ಇನ್ನೇನು ರಿಲೀಸ್ ಆಗಲು ಕೆಲವೇ ದಿನಗಳು ಬಾಕಿ ಇದೆ ಎನ್ನುವಾಗಲೇ ಅಕ್ಷಯ್ ಕುಮಾರ್ ನಟನೆಯ 'ಲಕ್ಷ್ಮೀ ಬಾಂಬ್' ಸಿನಿಮಾ ವಿವಾದಕ್ಕೆ ಸಿಲುಕಿಕೊಂಡಿತ್ತು. ಕೊನೇ ಗಳಿಗೆಯಲ್ಲಿ ಶೀರ್ಷಿಕೆ ಬಗ್ಗೆ ಹಿಂದೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. 'ಹಿಂದೂಗಳ ದೇವತೆ ಲಕ್ಷ್ಮೀ ಹೆಸರಿನ ಪಕ್ಕದಲ್ಲಿ ಬಾಂಬ್ ಎಂದು ಬಳಸಿರುವುದು ಸರಿಯಲ್ಲ' ಎಂದು ಕಿಡಿ ಕಾರಿದ್ದವು. ಅಂತಿಮವಾಗಿ ಹಿಂದೂ ಸಂಘಟನೆಗಳ ಒತ್ತಾಯಕ್ಕೆ ಮಣಿದ ಚಿತ್ರತಂಡ ಈಗ ಸಿನಿಮಾದ ಶೀರ್ಷಿಕೆಯನ್ನೇ ಬದಲಾಯಿಸಿದೆ!
'ಲಕ್ಷ್ಮೀ ಬಾಂಬ್' ಅಲ್ಲ, ಬರೀ ಲಕ್ಷ್ಮೀ!
'ಹಿಂದೂಗಳ ದೇವತೆ ಲಕ್ಷ್ಮೀ ಹೆಸರಿನ ಪಕ್ಕದಲ್ಲಿ ಬಾಂಬ್ ಎಂದು ಬಳಸಿರುವುದು ಸರಿಯಲ್ಲ' ಎಂದು ಆಕ್ಷೇಪ ವ್ಯಕ್ತಪಡಿಸಿದ್ದ ಹಿಂದೂ ಸೇನಾ ಕಾರ್ಯಕರ್ತರು, ಶೀರ್ಷಿಕೆ ಬದಲಾಗಬೇಕು ಎಂದು ಒತ್ತಾಯಿಸಿದ್ದರು. ಜೊತೆಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಪತ್ರ ಕೂಡ ಬರೆಯಲಾಗಿತ್ತು. ಒಂದು ವೇಳೆ ಶೀರ್ಷಿಕೆ ಬದಲಾಗದಿದ್ದರೆ ಪ್ರತಿಭಟನೆ ಮಾಡುವುದಾಗಿ ಸಂಘಟನೆ ತಿಳಿಸಿತ್ತು. ಇದೀಗ ಅಂತಿಮವಾಗಿ ಚಿತ್ರತಂಡ ಶೀರ್ಷಿಕೆಯನ್ನು 'ಲಕ್ಷ್ಮೀ ಬಾಂಬ್' ಬದಲು 'ಲಕ್ಷ್ಮೀ' ಎಂದು ಇಟ್ಟಿದೆ ಎನ್ನಲಾಗಿದೆ.
ಗುರುವಾರ (ಅ.29) ಚಿತ್ರಕ್ಕೆ ಸೆನ್ಸಾರ್ ಪ್ರಕ್ರಿಯೆ ಮುಗಿದಿದೆ. ಈ ವೇಳೆ ಸೆನ್ಸಾರ್ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ ಚಿತ್ರತಂಡ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ. ಅಂತಿಮವಾಗಿ ಹಿಂದೂಗಳ ಭಾವನೆಗಳಿಗೆ ಗೌರವ ನೀಡಿ, 'ಲಕ್ಷ್ಮೀ' ಎಂದಷ್ಟೇ ಉಳಿಸಿಕೊಂಡಿದೆಯಂತೆ. 'ಶಕ್ತಿಮಾನ್' ಖ್ಯಾತಿಯ ನಟ ಮುಕೇಶ್ ಖನ್ನಾ ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. 'ಕಮರ್ಷಿಯಲ್ ಉದ್ದೇಶದಿಂದ ಚಿತ್ರತಂಡ ಈ ರೀತಿ ಮಾಡಿದೆ. ಹೀಗೆ ನೆಗೆಟಿವ್ ಪ್ರಚಾರ ಪಡೆದರೆ, ಈ ಸಿನಿಮಾದಲ್ಲಿ ಅಂಥದ್ದು ಏನಿದೆ ಎಂಬುದನ್ನು ತಿಳಿದುಕೊಳ್ಳುವ ಉದ್ದೇಶದಿಂದ ಜನರು ಮುಗಿಬಿದ್ದು ಸಿನಿಮಾ ನೋಡುತ್ತಾರೆ. ಅದರಿಂದ ಚಿತ್ರತಂಡಕ್ಕೆ ಅನುಕೂಲ ಆಗಲಿದೆ. ಆ ಕಾರಣದಿಂದಲೇ ಇಂಥ ಶೀರ್ಷಿಕೆ ಇಡಲಾಗಿದೆ' ಎಂದು ಅವರು ಆರೋಪಿಸಿದ್ದರು.
ಅಕ್ಷಯ್ ಕುಮಾರ್ 'ಲಕ್ಷ್ಮೀ ಬಾಂಬ್' ಚಿತ್ರದ ವಿರುದ್ಧ ಗರಂ ಆದ 'ಶಕ್ತಿಮಾನ್' ನಟ ಮುಕೇಶ್ ಖನ್ನಾ!
ಸದ್ಯ ಭಾರಿ ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾ ನ.9ರಂದು 'ಡಿಸ್ನಿ ಹಾಟ್ಸ್ಟಾರ್' ಮೂಲಕ ಬಿಡುಗಡೆ ಆಗಲಿದೆ. ತಮಿಳಿನ ರಾಘವ ಲಾರೆನ್ಸ್ ಈ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ಬಾಲಿವುಡ್ಗೆ ಕಾಲಿಟ್ಟಿದ್ದಾರೆ. ಈಗಾಗಲೇ ಟ್ರೇಲರ್ ನೋಡಿರುವ ಆಮೀರ್ ಖಾನ್ ಮುಂತಾದವರು ಮನಸಾರೆ ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ಗೆ ಜೋಡಿಯಾಗಿ ಕಿಯಾರಾ ಅಡ್ವಾಣಿ ನಟಿಸಿದ್ದಾರೆ.
ನೆಟ್ಟಿಗರ ಅಭಿಪ್ರಾಯಕ್ಕೆ ಹೆದರಿದರೇ ಅಕ್ಷಯ್ ಕುಮಾರ್? ಈ ಪ್ರಶ್ನೆ ಹುಟ್ಟಲು ಕಾರಣ 'ಲಕ್ಷ್ಮೀ ಬಾಂಬ್!
'ಲಕ್ಷ್ಮೀ ಬಾಂಬ್' ಅಲ್ಲ, ಬರೀ ಲಕ್ಷ್ಮೀ!
'ಹಿಂದೂಗಳ ದೇವತೆ ಲಕ್ಷ್ಮೀ ಹೆಸರಿನ ಪಕ್ಕದಲ್ಲಿ ಬಾಂಬ್ ಎಂದು ಬಳಸಿರುವುದು ಸರಿಯಲ್ಲ' ಎಂದು ಆಕ್ಷೇಪ ವ್ಯಕ್ತಪಡಿಸಿದ್ದ ಹಿಂದೂ ಸೇನಾ ಕಾರ್ಯಕರ್ತರು, ಶೀರ್ಷಿಕೆ ಬದಲಾಗಬೇಕು ಎಂದು ಒತ್ತಾಯಿಸಿದ್ದರು. ಜೊತೆಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಪತ್ರ ಕೂಡ ಬರೆಯಲಾಗಿತ್ತು. ಒಂದು ವೇಳೆ ಶೀರ್ಷಿಕೆ ಬದಲಾಗದಿದ್ದರೆ ಪ್ರತಿಭಟನೆ ಮಾಡುವುದಾಗಿ ಸಂಘಟನೆ ತಿಳಿಸಿತ್ತು. ಇದೀಗ ಅಂತಿಮವಾಗಿ ಚಿತ್ರತಂಡ ಶೀರ್ಷಿಕೆಯನ್ನು 'ಲಕ್ಷ್ಮೀ ಬಾಂಬ್' ಬದಲು 'ಲಕ್ಷ್ಮೀ' ಎಂದು ಇಟ್ಟಿದೆ ಎನ್ನಲಾಗಿದೆ.
ಗುರುವಾರ (ಅ.29) ಚಿತ್ರಕ್ಕೆ ಸೆನ್ಸಾರ್ ಪ್ರಕ್ರಿಯೆ ಮುಗಿದಿದೆ. ಈ ವೇಳೆ ಸೆನ್ಸಾರ್ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ ಚಿತ್ರತಂಡ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ. ಅಂತಿಮವಾಗಿ ಹಿಂದೂಗಳ ಭಾವನೆಗಳಿಗೆ ಗೌರವ ನೀಡಿ, 'ಲಕ್ಷ್ಮೀ' ಎಂದಷ್ಟೇ ಉಳಿಸಿಕೊಂಡಿದೆಯಂತೆ. 'ಶಕ್ತಿಮಾನ್' ಖ್ಯಾತಿಯ ನಟ ಮುಕೇಶ್ ಖನ್ನಾ ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. 'ಕಮರ್ಷಿಯಲ್ ಉದ್ದೇಶದಿಂದ ಚಿತ್ರತಂಡ ಈ ರೀತಿ ಮಾಡಿದೆ. ಹೀಗೆ ನೆಗೆಟಿವ್ ಪ್ರಚಾರ ಪಡೆದರೆ, ಈ ಸಿನಿಮಾದಲ್ಲಿ ಅಂಥದ್ದು ಏನಿದೆ ಎಂಬುದನ್ನು ತಿಳಿದುಕೊಳ್ಳುವ ಉದ್ದೇಶದಿಂದ ಜನರು ಮುಗಿಬಿದ್ದು ಸಿನಿಮಾ ನೋಡುತ್ತಾರೆ. ಅದರಿಂದ ಚಿತ್ರತಂಡಕ್ಕೆ ಅನುಕೂಲ ಆಗಲಿದೆ. ಆ ಕಾರಣದಿಂದಲೇ ಇಂಥ ಶೀರ್ಷಿಕೆ ಇಡಲಾಗಿದೆ' ಎಂದು ಅವರು ಆರೋಪಿಸಿದ್ದರು.
ಅಕ್ಷಯ್ ಕುಮಾರ್ 'ಲಕ್ಷ್ಮೀ ಬಾಂಬ್' ಚಿತ್ರದ ವಿರುದ್ಧ ಗರಂ ಆದ 'ಶಕ್ತಿಮಾನ್' ನಟ ಮುಕೇಶ್ ಖನ್ನಾ!
ಸದ್ಯ ಭಾರಿ ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾ ನ.9ರಂದು 'ಡಿಸ್ನಿ ಹಾಟ್ಸ್ಟಾರ್' ಮೂಲಕ ಬಿಡುಗಡೆ ಆಗಲಿದೆ. ತಮಿಳಿನ ರಾಘವ ಲಾರೆನ್ಸ್ ಈ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ಬಾಲಿವುಡ್ಗೆ ಕಾಲಿಟ್ಟಿದ್ದಾರೆ. ಈಗಾಗಲೇ ಟ್ರೇಲರ್ ನೋಡಿರುವ ಆಮೀರ್ ಖಾನ್ ಮುಂತಾದವರು ಮನಸಾರೆ ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ಗೆ ಜೋಡಿಯಾಗಿ ಕಿಯಾರಾ ಅಡ್ವಾಣಿ ನಟಿಸಿದ್ದಾರೆ.
ನೆಟ್ಟಿಗರ ಅಭಿಪ್ರಾಯಕ್ಕೆ ಹೆದರಿದರೇ ಅಕ್ಷಯ್ ಕುಮಾರ್? ಈ ಪ್ರಶ್ನೆ ಹುಟ್ಟಲು ಕಾರಣ 'ಲಕ್ಷ್ಮೀ ಬಾಂಬ್!