ಆ್ಯಪ್ನಗರ

Akshay Kumar Advertisement: ನಾನು ಪಾನ್ ಮಸಾಲ ಜಾಹೀರಾತಿಗಾಗಿ ಪಡೆದ ಹಣವನ್ನು ಒಳ್ಳೆಯ ಉದ್ದೇಶಕ್ಕೆ ಬಳಸುವೆ: ಕ್ಷಮೆ ಕೇಳಿದ 'ಪದ್ಮಶ್ರೀ' ಅಕ್ಷಯ್ ಕುಮಾರ್

'ಪದ್ಮಶ್ರೀ' ಪುರಸ್ಕೃತ ಬಾಲಿವುಡ್ ನಟತ್ರಯರಾದ ಶಾರುಖ್ ಖಾನ್, ಅಕ್ಷಯ್ ಕುಮಾರ್, ಅಜಯ್ ದೇವಗನ್ ಅವರು ಪಾನ್ ಮಸಾಲ ಜಾಹೀರಾತಿನಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಹಿಂದೆ "ನನಗೆ ಗುಟ್ಕಾ ಕಂಪೆನಿಗಳು ಜಾಹೀರಾತು ಮಾಡಿ ಎಂದು ಭಾರೀ ಹಣ ನೀಡಲು ಮುಂದೆ ಬರುತ್ತಾರೆ. ಯಾವುದೇ ಕಾರಣಕ್ಕೂ ನಾನು ಆ ರೀತಿ ಉತ್ಪನ್ನ ಪ್ರಚಾರ ಮಾಡುವುದಿಲ್ಲ" ಎಂದು ಹೇಳಿಕೆ ನೀಡಿದ್ದ ಅಕ್ಷಯ್ ಕುಮಾರ್ ಅವರೇ ಮತ್ತೆ ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ನಂತರ ಅವರು ಜಾಹೀರಾತಿನಿಂದ ಹಿಂದೆ ಸರಿದಿದ್ದಾರೆ.

Authored byಪದ್ಮಶ್ರೀ ಭಟ್ | Vijaya Karnataka Web 21 Apr 2022, 10:44 am

ಹೈಲೈಟ್ಸ್‌:

  • ಪಾನ್ ಮಸಾಲ ಜಾಹೀರಾತಿನಲ್ಲಿ ಶಾರುಖ್ ಖಾನ್, ಅಜಯ್ ದೇವಗನ್ ಜೊತೆ ಅಕ್ಷಯ್ ಕುಮಾರ್
  • ಫಿಟ್‌ನೆಸ್, ಆರೋಗ್ಯದ ಕಡೆಗೆ ಗಮನ ಕೊಡುವ ಅಕ್ಷಯ್‌ ಕುಮಾರ್‌ರಿಂದ ಪಾನ್ ಮಸಾಲ ಜಾಹೀರಾತು ಪ್ರಚಾರ
  • ವಿರೋಧ ವ್ಯಕ್ತವಾದ ನಂತರ ಕ್ಷಮೆ ಕೇಳಿದ ಅಕ್ಷಯ್ ಕುಮಾರ್

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web akshay
'ಪದ್ಮಶ್ರೀ' ಪುರಸ್ಕೃತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು ವ್ಯಾಪಕ ಚರ್ಚೆಯಾಗಿತ್ತು. ಇವರ ಜೊತೆ ಶಾರುಖ್ ಖಾನ್ ( Shahrukh Khan ), ಅಜಯ್ ದೇವಗನ್ ಇದ್ದರೂ ಕೂಡ, ಸದಾ ಫಿಟ್‌ನೆಸ್‌ಗೆ ಗಮನ ಕೊಡುವ ಅಕ್ಷಯ್ ಕುಮಾರ್ ಜೀವನ ಶೈಲಿ ನೋಡಿದವರು ಅವರನ್ನು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡಿದ್ದರು. ಅಜಯ್ ದೇವಗನ್ ( Ajay Devgan ) ಈ ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದು, ಜನರಿಂದ ವಿರೋಧ ಎದುರಿಸುವುದು ಹೊಸತೇನಲ್ಲ ಬಿಡಿ.

ಅನೇಕರಿಗೆ ಮಾದರಿಯಾಗಿದ್ದ ಅಕ್ಷಯ್ ಕುಮಾರ್

ಸಿನಿಮಾದಲ್ಲಿ ವಿಧ ವಿಧವಾದ ಸ್ಟಂಟ್ ಮಾಡುವ 'ಎನರ್ಜಿಟಿಕ್ ಹೀರೋ', 'ಆಕ್ಷನ್ ಸ್ಟಾರ್' ಅಕ್ಷಯ್ ಕುಮಾರ್ ( Akshay Kumar ), ಈ ರೀತಿ ಇರಲು ಸಾಕಷ್ಟು ಪರಿಶ್ರಮ ಹಾಕುತ್ತಾರೆ. ಬೆಳಗ್ಗೆ ಏಳುವುದರಿಂದ ಹಿಡಿದು, ರಾತ್ರಿ ನಿದ್ದೆ ಮಾಡುವವರೆಗೂ ಕೂಡ ಶಿಸ್ತಿನ ಜೀವನ ನಡೆಸುತ್ತಾರೆ. ಊಟ-ತಿಂಡಿ, ನಿದ್ದೆ ಮಾಡುವ ಸಮಯ, ಪಾನೀಯಗಳಲ್ಲಿ ಕೂಡ ತುಂಬ ಮುತುವರ್ಜಿ ವಹಿಸಿ, ಆರೋಗ್ಯಕ್ಕೆ ಹೆಚ್ಚಿನ ಗಮನ ಕೊಡುವ ಅಕ್ಷಯ್ ಕುಮಾರ್ ಅನೇಕರಿಗೆ ಮಾದರಿಯಾಗಿದ್ದರು. ಎಷ್ಟೋ ಜನರು ಇವರ ಹವ್ಯಾಸ ನೋಡಿ ನಾವು ಕೂಡ ಹೀಗಿರಬೇಕು ಎಂದು ಅಂದುಕೊಂಡಿದ್ದಿದೆ. ಹೀಗಿರುವಾಗ ಅಕ್ಷಯ್ ಕುಮಾರ್ ಪಾನ್ ಮಸಾಲ ಜಾಹೀರಾತು ಮಾಡಿ ಅದನ್ನು ಸೇವಿಸಿ ಎಂದರೆ ಹೇಗೆ?
Bollywood Superstar: ಪಾನ್ ಮಸಾಲ ಜಾಹೀರಾತಿನಲ್ಲಿ 'ಪದ್ಮಶ್ರೀ' ಪುರಸ್ಕೃತ ಶಾರುಖ್ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್; ನೆಟ್ಟಿಗರಿಂದ ತರಾಟೆ

ಕ್ಷಮೆ ಕೇಳಿದ ಅಕ್ಷಯ್ ಕುಮಾರ್
ನನ್ನನ್ನು ಕ್ಷಮಿಸಿ
ನನ್ನ ಅಭಿಮಾನಿಗಳಿಗೆ, ಹಿತೈಷಿಗಳಿಗೆ ಎಲ್ಲರಿಗೂ ನಾನು ಕ್ಷಮೆ ಕೇಳಲು ಬಯಸುವೆ. ಕೆಲ ದಿನಗಳಿಂದ ನಿಮ್ಮೆಲ್ಲರ ಪ್ರತಿಕ್ರಿಯೆ ನನ್ನ ಮೇಲೆ ತುಂಬ ಪರಿಣಾಮ ಬೀರಿದೆ. ನಾನು ತಂಬಾಕು ಸೇವನೆಯನ್ನು ಉತ್ತೇಜಿಸುವುದಿಲ್ಲ. ನಾನು ಪಾನ್ ಮಸಾಲ ಜಾಹೀರಾತಿನ ಜೊತೆ ಕೈಜೋಡಿಸಿರವುದುರ ಕುರಿತು ನಿಮ್ಮ ಪ್ರತಿಕ್ರಿಯೆಗಳನ್ನು ನಾನು ಗೌರವಿಸುತ್ತೇನೆ. ಮಾನವೀಯತೆ ಕಾರಣದಿಂದ ಈ ಜಾಹೀರಾತಿನಿಂದ ಹಿಂದೆ ಸರಿಯುವೆ. ಇದರಿಂದ ಪಡೆದ ಸಂಭಾವನೆಯನ್ನು ನಾನು ಒಳ್ಳೆಯ ಉದ್ದೇಶಕ್ಕಾಗಿ ಬಳಸುವೆ. ಈಗಾಗಲೇ ಮಾಡಿಕೊಂಡ ಒಪ್ಪಂದದ ಅವಧಿ ಮುಗಿಯುವವರೆಗೂ ಬ್ರ್ಯಾಂಡ್‌ನವರು ಜಾಹೀರಾತು ಪ್ರಸಾರ ಮಾಡಬಹುದು. ಮುಂಬರುವ ದಿನಗಳಲ್ಲಿ ಜಾಹೀರಾತು ಆಯ್ಕೆ ಮಾಡಿಕೊಳ್ಳುವಾಗ ಮುನ್ನಚ್ಚೆರಿಕೆ ವಹಿಸುವೆ. ನಿಮ್ಮ ಪ್ರೀತಿ ಹಾರೈಕೆ ಸದಾ ಇರಲಿ

ಮಲ್ಟಿಸ್ಟಾರ್‌ ಟ್ರೆಂಡ್‌ಗೆ ಮೊರೆ ಹೋದ ಬಾಲಿವುಡ್‌ ಜಗತ್ತು!

ಈ ಹಿಂದೆ ತಂಬಾಕು ಉತ್ಪನ್ನ ಪ್ರಚಾರ ಮಾಡಲ್ಲ ಎಂದಿದ್ದ ಅಕ್ಷಯ್ ಕುಮಾರ್
ಈ ಹಿಂದೆ ಸ್ವಸ್ಥ ಭಾರತ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅಕ್ಷಯ್ ಕುಮಾರ್ ಅವರು, "ನನಗೆ ಗುಟ್ಕಾ ಕಂಪೆನಿಗಳು ಜಾಹೀರಾತು ಮಾಡಿ ಎಂದು ಭಾರೀ ಹಣ ನೀಡಲು ಮುಂದೆ ಬರುತ್ತಾರೆ. ಯಾವುದೇ ಕಾರಣಕ್ಕೂ ನಾನು ಆ ರೀತಿ ಉತ್ಪನ್ನ ಪ್ರಚಾರ ಮಾಡುವುದಿಲ್ಲ" ಎಂದು ಹೇಳಿಕೆ ನೀಡಿದ್ದರು. ಈ ರೀತಿ ಮಾತನಾಡಿದ್ದ ಅಕ್ಷಯ್ ಮತ್ತೆ ಪಾನ್ ಮಸಾಲ ಜಾಹೀರಾತು ಪ್ರಚಾರ ಮಾಡಿದ್ದು ಅನೇಕರ ಆಕ್ರೋಶಕ್ಕೆ ಕಾರಣವಾಗಿತ್ತು.
Fill this survey and get a chance to win an attractive gift
ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌