ಆ್ಯಪ್ನಗರ

'ನನ್ನ ಮೇಲೆ ಅತ್ಯಾಚಾರ ಆಗುವ ಸಂಭವ ಇತ್ತು'- ಶಾಕಿಂಗ್ ಹೇಳಿಕೆ ನೀಡಿದ ನಟಿ ಅಮೀಷಾ ಪಟೇಲ್!

ಚುನಾವಣೆ ಬಂತೆಂದರೆ, ಸಾಮಾನ್ಯವಾಗಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಸ್ಟಾರ್ ನಟ-ನಟಿಯರು ಬರುತ್ತಾರೆ. ಇದೀಗ ಹಾಗೇ ಸ್ಟಾರ್ ಪ್ರಚಾರಕಿಯಾಗಿ ಬಾಲಿವುಡ್‌ ನಟಿ ಅಮೀಷಾ ಪಟೇಲ್ ಸಂಕಷ್ಟ ಅನುಭವಿಸಿದ್ದಾರೆ.

Vijaya Karnataka Web 29 Oct 2020, 7:07 pm
ಈಚೆಗಷ್ಟೇ ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕಿಯಾಗಿ ಹೋಗಿದ್ದ ನಟಿ ಅಮೀಷಾ ಪಟೇಲ್, ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. 'ನನ್ನ ಮೇಲೆ ಅತ್ಯಾಚಾರ ಆಗುವ ಸಂಭವ ಇತ್ತು. ನನ್ನನ್ನು ಯಾರಾದರೂ ಕೊಲೆ ಮಾಡಬಹುದು ಎಂಬ ಭಯ ಇತ್ತು' ಎಂದು ಶಾಕಿಂಗ್ ಹೇಳಿಕೆಯನ್ನು ಅಮೀಷಾ ನೀಡಿದ್ದಾರೆ. ಅವರು ಬಿಹಾರಕ್ಕೆ ಲೋಕಜನಶಕ್ತಿ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ತೆರಳಿದ್ದರು.
Vijaya Karnataka Web Ameesha Patel


ಅವರು ಹೇಳಿಕೆ ನೀಡಿರುವ ಒಂದು ಆಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, 'ಆ ಜಾಗ ತುಂಬ ಭಯ ಹುಟ್ಟಿಸುವಂತಹ ವಾತಾವರಣದಿಂದ ಕೂಡಿತ್ತು. ನನ್ನ ಮತ್ತು ಜೊತೆಗಿದ್ದವರ ತಂಡದ ಜೀವದ ಮೇಲೆ ಭಯ ಶುರುವಾಗಿತ್ತು. ಆದರೆ, ನನಗ ಬೇರೆ ದಾರಿ ಇರಲಿಲ್ಲ. ಪರಿಸ್ಥಿತಿಯನ್ನು ನಿಭಾಯಿಸಿಕೊಂಡು, ಸುರಕ್ಷಿತವಾಗಿ ಮುಂಬೈ ಸೇರಿಕೊಂಡೆ' ಎಂದು ಅವರು ಹೇಳಿಕೊಂಡಿದ್ದಾರೆ.

ಲೋಕಜನಶಕ್ತಿ ಪಕ್ಷದ ಅಭ್ಯರ್ಥಿ ಡಾ. ಪ್ರಕಾಶ್ ಚಂದ್ರ ಪರ ಅಮೀಷಾ ಪ್ರಚಾರಕ್ಕೆ ತೆರಳಿದ್ದರು. ಆದರೆ, ಪ್ರಕಾಶ್‌ ಚಂದ್ರ ನನ್ನೊಂದಿಗೆ ಅಸಭ್ಯವಾಗಿ ನಡೆದುಕೊಂಡರು, ಜೀವ ಬೆದರಿಕೆ ಹಾಕುತ್ತಿದ್ದಾರೆ, ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಅಮೀಷಾ ಆರೋಪ ಮಾಡಿದ್ದಾರೆ. 'ನಾನು ಮುಂಬೈಗೆ ಮರಳಿದ ಬಳಿಕ ಪ್ರಕಾಶ್ ಚಂದ್ರ ನನಗೆ ಮೆಸೇಜ್‌ ಮತ್ತು ಕರೆ ಮಾಡಲು ಶುರು ಮಾಡಿದರು. ಅಲ್ಲಿಂದ ಬರುವಾಗ ನನ್ನ ವಿಮಾನ ತಪ್ಪುವಂತೆ ಮಾಡಿ, ಒಂದು ಹಳ್ಳಿಯಲ್ಲಿ ಉಳಿಯುವಂತೆ ಮಾಡಿದರು. ಅಲ್ಲಿಂದ ಹೊರಹೋಗಲು ಅವರು ನನ್ನನ್ನು ಬಿಟ್ಟಿರಲಿಲ್ಲ' ಎಂದು ಅಮೀಷಾ ಹೇಳಿಕೆ ನೀಡಿದ್ದಾರೆ.

ವೇದಿಕೆ ಮೇಲೆ ಬಾಲಿವುಡ್ ತಾರೆಯರ ಬೆಡಗು-ಬಿನ್ನಾಣ ನೋಡೋಕೆ ಎರಡು ಕಣ್ಣು ಸಾಲದು!

'ನಾನು ಮುಂಬೈಗೆ ತಲುಪಿದ ಮೇಲೆ ಈ ಪ್ರಪಂಚಕ್ಕೆ ಸತ್ಯ ತಿಳಿಸಿದ್ದೇನೆ. ಅಲ್ಲಿ ನನ್ನ ಮೇಲೆ ಅತ್ಯಾಚಾರ ನಡೆಸಿ ಕೊಲ್ಲಬಹುದಿತ್ತು. ಅಂತಹ ಸ್ಥಿತಿ ಇತ್ತು. ನನ್ನ ಕಾರಿನ ಸುತ್ತಲೂ ಆತನ ಮನುಷ್ಯರು ಸುತ್ತುವರೆದು ಇರುತ್ತಿದ್ದರು. ಪ್ರಕಾಶ್ ಚಂದ್ರ ಸೂಚನೆ ಸಿಗುವವರೆಗೂ ನನ್ನ ಕಾರು ಮುಂದಕ್ಕೆ ಹೋಗಲು ಅವರು ಬಿಡುತ್ತಿರಲಿಲ್ಲ. ನನ್ನನ್ನು ಒಂದು ರೀತಿಯಲ್ಲಿ ಟ್ರ್ಯಾಪ್ ಮಾಡಿದ್ದರು. ನನ್ನ ಜೀವವನ್ನು ಅಪಾಯಕ್ಕೆ ಸಿಲುಕುವಂತೆ ಮಾಡಿದ್ದರು' ಎಂದು ಅಮೀಷಾ ಹೇಳಿದ್ದಾರೆ. ಆದರೆ, ಈ ಎಲ್ಲ ಆರೋಪಗಳನ್ನು ಪ್ರಕಾಶ್ ಚಂದ್ರ ತಳ್ಳಿ ಹಾಕಿದ್ದಾರೆ ಎನ್ನಲಾಗಿದೆ. ಸದ್ಯ ಬಿಹಾರದಲ್ಲಿ ಮೂರು ಹಂತದ ವಿಧಾನ ಸಭಾ ಚುನಾವಣೆ ನಡೆಯುತ್ತಿದೆ.

ಬಿಹಾರ ಚುನಾವಣೆ 2020: ಎನ್‌ಡಿಎ 50ಕ್ಕೂ ಹೆಚ್ಚು ಸೀಟು ಗೆಲ್ಲಲಿದೆ; ಮತದಾನದ ಬಳಿಕ ಜಿತನ್ ರಾಮ್‌ ಮಾಂಜಿ ಹೇಳಿಕೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌