇಲ್ಲವೇ ಎಂಬುದಕ್ಕಿಂತಲೂ ಒಳ್ಳೆಯ ಕಾನ್ಸೆಪ್ಟ್ ಆಯ್ಕೆ ಮಾಡಿಕೊಂಡಿದ್ದೇನಾ ಇಲ್ಲವೇ ಎಂಬ ವಿಷಯದ ಬಗ್ಗೆಯೇ ಅಕ್ಷಯ್ ಹೆಚ್ಚು ಗಮನಹರಿಸುತ್ತಿರುತ್ತಾರೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್‌ಗೆ ಜೋಡಿಯಾಗಿ ಕಿಯಾರಾ ಆಡ್ವಾಣಿ ನಟಿಸುತ್ತಿದ್ದಾರೆ. ಕೇಪ್ ಆಫ್ ಗುಡ್ ಫಿಲಂಸ್, ಷಬೀನಾ ಎಂಟರ್‌ಟೇನ್‍ಮೆಂಟ್, ತುಷಾರ್ ಎಂಟರ್‌ಟೇನ್‌ಮೆಂಟ್ ಹೌಸ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಿಸುತ್ತಿವೆ. ಮುಂದಿನ ವರ್ಷ ಜೂನ್ 5ರಂದು ಈ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಚಿತ್ರ ನಿರ್ದೇಶಕನೊಬ್ಬ ನನ್ನನ್ನು ರೂಮಿಗೆ ಆಹ್ವಾನಿಸಿದ್ದ: ನಟಿ ವಿದ್ಯಾ ಬಾಲನ್

ಈ ಸಿನಿಮಾಗೆ ಸಂಬಂಧಿಸಿದ ಲುಕ್ ಒಂದು ಈ ಹಿಂದೆ ರಿಲೀಸ್ ಆಗಿತ್ತು. ಆದರೆ ಆ ಲುಕ್ ರಾಘವ ಲಾರೆನ್ಸ್‌ಗೆ ಇಷ್ಟವಾಗಿರಲಿಲ್ಲ. ಓರ್ವ ನಿರ್ದೇಶಕನಾಗಿ ನನ್ನ ಅನುಮತಿ ಇಲ್ಲದಂತೆ ಫಸ್ಟ್‌ಲುಕ್ ಡಿಸೈನ್ ಮಾಡಿದ್ದು ತನಗೆ ಇಷ್ಟವಿಲ್ಲ, ಸ್ವಾಭಿಮಾನವನ್ನು ಬಿಟ್ಟುಕೊಡಲ್ಲ ಎಂದು ರಾಘವ ಈ ಸಿನಿಮಾದಿಂದ ದೂರ ಸರಿದರು. ಕೊನೆಗೆ ನಿರ್ಮಾಣ ಸಂಸ್ಥೆಗಳು ಹಾಗೂ ಅವರಿಗೆ ವಿವಾದ ಸುತ್ತಿಕೊಂಡಿತ್ತು.

ಈ ಸಂಗತಿ ಅಕ್ಷಯ್‌ಗೆ ತಿಳಿದು ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು ಎಂದುಕೊಂಡರು. ರಾಘವ್ ಜತೆಗೆ ಮಾತನಾಡಿ ಈ ಚಿತ್ರವನ್ನು ಅವರೇ ನಿರ್ದೇಶಿಸಬೇಕು ಎಂದು ಒಪ್ಪಿಸಿದರು. ಅಕ್ಷಯ್ ಕುಮಾರ್ ಮೇಲಿನ ಅಭಿಮಾನದಿಂದ ರಾಘವ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅಕ್ಷಯ್ ಕುಮಾರ್‌ ನೆಲಕ್ಕೆ ತಳ್ಳಿ ಸೋನಾಕ್ಷಿ ವೀಡಿಯೋ ಮಾಡಿದ್ದೇಕೆ?

ಈಗ ರಾಘವ್‍ಗೆ ಇಷ್ಟವಾಗುವ ಪ್ರಕಾರ ಮಂಗಳಮುಖಿ ಗೆಟಪ್‌ನಲ್ಲಿ ಅಕ್ಷಯ್ ಕುಮಾರ್ ಲುಕ್ ಡಿಸೈನ್ ಮಾಡಿದ್ದಾರಂತೆ. ಈ ಸಿನಿಮಾ ಮೂಲಕ ಅಕ್ಷಯ್ ಕುಮಾರ್ ತಮ್ಮ ಅಭಿಮಾನಿಗಳ ಮನಸ್ಸನ್ನು ಗೆಲ್ಲುತ್ತಾರಾ? ಇಲ್ಲವೇ ಎಂಬುದನ್ನು ಕಾದುನೋಡಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌