ಆ್ಯಪ್ನಗರ

ಜಾನ್ ಅಬ್ರಹಂ ಸಿನಿಮಾ ಚಿತ್ರೀಕರಣ: ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಪರದಾಡಿದ ಆಂಬ್ಯುಲೆನ್ಸ್

ಜಾನ್ ಅಬ್ರಹಂ ಅಭಿನಯದ ಸಿನಿಮಾ ಚಿತ್ರೀಕರಿಸಲು ಚಿತ್ರ ತಂಡ ಹಜರತ್ ಗಂಜ್‌ನ ಪಂಚಮುಖಿ ದೇವಸ್ಥಾನಕ್ಕೆ ಆಗಮಿಸಿತ್ತು.

TIMESOFINDIA.COM 2 Dec 2018, 1:23 pm
ಲಖನೌ: ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ ರೋಗಿಯನ್ನು ಕರೆದೊಯುತ್ತಿದ್ದ ಆಂಬ್ಯುಲೆನ್ಸ್ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಪರದಾಡಿದ ಘಟನೆ ಉತ್ತರ ಪ್ರದೇಶದ ಹಜರತ್ ಗಂಜ್‌ನಲ್ಲಿ ಶನಿವಾರ ನಡೆದಿದೆ.
Vijaya Karnataka Web jan


ಜಾನ್ ಅಬ್ರಹಂ ಅಭಿನಯದ ಸಿನಿಮಾ ಚಿತ್ರೀಕರಿಸಲು ಚಿತ್ರ ತಂಡ ಹಜರತ್ ಗಂಜ್‌ನ ಪಂಚಮುಖಿ ದೇವಸ್ಥಾನಕ್ಕೆ ಆಗಮಿಸಿತ್ತು. ಈ ಸಂದರ್ಭದಲ್ಲಿ ಸ್ಟಾರ್ ನಟ ಹಾಗೂ ಸಿನಿಮಾ ಚಿತ್ರೀಕರಣ ನೋಡಲು ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದು, ಹಜರತ್ ಗಂಜ್ ಕ್ರಾಸ್, ನವಲ್ ಕಿಶೋರ್ ರಸ್ತೆ ತುಳಸಿ ಥಿಯೇಟರ್ ಹಾಗೂ ಪರಿವರ್ತನ ಚೌಕ್‌ನಲ್ಲಿ ಸುಮಾರು ಎರಡು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಸಂಭವಿಸಿತ್ತು.

ಈ ಸಂಬಂಧ ವಿಜಯ ಕರ್ನಾಟಕದ ಸೋದರ ಪತ್ರಿಕೆ ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡಿರುವ ಆಂಬ್ಯುಲೆನ್ಸ್ ಚಾಲಕ, 'ಆಸ್ಪತ್ರೆಗೆ ಸಾಗಿಸುತ್ತಿದ್ದ ರೋಗಿಯ ಸ್ಥಿತಿ ಚಿಂತಾಜನಕವಾಗಿದ್ದು, ಟ್ರಾಫಿಕ್ ಜಾಮ್‌ ಮಧ್ಯ ಸಿಲುಕಿ ಗಂಟೆಗಂಟಲೇ ಪರದಾಡುವಂತಾಯಿತು. ರೋಗಿಯ ಮನೆಯಿಂದ ಆಸ್ಪತ್ರೆ ಇರುವುದು ಕೇವಲ ಎರಡು ಕಿ.ಮೀ ದೂರದಲ್ಲಿ. ಆದರೆ, ಟ್ರಾಫಿಕ್ ಜಾಮ್‌ನಿಂದ ಲಖನೌ-ಕಾನ್ಪುರ್ ಪ್ರಯಾಣ ಮಾಡಿದಂತಾಯಿತು' ಎಂದು ಹೇಳಿಕೊಂಡಿದ್ದಾರೆ.

ಪ್ರತಿಭಟನೆ ಇದ್ದರೂ ಟ್ರಾಫಿಕ್ ಜಾಮ್, ಸಿನಿಮಾ ಚಿತ್ರೀಕರಣವಿದ್ದರೂ ಟ್ರಾಫಿಕ್ ಜಾಮ್. ಹೀಗಾಗಿ ಹಜರತ್ ಗಂಜ್ ಪ್ರದೇಶವನ್ನು ಜಾಮ್ ಗಂಜ್ ಎಂದು ಮರುನಾಮಕರಣ ಮಾಡುವುದು ಒಳಿತು ಎಂದು ವೈದ್ಯಕೀಯ ಶಿಕ್ಷಣ ಆಸಕ್ತ ರಾಹೀಲ್ ಖಾನ್ ಕಿಡಿಕಾರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌