ಆ್ಯಪ್ನಗರ

ಕಿಂಗ್ ಖಾನ್ ಶಾರುಖ್ ಟೈಮ್ ಸರಿ ಇಲ್ಲ ಅನ್ನಿಸುತ್ತದೆ!

ಈ ಘೋಷಣೆಗೂ ಮುನ್ನ ಶಾರುಖ್ ಖಾನ್ ಇನ್ನು ತನಗೆ ಒಳ್ಳೆಯ ದಿನಗಳು ಬಂದವು ಎಂದೇ ಭಾವಿಸಿದ್ದರಂತೆ. ಅಷ್ಟರಲ್ಲಿ ಪರಿಸ್ಥಿತಿ ಉಲ್ಟಾ ಆಗಿ ಈಗ ಹತಾಶೆಯಲ್ಲಿ ಮುಳುಗುವಂತಾಗಿದೆಯಂತೆ. ಕೇವಲ ಸಂಜಯ್ ಲೀಲಾ ಭನ್ಸಾಲಿ ಅಷ್ಟೇ ಅಲ್ಲದೆ, ಬಹಳಷ್ಟು ಮಂದಿ ನಿರ್ದೇಶಕರು ಶಾರುಖ್‌ರನ್ನು ಕಡೆಗಣಿಸುತ್ತಿದ್ದಾರಂತೆ.

Vijaya Karnataka Web 28 Mar 2019, 5:54 pm
ಬಾಲಿವುಡ್ ಬಾದ್‌ಶಾ ಎಂದು ಕರೆಸಿಕೊಂಡಿರುವ ನಟ ಶಾರುಖ್ ಖಾನ್ ಟೈಮ್ ಸರಿ ಇಲ್ಲ ಅನ್ನಿಸುತ್ತದೆ. ಸಾಲು ಸಾಲು ಸಿನಿಮಾಗಳು ಬಾಕ್ಸ್ ಆಫೀಸಲ್ಲಿ ಗೋತಾ ಹೊಡೆಯುತ್ತಿರುವ ಕಾರಣ ಅವರ ವೃತ್ತಿ ಬದುಕೇ ಡೋಲಾಯಮಾನವಾಗಿದೆ ಎಂಬ ಮಾತು ಬಾಲಿವುಡ್‌ನಲ್ಲಿ ಕೇಳಿಬರುತ್ತಿದೆ.

ಇಷ್ಟಕ್ಕೂ ನಡೆದದ್ದೇನೆಂದರೆ ಶಾರುಖ್ ಜತೆಗೆ ಸಂಜಯ್ ಲೀಲಾ ಭನ್ಸಾಲಿ ಸಿನಿಮಾ ಒಂದನ್ನು ಮಾಡಲು ಪ್ಲಾನ್ ಮಾಡಿದ್ದರು. ಆದರೆ ಸಾಲು ಸಾಲು ಸಿನಿಮಾಗಳು ತೋಪಾದ ಕಾರಣ ಶಾರುಖ್‍ಗಿಂತ ಸಲ್ಮಾನ್ ಖಾನ್ ಬೆಟರ್ ಎಂದು ಭಾವಿಸಿ ಸಲ್ಲು ಜತೆಗಿನ ಸಿನಿಮಾವನ್ನು ಘೋಷಿಸಿದ್ದಾರೆ.

ಈ ಘೋಷಣೆಗೂ ಮುನ್ನ ಶಾರುಖ್ ಖಾನ್ ಇನ್ನು ತನಗೆ ಒಳ್ಳೆಯ ದಿನಗಳು ಬಂದವು ಎಂದೇ ಭಾವಿಸಿದ್ದರಂತೆ. ಅಷ್ಟರಲ್ಲಿ ಪರಿಸ್ಥಿತಿ ಉಲ್ಟಾ ಆಗಿ ಈಗ ಹತಾಶೆಯಲ್ಲಿ ಮುಳುಗುವಂತಾಗಿದೆಯಂತೆ. ಕೇವಲ ಸಂಜಯ್ ಲೀಲಾ ಭನ್ಸಾಲಿ ಅಷ್ಟೇ ಅಲ್ಲದೆ, ಬಹಳಷ್ಟು ಮಂದಿ ನಿರ್ದೇಶಕರು ಶಾರುಖ್‌ರನ್ನು ಕಡೆಗಣಿಸುತ್ತಿದ್ದಾರಂತೆ.

ನೆನ್ನೆ ಮೊನ್ನೆಯವರೆಗೂ ಸ್ಟಾರ್ ಹೀರೋ ಅನ್ನಿಸಿಕೊಂಡ ಶಾರುಖ್ ಈಗ 'ಝೀರೋ' ಆಗಿ ಬದಲಾಗಿರುವುದನ್ನು ನೋಡಿ ಬಹಳಷ್ಟು ಮಂದಿ ಅವರ ಪರಿಸ್ಥಿತಿ ಬಗ್ಗೆ ಅಯ್ಯೋ ಪಾಪ ಎಂದು ಕನಿಕರ ವ್ಯಕ್ತಪಡಿಸುತ್ತಿದ್ದಾರಂತೆ.

ಶಾರುಖ್ ಖಾನ್ ನಟಿಸಿದ 'ಝೀರೋ' ಸಿನಿಮಾ ಬಾಕ್ಸ್ ಆಫೀಸಲ್ಲಿ ಹೀನಾಯವಾಗಿ ಸೋತ ಕಾರಣ ಅವರು ಶಾಕ್‌ನಲ್ಲಿದ್ದಾರೆ ಎಂದು ಸಾಹಿತಿ ಅಂಜುಮ್ ರಾಜಬಲಿ ಹೇಳಿದ್ದರು. ರಾಕೇಶ್ ಶರ್ಮಾ ಬಯೋಪಿಕ್‌ಗೆ 'ಸಾರೇ ಜಹಾಸೆ ಅಚ್ಚಾ' ಎಂಬ ಶೀರ್ಷಿಕೆ ಇಡಲಾಗಿದೆ. ಶಾರುಖ್ ಈ ಸಿನಿಮಾದಿಂದ ಹಿಂದೆ ಸರಿದ ಕಾರಣ ರಣಬೀರ್ ಕಪೂರ್‌ರನ್ನು ಆಯ್ಕೆ ಮಾಡಲಾಗಿದೆ. ಒಟ್ಟಾರೆ ಶಾರುಖ್ ಟೈಮ್ ಸರಿಯಿಲ್ಲ ಅಷ್ಟೇ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌