ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮಂಗಳಮುಖಿ ಪಾತ್ರದಲ್ಲಿ ಕಾಣಿಸಲಿದ್ದಾರೆ ಎಂದಿವೆ ಬಾಲಿವುಡ್ನಲ್ಲಿ ಮೂಲಗಳು. ತಮಿಳು, ತೆಲುಗಿನಲ್ಲಿ ಬ್ಲಾಕ್ಬಸ್ಟರ್ ಹಿಟ್ ದಾಖಲಿಸಿದ 'ಕಾಂಚನ' ಸಿನಿಮಾ ಬಾಲಿವುಡ್ಗೆ ರೀಮೇಕ್ ಆಗುತ್ತಿದ್ದು 'ಲಕ್ಷ್ಮಿ ಬಾಂಬ್' ಎಂಬ ಶೀರ್ಷಿಕೆಯನ್ನು ಪಕ್ಕಾ ಮಾಡಲಾಗಿದೆ.
ಈ ಸಿನಿಮಾ ಮೂಲಕ ರಾಘವ ಲಾರೆನ್ಸ್ ಬಾಲಿವುಡ್ ನಿರ್ದೇಶಕರಾಗಿ ಪರಿಚಯವಾಗುತ್ತಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಇದರಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಲಿದ್ದಾರೆ. ಅಕ್ಷಯ್ಗೆ ಜೋಡಿಯಾಗಿ ಕಿಯರಾ ಅಡ್ವಾಣಿ ನಟಿಸಲಿದ್ದಾರೆ.
ಆದರೆ 'ಕಾಂಚನ' ಚಿತ್ರದಲ್ಲಿ ಖ್ಯಾತ ನಟ ಶರತ್ ಕುಮಾರ್ ಮಂಗಳಮುಖಿ ಪಾತ್ರದಲ್ಲಿ ನಟಿಸಿದ್ದು ಗೊತ್ತೇ ಇದೆ. ಈಗ ರೀಮೇಕ್ನಲ್ಲಿ ಆ ಪಾತ್ರವನ್ನು ಅಮಿತಾಬ್ ಬಚ್ಚನ್ ಪೋಷಿಸಲು ಒಪ್ಪಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಕಾಂಚನ ಚಿತ್ರ ಕನ್ನಡಕ್ಕೆ 'ಕಲ್ಪನ' ಹೆಸರಿನಲ್ಲಿ ರೀಮೇಕ್ ಆಗಿತ್ತು. ರಿಯಲ್ ಸ್ಟಾರ್ ಉಪೇಂದ್ರ, ಲಕ್ಷ್ಮಿ ರೈ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು, ಮಂಗಳಮುಖಿ ಪಾತ್ರವನ್ನು ಸಾಯಿ ಕುಮಾರ್ ಪೋಷಿಸಿದ್ದಾರೆ. ಇದೀಗ ಇದೇ ಪಾತ್ರ ಬಾಲಿವುಡ್ನಲ್ಲಿ ಅಮಿತಾಬ್ ಬಚ್ಚನ್ ಪೋಷಿಸಲಿದ್ದು ಸಖತ್ ಕುತೂಹಲ ಮೂಡಿಸಿದೆ.
ಅಮಿತಾಬ್ ಬಚ್ಚನ್ ಹಾಗೂ ಚಿತ್ರತಂಡದಿಂದ ಈ ಬಗ್ಗೆ ಅಧಿಕೃತ ಸುದ್ದಿ ಇನ್ನಷ್ಟೇ ಹೊರಬೀಳಬೇಕು. ಮಾಧವನ್, ಶೋಭಿತಾ ಧೂಳಿಪಾಳಿ ಸಹ ಪ್ರಮುಖ ಪಾತ್ರಗಳಲ್ಲಿ ಇರುತ್ತಾರೆ. 2020ಕ್ಕೆ ಸಿನಿಮಾ ಪ್ರೇಕ್ಷಕರ ಮುಂದೆ ಬರುತ್ತಿದೆ.
ಈ ಸಿನಿಮಾ ಮೂಲಕ ರಾಘವ ಲಾರೆನ್ಸ್ ಬಾಲಿವುಡ್ ನಿರ್ದೇಶಕರಾಗಿ ಪರಿಚಯವಾಗುತ್ತಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಇದರಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಲಿದ್ದಾರೆ. ಅಕ್ಷಯ್ಗೆ ಜೋಡಿಯಾಗಿ ಕಿಯರಾ ಅಡ್ವಾಣಿ ನಟಿಸಲಿದ್ದಾರೆ.
ಆದರೆ 'ಕಾಂಚನ' ಚಿತ್ರದಲ್ಲಿ ಖ್ಯಾತ ನಟ ಶರತ್ ಕುಮಾರ್ ಮಂಗಳಮುಖಿ ಪಾತ್ರದಲ್ಲಿ ನಟಿಸಿದ್ದು ಗೊತ್ತೇ ಇದೆ. ಈಗ ರೀಮೇಕ್ನಲ್ಲಿ ಆ ಪಾತ್ರವನ್ನು ಅಮಿತಾಬ್ ಬಚ್ಚನ್ ಪೋಷಿಸಲು ಒಪ್ಪಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಕಾಂಚನ ಚಿತ್ರ ಕನ್ನಡಕ್ಕೆ 'ಕಲ್ಪನ' ಹೆಸರಿನಲ್ಲಿ ರೀಮೇಕ್ ಆಗಿತ್ತು. ರಿಯಲ್ ಸ್ಟಾರ್ ಉಪೇಂದ್ರ, ಲಕ್ಷ್ಮಿ ರೈ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು, ಮಂಗಳಮುಖಿ ಪಾತ್ರವನ್ನು ಸಾಯಿ ಕುಮಾರ್ ಪೋಷಿಸಿದ್ದಾರೆ. ಇದೀಗ ಇದೇ ಪಾತ್ರ ಬಾಲಿವುಡ್ನಲ್ಲಿ ಅಮಿತಾಬ್ ಬಚ್ಚನ್ ಪೋಷಿಸಲಿದ್ದು ಸಖತ್ ಕುತೂಹಲ ಮೂಡಿಸಿದೆ.
ಅಮಿತಾಬ್ ಬಚ್ಚನ್ ಹಾಗೂ ಚಿತ್ರತಂಡದಿಂದ ಈ ಬಗ್ಗೆ ಅಧಿಕೃತ ಸುದ್ದಿ ಇನ್ನಷ್ಟೇ ಹೊರಬೀಳಬೇಕು. ಮಾಧವನ್, ಶೋಭಿತಾ ಧೂಳಿಪಾಳಿ ಸಹ ಪ್ರಮುಖ ಪಾತ್ರಗಳಲ್ಲಿ ಇರುತ್ತಾರೆ. 2020ಕ್ಕೆ ಸಿನಿಮಾ ಪ್ರೇಕ್ಷಕರ ಮುಂದೆ ಬರುತ್ತಿದೆ.