ಆ್ಯಪ್ನಗರ

ಚಿತ್ರದಲ್ಲಿ ನಟಿಸುತ್ತಿರುವ ದರ್ಶನ್ ಕುದುರೆ

ನಂದಿನಿ ಕೆ...

Vijaya Karnataka 25 Jan 2018, 11:31 am

*ನಂದಿನಿ ಕೆ.ಎಲ್‌

ಸ್ಯಾಂಡಲ್‌ವುಡ್‌ನಲ್ಲಿ ಕುದುರೆಯ ಕತೆಯನ್ನು ಒಳಗೊಂಡಿರುವ ಚಿತ್ರವೊಂದು ಬರುತ್ತಿದ್ದು ಅದು, ದರ್ಶನ್‌ ಅವರ ಮೆಚ್ಚಿನ ಕುದುರೆ ಬಾದಲ್‌ ಕತೆಯನ್ನು ಸಿನಿಮಾ ಮಾಡಲು ಯುವ ನಿರ್ದೇಶಕರೊಬ್ಬರು ತಯಾರಿ ಮಾಡಿಕೊಂಡಿದ್ದು, ಇದಕ್ಕೆ ಸ್ನೇಹಾ ನಾಯರ್‌ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಹಲವಾರು ವ್ಯಕ್ತಿಗಳ ಜೀವನಾಧಾರಿತ ಚಿತ್ರಗಳು ತೆರೆಯ ಮೇಲೆ ಬಂದುಹೋಗಿವೆ. ಈ ರೀತಿ ಪ್ರಾಣಿಯ ಕತೆಯನ್ನು ಆಧರಿಸಿ ಬರುತ್ತಿರುವುದು ಇದೇ ಮೊದಲು, ಈ ಪ್ರಯತ್ನಕ್ಕೆ ಕೈ ಹಾಕಿರುವುದು ಯುವ ನಿರ್ದೇಶಕ ಕಾರ್ತಿಕ್‌ ಕೃಷ್ಣ. ಈ ಚಿತ್ರಕ್ಕೆ ಬಾದಲ್‌ ಎಂದು ಟೈಟಲ್‌ ಇಟ್ಟಿದ್ದು, ಇದರಲ್ಲಿ ಕುದುರೆಯೇ ಮುಖ್ಯ ಪಾತ್ರಧಾರಿ ಎಂಬುದು ವಿಶೇಷ.

Vijaya Karnataka Web entertainment/bollywood/badal
ಚಿತ್ರದಲ್ಲಿ ನಟಿಸುತ್ತಿರುವ ದರ್ಶನ್ ಕುದುರೆ


ಫಸ್ಟ್‌ ಲವ್‌ ಖ್ಯಾತಿಯ ಸ್ನೇಹಾ ನಾಯರ್‌ ಇಲ್ಲಿ ಡಿಗ್ಲಾಮ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಎಲ್ಲ ಭಾವನೆಯನ್ನು ಕುದುರೆಯೊಂದಿಗೆ ಹಂಚಿಕೊಳ್ಳುತ್ತೇನೆ. ಪಾತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸಿಕೊಳ್ಳುತ್ತಿದ್ದೇನೆ ಎನ್ನುತ್ತಾರೆ ನಟಿ ಸ್ನೇಹಾ. ನಾಯಕನಾಗಿ ಅಗಸ್ತನ್‌ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಡುತ್ತಿದ್ದಾರೆ. ಈ ಚಿತ್ರದಲ್ಲಿ ದರ್ಶನ್‌ ಅವರ ಕುದುರೆ ಬಾದಲ್‌ ನಟಿಸುತ್ತಿದ್ದು, ಇದಕ್ಕೆ ದರ್ಶನ್‌ ಸಹ ಅನುಮತಿ ನೀಡಿದ್ದಾರೆ ಎಂದಿದ್ದಾರೆ ನಿರ್ದೇಶಕ ಕಾರ್ತಿಕ್‌.

ಕುದುರೆಗೆ ಈಗಾಗಲೇ ತಯಾರಿ ನೀಡಿದ್ದು, ಇದರಲ್ಲಿ ಕುದುರೆಯ ಚಲನ ವಲನಗಳು ಪ್ರಮುಖ ಪಾತ್ರ ವಹಿಸುವ ಕಾರಣ ಅದಕ್ಕೆ ಇನ್ನೂ ತರಬೇತಿಯ ಅವಶ್ಯಕತೆ ಇದೆ. ಈ ಚಿತ್ರದ ಚಿತ್ರೀಕರಣ ಕಾಶಿಯಲ್ಲಿ ನಡೆಯುತ್ತದೆ. ಈ ಚಿತ್ರದ ಪೋಸ್ಟರ್‌ನ್ನು ದರ್ಶನ್‌ ಅವರು ಬಿಡುಗಡೆ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌