ಆ್ಯಪ್ನಗರ

ರೈತರ ಕೈಹಿಡಿದ ಬಿಗ್‌ ಬಿ ಅಮಿತಾಬ್ ಬಚ್ಚನ್

ಇತ್ತೀಚೆಗಷ್ಟೇ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ 44 ಕುಟುಂಬಗಳನ್ನು ಗುರುತಿಸಿ ಅವರ ಕುಟುಂಬಕ್ಕೆ ಧನ ಸಹಾಯವನ್ನು ಅವರು ನೀಡಿದ್ದರು.

Vijaya Karnataka 22 Oct 2018, 1:02 pm
ಸೂಪರ್ ಸ್ಟಾರ್‌ ಅಮಿತಾಬ್‌ ಬಚ್ಚನ್‌ ಸಾಲದಿಂದ ತತ್ತರಿಸುತ್ತಿರುವ ನೂರಾರು ರೈತರ ನೆರವಿಗೆ ಧಾವಿಸಿದ್ದಾರೆ. ಉತ್ತರ ಪ್ರದೇಶದ 850 ರೈತರ ಒಟ್ಟು 5.5 ಕೋಟಿ ರೂ. ಸಾಲವನ್ನು ತಾವೇ ಮರು ಪಾವತಿ ಮಾಡುವುದಾಗಿ ಅವರು ಘೋಷಿಸಿದ್ದಾರೆ.
Vijaya Karnataka Web big-b


ಉತ್ತರ ಪ್ರದೇಶದಲ್ಲಿ ಸಾಲದ ಶೂಲಕ್ಕೆ ಸಿಕ್ಕ 850 ರೈತರ ಪಟ್ಟಿಯನ್ನು ಸಿದ್ಧ ಮಾಡಲಾಗಿದೆ. ಅವರ ಸಾಲದ ಜವಾಬ್ದಾರಿಯನ್ನು ತೆಗೆದುಕೊಳ್ಳಲಾಗುವುದು ಎಂದು ಅಮಿತಾಬ್‌ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. ಬಿಗ್‌ ಬಿ ಮಾನವೀಯತೆ ಇದೇ ಮೊದಲ ಬಾರಿ ಪ್ರಕಟವಾಗಿಲ್ಲ. ಇತ್ತೀಚೆಗಷ್ಟೇ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ 44 ಕುಟುಂಬಗಳನ್ನು ಗುರುತಿಸಿ ಅವರ ಕುಟುಂಬಕ್ಕೆ ಧನ ಸಹಾಯವನ್ನು ಅವರು ನೀಡಿದ್ದರು. ಇದು ಅವರು ಮಾಡಿದ ದೇಶ ಸೇವೆಗೆ ನನ್ನದೊಂದು ತೀರಾ ಚಿಕ್ಕ ಕಣ್ಣೀರ ಕಾಣಿಕೆ ಎಂದು ಭಾವುಕರಾಗಿದ್ದ ಬಚ್ಚನ್‌, ಇದರಿಂದ ಸಂತೃಪ್ತಿಯ ಭಾವ ನನಗೆ ಬಂದಿದೆ ಎಂದು ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌