ಆ್ಯಪ್ನಗರ

ಕೃಷ್ಣಮೃಗ ಬೇಟೆ ಪ್ರಕರಣ: ಸಂಬಂಧಪಟ್ಟ ಬಾಲಿವುಡ್ ತಾರೆಗಳಿಗೆ ಹೊಸ ನೋಟಿಸ್!

1998ರ ಬ್ಲಾಕ್ ಬೂಸ್ಟರ್ ಚಿತ್ರ 'ಹಮ್ ಸಾಥ್ ಸಾಥ್ ಹೈನ್' ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ದೋಷಿ ಎಂದು ಪರಿಗಣಿಸಿದ ಸಿಜೆಎಂ ನ್ಯಾಯಾಲಯ, ಐದು ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿತ್ತು.ಆದರೆ, ಸಹ ನಟರಾದ ಸೈಫ್ ಅಲಿಖಾನ್, ನೀಲಂ, ಮತ್ತು ಟಬು ಅವರನ್ನು ದೋಷಮುಕ್ತಗೊಳಿಸಲಾಗಿತ್ತು.

Vijaya Karnataka Web 22 May 2019, 6:13 pm
ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಸಿಲುಕಿದ್ದ ಬಾಲಿವುಡ್ ಸೆಲೆಬ್ರಟಿಗಳಿಗೆ ಮತ್ತೆ ನೋಟಿಸ್ ಜಾರಿ ಮಾಡಲಾಗಿದೆ. 1998ರಲ್ಲಿ ನಡೆದಿದ್ದ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಬಾಲಿವುಡ್ ನಟ ಸೈಫ್ ಅಲಿಖಾನ್ ಹಾಗೂ ನಟಿಯರಾದ ಸೊನಾಲಿ ಬೇಂದ್ರೆ, ನೀಲಂ ಕೊಠಾರಿ, ಟಬುಗೆ ರಾಜಸ್ತಾನ ಹೈಕೋರ್ಟ್‌ನ ಜೋಧ್‌ಪುರ ಪೀಠ ಮತ್ತೆ ಹೊಸದಾದ ನೋಟಿಸ್ ನೀಡಿದೆ. ಅವರೆಲ್ಲರನ್ನು ದೋಷಮುಕ್ತಗೊಳಿಸಿ ಕಳೆದ ವರ್ಷ ಏಪ್ರಿಲ್ 5 ರಂದು ಸಿಜೆಎಂಸಿ ನ್ಯಾಯಾಲಯ ತೀರ್ಪು ನೀಡಿತ್ತು.
Vijaya Karnataka Web blackbuck2205


ಇದೀಗ, ಈ ತೀರ್ಪಿನ ವಿರುದ್ಧ ರಾಜಸ್ತಾನ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟಿನ ಏಕ ಸದಸ್ಯ ಪೀಠ ಈ ನೋಟಿಸ್ ನೀಡಿದೆ. ಕೃಷ್ಣಮೃಗ ಬೇಟೆ ಪ್ರದೇಶದಲ್ಲಿ ಸೈಫ್ ಅಲಿ ಖಾನ್ ಜೊತೆಯಲ್ಲಿದ್ದ ದುಷ್ಯಂತ್ ಸಿಂಗ್ ಅವರಿಗೂ ನೋಟಿಸ್ ನೀಡಲಾಗಿದೆ. ಎಂಟು ವಾರಗಳ ನಂತರ ಈ ಪ್ರಕರಣದ ವಿಚಾರಣೆ ನಡೆಸುವುದಾಗಿ ನ್ಯಾಯಾಧೀಶರಾದ ಗಾರ್ಗ್ ಅವರು ನಿರ್ದೇಶಿಸಿದ್ದಾರೆ.

ಈ ಮೊದಲು ಆರೋಪಗಳಿಂದ ದೋಷಮುಕ್ತ ಗೊಳಿಸಿರುವುದನ್ನು ಪ್ರಶ್ನಿಸಿ ರಾಜ್ಯಸರ್ಕಾರ ಸಲ್ಲಿಸಿರುವ ಮೇಲ್ಮನವಿ ಕುರಿತು ಪ್ರತಿವಾದಿಗಳಿಗೆ ಮಾರ್ಚ್ 11ರಂದು ಹೈಕೋರ್ಟ್ ನೋಟಿಸ್ ನೀಡಿತ್ತು. 1998ರ ಬ್ಲಾಕ್ ಬೂಸ್ಟರ್ ಚಿತ್ರ 'ಹಮ್ ಸಾಥ್ ಸಾಥ್ ಹೈನ್' ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ದೋಷಿ ಎಂದು ಪರಿಗಣಿಸಿದ ಸಿಜೆಎಂ ನ್ಯಾಯಾಲಯ, ಐದು ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿತ್ತು.ಆದರೆ, ಸಹ ನಟರಾದ ಸೈಫ್ ಅಲಿಖಾನ್, ನೀಲಂ, ಮತ್ತು ಟಬು ಅವರನ್ನು ದೋಷಮುಕ್ತಗೊಳಿಸಲಾಗಿತ್ತು.

ಇದೀಗ, ಈ ಎಲ್ಲ ಬಾಲಿವುಡ್ ನಟನಟಿಯರಿಗೆ ಕಂಟಕ ಮತ್ತೆ ವಕ್ಕರಿಸಿದಂತಾಗಿದೆ. ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿ ಇರುವ ಮೂಲಕ ಈ ತಾರೆಯರ ಪರಿಸ್ಥಿತಿ ಏನಾಗಲಿದೆ ಎಂದು ಈಗಲೇ ಹೇಳುವುದು ಕಷ್ಟ! ಆದರೆ, ಈ ಎಲ್ಲ ಸೆಲೆಬ್ರಟಿಗಳ ತಾರಾಜೀವನಕ್ಕಂತೂ ಈ ಪ್ರಕರಣದಿಂದ ಹೆಚ್ಚಿನ ತೊಂದರೆಯೇನೂ ಆಗಿಲ್ಲ ಎನ್ನಬಹುದು. ಒಟ್ಟಿನಲ್ಲಿ, ಹೊದೆಯಾ ಬಾಗಿಲಲ್ಲಿ ಎಂದು ಈ ಸಿನಿಮಾ ತಾರೆಯರು ನಿಟ್ಟುಸಿರು ಬಿಟ್ಟು ವರ್ಷದಲ್ಲೇ ಬಂದೆಯಾ ಗವಾಕ್ಷಿಯಲ್ಲಿ ಎಂದು ಎದುಸಿರು ಬಿಡುವಂತಾಗಿದೆ ಅವರ ಸ್ಥಿತಿ ಎನ್ನಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌