ಆ್ಯಪ್ನಗರ

ರಾಜಮೌಳಿ ಸಿನಿಮಾ ಆಫರ್‌ ನಿರಾಕರಿಸಿದ ಆಲಿಯಾ ಭಟ್

ರಾಜಮೌಳಿ ತಮ್ಮ ಮಹತ್ವಾಕಾಂಕ್ಷೆಯ ಸಿನಿಮಾಕ್ಕಾಗಿ ನಾಯಕಿಯ ಹುಡುಕಾಟ ಮುಂದುವರಿಸಿದ್ದು, ಇದರಿಂದಾಗಿಯೇ ಸಿನಿಮಾದ ಶೂಟಿಂಗ್‌ ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ.

Vijaya Karnataka 11 Mar 2019, 12:40 pm
ಕೈತುಂಬಾ ಸಂಭಾವನೆಯ ಆಫರ್‌ ಇದ್ದರೂ ಎಸ್‌. ಎಸ್‌. ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾದಲ್ಲಿ ನಟಿಸಲು ಬಾಲಿವುಡ್‌ ನಟಿ ಆಲಿಯಾ ಭಟ್‌ ನಿರಾಕರಿಸಿದ್ದಾರೆ ಎಂಬ ಸುದ್ದಿ ಈಗ ಸಿನಿಮಾ ಜಗತ್ತಿನಲ್ಲಿ ಹರಿದಾಡುತ್ತಿದೆ.
Vijaya Karnataka Web alia-bhat


ಜೂನಿಯರ್‌ ಎಂಟಿಆರ್‌ ಮತ್ತು ರಾಮ್‌ಚರಣ್‌ ತೇಜಾ ನಟನೆಯ ಈ ಸಿನಿಮಾ 300 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಈಗಾಗಲೇ ಕಳಂಕ್‌, ಬ್ರಹ್ಮಾಸ್ತ್ರ, ತಂದೆ ಮಹೇಶ್‌ ಭಟ್‌ ನಿರ್ಮಾಣ ಅವರ ಸಡಕ್‌-2ನಲ್ಲಿ ಬ್ಯುಸಿಯಾಗಿರುವ ಆಲಿಯಾ ವಿಶ್ವದ ಮೊದಲ ವಿಕಲಚೇತನ ಪರ್ವತಾರೋಹಿ ಅರುಣಿಮಾ ಸಿನ್ಹಾ ಜೀವನಕಥೆಯನ್ನು ಆಧರಿಸಿದ ಸಿನಿಮಾದಲ್ಲಿ ಕೂಡ ನಟಿಸುತ್ತಿದ್ದಾರೆ.

ಇದರಿಂದಾಗಿ ಕೈತುಂಬಾ ಸಂಭಾವನೆಯ ಆಫರ್‌ ನೀಡಿದರೂ ರಾಜಮೌಳಿ ಅವರ ಸಿನಿಮಾದ ಆಹ್ವಾನವನ್ನು ನಟಿ ನಯವಾಗಿ ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ. ರಾಜಮೌಳಿ ತಮ್ಮ ಮಹತ್ವಾಕಾಂಕ್ಷೆಯ ಸಿನಿಮಾಕ್ಕಾಗಿ ನಾಯಕಿಯ ಹುಡುಕಾಟ ಮುಂದುವರಿಸಿದ್ದು, ಇದರಿಂದಾಗಿಯೇ ಸಿನಿಮಾದ ಶೂಟಿಂಗ್‌ ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಇನ್ನೊಂದು ಕಡೆ ನಟಿ ಪ್ರಿಯಾಮಣಿ ಜಗದ್ವಿಖ್ಯಾತ ನಿರ್ದೇಶಕ ಎಸ್‌ಎಸ್ ರಾಜಮೌಳಿ ನಿರ್ದೇಶನದಲ್ಲಿ ಮುಂಬರುವ 'ಆರ್‌ಆರ್‌ಆರ್' ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಸೌತ್ ಇಂಡಿಯಾದ ಎಲ್ಲ ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಪ್ರಿಯಾಮಣಿ ಈಗ ರಾಜಮೌಳಿಯವರ ಚಿತ್ರದಲ್ಲೂ ನಟಿಸಲಿದ್ದಾರೆ ಎನ್ನಲಾಗಿದೆ. ಮದುವೆ ನಂತರವೂ ತಮ್ಮ ನಟನೆಯನ್ನು ಪ್ರಿಯಾಮಣಿ ಮುಂದುವರಿಸಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌