ಆ್ಯಪ್ನಗರ

ಬಟ್ಟೆ ವಿಚಾರದಲ್ಲಿ ಗೌರವ ಮೂಡುವಂತೆ ನಡೆದುಕೊಂಡ ಭೂಮಿ ಪಡ್ನೇಕರ್‌! ಬೇರೆ ನಟಿಯರಿಗೂ ಮಾದರಿ!

ನಟನೆಯಿಂದ ಗಮನ ಸೆಳೆದಿದ್ದ ನಟಿ ಭೂಮಿ ಪಡ್ನೇಕರ್‌ ಅವರು ಈಗ ಬಟ್ಟೆಯ ಕಾರಣದಿಂದಲೂ ಸುದ್ದಿ ಆಗುತ್ತಿದ್ದಾರೆ. ಕಾಸ್ಟ್ಯೂಮ್ ವಿಚಾರದಲ್ಲಿ ಅವರು ತೆಗೆದುಕೊಂಡಿರುವ ನಿರ್ಧಾರ ಇತರೆ ನಟಿಯರಿಗೂ ಮಾದರಿ ಆಗುವಂತಿದೆ.

Vijaya Karnataka Web 11 Aug 2020, 4:17 pm
ಸೆಲೆಬ್ರಿಟಿಗಳು ಧರಿಸುವ ಬಗ್ಗೆ ಬಟ್ಟೆ ಬಗ್ಗೆ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ಯಾವ ನಟಿ ಯಾವ ರೀತಿ ಡ್ರೆಸ್‌ ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಬಗೆಬಗೆಯ ಕಾಮೆಂಟ್‌ಗಳು ಕಾಣಿಸುತ್ತವೆ. ಉಡುಗೆ-ತೊಡುಗೆ ವಿಚಾರದಲ್ಲಿ ಸೆಲೆಬ್ರಿಟಿಗಳು ಸ್ವಲ್ಪವೇ ಎಚ್ಚರ ತಪ್ಪಿದರೂ ಟ್ರೋಲ್‌ ಆಗಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಅದೇನೇ ಇರಲಿ, ನಟಿ ಭೂಮಿ ಪಡ್ನೇಕರ್‌ ಒಂದು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ.
Vijaya Karnataka Web bala actress bhumi pednekar says i believe in repeating clothes
ಬಟ್ಟೆ ವಿಚಾರದಲ್ಲಿ ಗೌರವ ಮೂಡುವಂತೆ ನಡೆದುಕೊಂಡ ಭೂಮಿ ಪಡ್ನೇಕರ್‌! ಬೇರೆ ನಟಿಯರಿಗೂ ಮಾದರಿ!


ಸಾಮಾನ್ಯವಾಗಿ ಸೆಲೆಬ್ರಿಟಿಗಳು ಒಮ್ಮೆ ಧರಿಸಿದ ಬಟ್ಟೆಯನ್ನು ಮತ್ತೊಮ್ಮೆ ಧರಿಸುವುದಿಲ್ಲ. ಸಿನಿಮಾದಲ್ಲಿ ಮಾತ್ರವಲ್ಲ; ರಿಯಲ್‌ ಲೈಫ್‌ಗೂ ಈ ಮಾತು ಅನ್ವಯ! ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಅವರು ಪ್ರತಿ ಬಾರಿಯೂ ಹೊಸ ಬಟ್ಟೆಯನ್ನೇ ಸೆಲೆಕ್ಟ್‌ ಮಾಡಿಕೊಳ್ಳುತ್ತಾರೆ. ಒಂದು ವೇಳೆ ಅಪ್ಪಿ-ತಪ್ಪಿ ಬಟ್ಟೆ ರಿಪೀಟ್‌ ಮಾಡಿದರೆ ಕೆಲವರು ಟ್ರೋಲ್‌ ಮಾಡಲು ಕಾಯುತ್ತಿರುತ್ತಾರೆ. ಅಂಥವರಿಗೆಲ್ಲ ಬಾಲಿವುಡ್‌ ಬೆಡಗಿ ಭೂಮಿ ಪಡ್ನೇಕರ್‌ ಡೋಂಟ್‌ ಕೇರ್‌ ಎನ್ನುತ್ತಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಅವರು ಈ ಆದರ್ಶವನ್ನು ಪಾಲಿಸಿಕೊಂಡು ಬರುತ್ತಿದ್ದಾರಂತೆ. ಒಮ್ಮೆ ಹಾಕಿದ ಬಟ್ಟೆಯನ್ನು ಮತ್ತೊಮ್ಮೆ ಹಾಕಿಕೊಳ್ಳಬಾರದು ಎಂಬ ಗೊಡ್ಡು ಫ್ಯಾಷನ್‌ ನಿಯಮಕ್ಕೆ ಅವರು ಸೆಡ್ಡು ಹೊಡೆದಿದ್ದಾರೆ. 'ಸೆಲೆಬ್ರಿಟಿ ಎಂಬ ಕಾರಣಕ್ಕೆ ಪ್ರತಿಬಾರಿಯೂ ಹೊಸ ಬಟ್ಟೆಯನ್ನೇ ಧರಿಸಬೇಕು ಎಂಬ ನಿಯಮಕ್ಕೆ ನಾನು ಕಟ್ಟುಬಿದ್ದಿಲ್ಲ. ಟೀಕೆ ಮಾಡುವವರನ್ನು ನಾನು ನಿರ್ಲಕ್ಷಿಸುತ್ತೇನೆ. ಬಟ್ಟೆ ಬಾಡಿಗೆ ನೀಡುವ ಟ್ರೆಂಡ್‌ ಬಗ್ಗೆಯೂ ಕೇಳಿದ್ದೇನೆ. ಅದು ತುಂಬ ಇಂಟರೆಸ್ಟಿಂಗ್‌ ಎನಿಸಿತು' ಎಂದು ಭೂಮಿ ಹೇಳಿದ್ದಾರೆ.

also read: ನಟ ರಣ್‌ವೀರ್ ಸಿಂಗ್‌ರನ್ನು‌ ಮೊದಲು ಆಡಿಶನ್‌ ಮಾಡಿದ್ದು ಜನಪ್ರಿಯ ನಟಿ ಭೂಮಿ ಪಡ್ನೇಕರ್!

ದುಡ್ಡು ಇದೆ ಎಂಬ ಕಾರಣಕ್ಕೆ ಬೇಕಾಬಿಟ್ಟಿ ಬಟ್ಟೆ ಶಾಪಿಂಗ್‌ ಮಾಡುವುದರಿಂದ ಸಂಪನ್ಮೂಲದ ದುರ್ಬಳಕೆ ಆಗುತ್ತದೆ. ಆ ಕಾರಣಕ್ಕಾಗಿ ಬಳಸಲು ಯೋಗ್ಯವಾದ ಬಟ್ಟೆಗಳನ್ನು ಸೆಲೆಬ್ರಿಟಿಗಳು ಮತ್ತೆ ಮತ್ತೆ ಧರಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂಬುದು ಭೂಮಿ ಅಭಿಪ್ರಾಯ. ಅಲ್ಲದೆ, ಅವರು ತಮ್ಮ ಸೋದರಿಯರ ಜೊತೆ ಬಟ್ಟೆ ಶೇರ್‌ ಮಾಡಿಕೊಳ್ಳುತ್ತಾರಂತೆ. 2015ರಿಂದ ಬಾಲಿವುಡ್‌ನಲ್ಲಿ ಸಕ್ರಿಯ ಆಗಿರುವ ಅವರಿಗೆ ಈಗ ಒಳ್ಳೊಳ್ಳೆಯ ಅವಕಾಶಗಳು ಹರಿದು ಬರುತ್ತಿವೆ.

also read: ಸುಶಾಂತ್ ಸಿಂಗ್‌ ನೆನಪಿನಲ್ಲಿ ಬಡವರ ಹಸಿವು ನೀಗಿಸಲು ಮುಂದಾದ ಬಾಲಿವುಡ್ ನಟಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌