ಆ್ಯಪ್ನಗರ

ಗೆಳತಿ ಶೆಹನಾಜ್ ಗಿಲ್ ಕೈ ಮೇಲೆಯೇ ಪ್ರಾಣಬಿಟ್ಟಿರುವ 'ಬಿಗ್ ಬಾಸ್ 13' ವಿಜೇತ ಸಿದ್ದಾರ್ಥ್ ಶುಕ್ಲಾ

ಬಿಗ್ ಬಾಸ್ 13 ಮನೆಯಲ್ಲಿ ಸಿದ್ದಾರ್ಥ್ ಶುಕ್ಲಾ ಹಾಗೂ ಶೆಹನಾಜ್ ತುಂಬ ಆತ್ಮೀಯತೆಯಿಂದ ಇದ್ದರು. ಆ ಮನೆಯಿಂದ ಹೊರಗಡೆ ಬಂದಮೇಲೂ ಕೂಡ ಆ ಜೋಡಿ ಚೆನ್ನಾಗಿತ್ತು. ಅವರಿಬ್ಬರು ರಿಲೇಶನ್‌ಶಿಪ್‌ನಲ್ಲಿ ಇದ್ದಾರೆ ಎಂದು ಹೇಳಲಾಗಿದ್ದರೂ ಕೂಡ ಒಂದು ದಿನವೂ ಸಿದ್ದಾರ್ಥ್ ಹಾಗೂ ಶೆಹನಾಜ್ ನಾವಿಬ್ಬರೂ ಪ್ರೀತಿ ಮಾಡುತ್ತಿದ್ದೇವೆ ಎಂದು ಹೇಳಿರಲಿಲ್ಲ. ಆದರೆ ಶೆಹನಾಜ್ ಅವರು ಸಿದ್ದಾರ್ಥ್ ಮೇಲಿನ ಪ್ರೀತಿಯನ್ನು ಅನೇಕ ಬಾರಿ ಹೊರಹಾಕಿದ್ದರು. ಸಿದ್ದಾರ್ಥ್ ಶುಕ್ಲಾ ಅವರು ಶೆಹನಾಜ್ ಕೈಮೇಲೆ ಪ್ರಾಣ ಬಿಟ್ಟಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

Curated byಪದ್ಮಶ್ರೀ ಭಟ್ | Vijaya Karnataka Web 3 Sep 2021, 3:55 pm
ಹೃದಯಾಘಾತದಿಂದ 40ನೇ ವಯಸ್ಸಿಗೆ ನಿಧನರಾದ 'ಬಿಗ್ ಬಾಸ್ 13' ವಿಜೇತ, ನಟ ಸಿದ್ದಾರ್ಥ್ ಶುಕ್ಲಾ ಅವರ ಅಂತ್ಯಕ್ರಿಯೆ ಕಾರ್ಯ ಆರಂಭವಾಗಿದೆ. ಮುಂಬೈನ ಕೂಪರ್ ಆಸ್ಪತ್ರೆಯಲ್ಲಿ ಸಿದ್ದಾರ್ಥ್ ಅವರ ನಿಧನದ ವಿಷಯವನ್ನು ಅಧಿಕೃತವಾಗಿ ತಿಳಿಸಲಾಗಿದೆ, ದೇಹದ ಮರಣೋತ್ತರ ಪರೀಕ್ಷೆ ಕೂಡ ಮಾಡಲಾಗಿದೆ. oshiwara crematorium ಅಲ್ಲಿ ಸಿದ್ದಾರ್ಥ್ ಅಂತ್ಯಕ್ರಿಯೆ ನಡೆಯಲಿದೆ. ಈಗಾಗಲೇ ಸಾಕಷ್ಟು ಬಾಲಿವುಡ್ ನಟ-ನಟಿಯರು ಸಿದ್ದಾರ್ಥ್ ದೇಹದ ಅಂತಿಮ ದರ್ಶನ ಪಡೆದಿದ್ದಾರೆ.
Vijaya Karnataka Web bigg boss 13 winner sidharth shukla breathed his last in shehnaaz gills arms
ಗೆಳತಿ ಶೆಹನಾಜ್ ಗಿಲ್ ಕೈ ಮೇಲೆಯೇ ಪ್ರಾಣಬಿಟ್ಟಿರುವ 'ಬಿಗ್ ಬಾಸ್ 13' ವಿಜೇತ ಸಿದ್ದಾರ್ಥ್ ಶುಕ್ಲಾ


ನಟಿ ಡೆವೊಲಿನಾ ಭಟ್ಟಾಚಾರ್ಯ, ಅಲಿ ಗೋನಿ, ಅರ್ಜುನ್ ಬಿಜ್ಲಾನಿ, ಅಭಿನವ್ ಶುಕ್ಲಾ, ವರುಣ್ ಧವನ್, ರಾಜ್‌ಕುಮಾರ್ ರಾವ್, ರಾಖಿ ಸಾವಂತ್, ಜಾನ್ ಕುಮಾರ್ ಶಾನು, ರಶ್ಮಿ ದೇಸಾಯಿ, ನಿಕ್ಕಿ ತಂಬೋಲಿ, ಯುವಿಕಾ ಚೌಧರಿ, ಪ್ರಿನ್ಸ್ ನರುಲಾ, ಆರತಿ ಸಿಂಗ್, ಗೌಹರ್ ಖಾನ್ ಮುಂತಾದವರು ಈಗಾಗಲೇ ಸಿದ್ದಾರ್ಥ್ ಪಾರ್ಥಿವ ಶರೀರದ ದರ್ಶನ ಪಡೆದಿದ್ದಾರೆ. ಶೆಹನಾಜ್ ಅವರ ಸ್ಥಿತಿ ನೋಡಿ ಅಭಿಮಾನಿಗಳು ಕಂಬನಿ ಸುರಿಸುತ್ತಿದ್ದಾರೆ. ಈ ರೀತಿ ಶೆಹನಾಜ್ ಅವರನ್ನು ನೋಡಲು ಆಗುತ್ತಿಲ್ಲ ಎಂದು ಸಾಕಷ್ಟು ಜನರು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕುತ್ತಿದ್ದಾರೆ. ಶೆಹನಾಜ್ ಅವರ ಕೈಮೇಲೆ ಸಿದ್ದಾರ್ಥ್ ಶುಕ್ಲಾ ಪ್ರಾಣಬಿಟ್ಟಿದ್ದರು ಎಂದು ಹೇಳಲಾಗುತ್ತಿದೆ.

ಬಹಳ ಆತ್ಮೀಯತೆಯಿಂದ ಇದ್ದ ಸಿದ್ದಾರ್ಥ್ ಶುಕ್ಲಾ, ಶೆಹನಾಜ್

ಸಿದ್ದಾರ್ಥ್ ಅವರ ಗರ್ಲ್‌ಫ್ರೆಂಡ್ ಶೆಹನಾಜ್ ಗಿಲ್ ಅವರು ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಆಗಮಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಈ ಜೋಡಿ ತುಂಬ ಆತ್ಮೀಯತೆಯಿಂದ ಇತ್ತು. ದೊಡ್ಮನೆಯಿಂದ ಹೊರಗಡೆ ಬಂದಮೇಲೆ ಅವರಿಬ್ಬರು ಸಾಕಷ್ಟು ಜಾಹೀರಾತು, ಆಲ್ಬಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದರು. ಅವರಿಬ್ಬರು ಮದುವೆಯಾಗುತ್ತಾರೆ ಎಂಬ ಮಾತು ಕೂಡ ಕೇಳಿ ಬಂದಿತ್ತು. ಹೀಗಿರುವಾಗ ಶೆಹನಾಜ್‌ರನ್ನು ಬಿಟ್ಟು ಸಿದ್ದಾರ್ಥ್ ಶುಕ್ಲಾ ಇಹಲೋಕ ತ್ಯಜಿಸಿದ್ದಾರೆ.

ಸಿದ್ದಾರ್ಥ್ ಶುಕ್ಲಾ ಅವರು ಶೆಹನಾಜ್ ಕೈಮೇಲೆ ಪ್ರಾಣ ಬಿಟ್ಟಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ರಾತ್ರಿ 9.30ಕ್ಕೆ (ಸೆ 1) ಸಿದ್ದಾರ್ಥ್ ಮನೆಗೆ ಆಗಮಿಸಿದ್ದರು. ಆ ವೇಳೆ ಸಿದ್ದಾರ್ಥ್ ಆರೋಗ್ಯ ಚೆನ್ನಾಗಿರಲಿಲ್ಲ.

ನಟ ಸಿದ್ದಾರ್ಥ್‌ ಶುಕ್ಲಾಗೆ ನೀರು ಕೊಟ್ಟು, ಮಲಗು ಎಂದಿದ್ದ ತಾಯಿ; ಚಿರನಿದ್ರೆಗೆ ಜಾರಿಬಿಟ್ಟ ಬಿಗ್ ಬಾಸ್ 13 ವಿಜೇತ

ಶೆಹನಾಜ್ ಅವರು ಸಿದ್ದಾರ್ಥ್‌ರನ್ನು ಎಷ್ಟೆ ಎಬ್ಬಿಸಿದರೂ ಏಳಲೇ ಇಲ್ಲ

ಆಗ ಸಿದ್ದಾರ್ಥ್ ಮನೆಯಲ್ಲಿ ಶೆಹನಾಜ್, ಸಿದ್ದಾರ್ಥ್ ತಾಯಿ ಕೂಡ ಇದ್ದರು. ಮೊದಲು ಸಿದ್ದಾರ್ಥ್‌ಗೆ ಲಿಂಬೆ ಹಣ್ಣಿನ ನೀರನ್ನು ನೀಡಿದ್ದರು. ಸಿದ್ದಾರ್ಥ್‌ಗೆ ಹಿಂಸೆ ಆಗುತ್ತಿದ್ದರಿಂದ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಶೆಹನಾಜ್ ಹೇಳಿದ್ದಾರೆ. ನಿದ್ದೆ ಮಾಡಲು ಕೂಡ ಆಗದಿರೋದಕ್ಕೆ ನನ್ನ ಜೊತೆ ಇರು ಎಂದು ಶೆಹನಾಜ್‌ಗೆ ಸಿದ್ದಾರ್ಥ್ ಹೇಳಿದ್ದಾರೆ.

ಸುಮಾರು ರಾತ್ರಿ 1.30ಗೆ ಸಿದ್ದಾರ್ಥ್‌ ಶೆಹನಾಜ್ ಮಡಿಲ ಮೇಲೆ ನಿದ್ದೆ ಮಾಡಿದ್ದಾರೆ. ಆನಂತರದಲ್ಲಿ ಅವರು ದೂರ ಹೋಗಿದ್ದಾರೆ. ಶೆಹನಾಜ್ ಕೂಡ ಆಮೇಲೆ ನಿದ್ದೆ ಹೋಗಿದ್ದಾರೆ. ಬೆಳಗ್ಗೆ 7ಗಂಟೆಗೆ ಶೆಹನಾಜ್ ಎದ್ದಾಗ ಸಿದ್ದಾರ್ಥ್‌ ಹೇಗೆ ಮಲಗಿದ್ದರೋ ಅದೇ ಸ್ಥಿತಿಯಲ್ಲಿ ಇದ್ದದ್ದು ಕಂಡು ಬಂತು. ಸಿದ್ದಾರ್ಥ್‌ ಮಲಗಿದ್ದಾಗ ಯಾವುದೇ ಚಲನೆಯೂ ಕಂಡುಬಂದಿಲ್ಲ. ಶೆಹನಾಜ್‌ ಅವರು ಸಿದ್ದಾರ್ಥ್‌ರನ್ನು ಎಬ್ಬಿಸಲು ಪ್ರಯತ್ನಪಟ್ಟಾಗ ಸಿದ್ದಾರ್ಥ್‌ ಏಳಲೇ ಇಲ್ಲ.

Shehnaaz Gill: ಬಾಯ್‌ಪ್ರೆಂಡ್ ಸಿದ್ದಾರ್ಥ್ ಶುಕ್ಲಾ ನಿಧನದ ಸುದ್ದಿ ಕೇಳಿ ಮಗಳು ಶೆಹನಾಜ್ ಗಿಲ್‌ ಚೆನ್ನಾಗಿಲ್ಲ ಎಂದ ತಂದೆ

ಸಿದ್ದಾರ್ಥ್ ಸಹೋದರೆಯನ್ನು ಕರೆದ ಶೆಹನಾಜ್

12ನೇ ಮಹಡಿಯಿಂದ ಸಿದ್ದಾರ್ಥ್‌ ಕುಟುಂಬ ವಾಸ ಮಾಡುತ್ತಿದ್ದ 5ನೇ ಮಹಡಿಗೆ ಶೆಹನಾಜ್ ಬಂದರು. ಸಿದ್ದಾರ್ಥ್‌ ಸಹೋದರಿಗೆ ಶೆಹನಾಜ್ ಈ ವಿಷಯ ತಿಳಿಸಿದರು. ಆಗ ಅವರು ಫ್ಯಾಮಿಲಿ ಡಾಕ್ಟರ್‌ಗೆ ಕರೆ ಮಾಡಿ ಕರೆಸಿಕೊಂಡಿದ್ದಾರೆ. ಆಗ ಅವರು ಸಿದ್ದಾರ್ಥ್ ಬದುಕಿಲ್ಲ ಎಂದು ಹೇಳಿದ್ದಾರೆ. ಸಿದ್ದಾರ್ಥ್ ಸಾವಿನಿಂದ ಶೆಹನಾಜ್ ಅವರು ತುಂಬ ಶಾಕ್‌ನಲ್ಲಿದ್ದಾರೆ. ಬಿಗ್ ಬಾಸ್‌ಗೆ ಕಾಲಿಟ್ಟ ನಂತರದಲ್ಲಿ ಶೆಹನಾಜ್ ಹಾಗೂ ಸಿದ್ದಾರ್ಥ್ ತುಂಬ ಆತ್ಮೀಯತೆಯಿಂದ ಇದ್ದರು. ಸಾಕಷ್ಟು ಬಾರಿ ನನಗೆ ಸಿದ್ದಾರ್ಥ್ ಶುಕ್ಲಾ ಎಂದರೆ ತುಂಬ ಇಷ್ಟ ಎಂದು ಬಿಗ್ ಬಾಸ್ ಮನೆಯಲ್ಲಿ, ಸಾಕಷ್ಟು ಕಾರ್ಯಕ್ರಮಗಳಲ್ಲಿ ಶೆಹನಾಜ್ ಹೇಳಿದ್ದಾರೆ.

Sidnaaz ಹ್ಯಾಶ್‌ಟ್ಯಾಗ್ ಸೃಷ್ಟಿ ಆಗಿತ್ತು

ಬಿಗ್ ಬಾಸ್ 13 ನಂತರದಲ್ಲಿ ಅವರ ಜೋಡಿ ಕಂಡು ಸಾಕಷ್ಟು ಜನರು ಖುಷಿಪಟ್ಟಿದ್ದರು. Sidnaaz ಎಂಬ ಹ್ಯಾಶ್‌ಟ್ಯಾಗ್‌ನಡಿ ಅಭಿಮಾನಿಗಳು ಸೋಶಿಯಲ್ ಮೀಡಿಯಾ ಪೋಸ್ಟ್ ಮಾಡುತ್ತಿದ್ದರು. ಇಲ್ಲಿಯವರೆಗೆ 7.7 ಮಿಲಿಯನ್ ಪೋಸ್ಟ್‌ಗಳು Sidnaaz ಹ್ಯಾಶ್‌ಟ್ಯಾಗ್ ಅಡಿ ಪೋಸ್ಟ್ ಆಗಿವೆ.

ಬಿಗ್ ಬಾಸ್ ಓಟಿಟಿ, ಡ್ಯಾನ್ಸ್ ದೀವಾನೆ ಕಾರ್ಯಕ್ರಮಕ್ಕೆ ಈ ಜೋಡಿ ಒಟ್ಟಾಗಿ ಬಂದಿತ್ತು. ಅವರಿಬ್ಬರ ಫೋಟೋ-ವಿಡಿಯೋಗಳು ಸಾಕಷ್ಟು ವೈರಲ್ ಆಗಿತ್ತು. 'ಡ್ಯಾನ್ಸ್ ದೀವಾನೆ' ಶೋನಲ್ಲಿ ಸಿದ್ದಾರ್ಥ್-ಶೆಹನಾಜ್ ಒಟ್ಟಿಗೆ ಡ್ಯಾನ್ಸ್ ಮಾಡಿದ್ದರು. ಇಂದಿಗೂ ಕೂಡ ಸಿದ್ದಾರ್ಥ್-ಶೆಹನಾಜ್ ಅವರು ಬಿಗ್ ಬಾಸ್‌ ಶೋನಲ್ಲಿ ಕಳೆದ ಕ್ಷಣದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ.

'ಬಿಗ್ ಬಾಸ್' ವಿನ್ನರ್ ಸಿದ್ದಾರ್ಥ್‌ ಶುಕ್ಲಾ ನಿಧನಕ್ಕೆ ನಟಿ ಸಂಜನಾ ಗಲ್ರಾನಿ ಸಂತಾಪ

ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌