ಆ್ಯಪ್ನಗರ

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹಣ ಇಲ್ಲದೆ ಕಣ್ಣೀರು ಹಾಕುತ್ತಿರುವ ಬಾಲಿವುಡ್‌ ನಟ!

ಜನಸಾಮಾನ್ಯರು ಮಾತ್ರವಲ್ಲದೆ ಸೆಲೆಬ್ರಿಟಿಗಳ ಪಾಲಿಗೂ ಈ ವರ್ಷ ಕರಾಳವಾಗಿದೆ. ಅದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಬಾಲಿವುಡ್‌ ನಟರೊಬ್ಬರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ, ಚಿಕಿತ್ಸೆ ಪಡೆಯಲು ಹಣವಿಲ್ಲದೆ ಕಣ್ಣೀರಿಡುತ್ತಿದ್ದಾರೆ. ಯಾರವರು?

Vijaya Karnataka Web 14 Oct 2020, 4:11 pm
ಬಣ್ಣದ ಲೋಕದಲ್ಲಿ ಚಾಲ್ತಿಯಲ್ಲಿ ಇರುವವರೆಗೆ ಮಾತ್ರ ಸೆಲೆಬ್ರಿಟಿಗಳಿಗೆ ಸಂಭಾವನೆ ರೂಪದಲ್ಲಿ ಹಣ ಹರಿದುಬರುತ್ತಿದೆ. ತೆರೆಮರೆಗೆ ಸರಿಯುತ್ತಿದ್ದಂತೆಯೇ ಆರ್ಥಿಕ ಸಂಕಷ್ಟ ಎದುರಾಗುತ್ತದೆ. ಬಾಲಿವುಡ್‌ ನಟ ಫರಾಜ್‌ ಖಾನ್‌ ಪರಿಸ್ಥಿತಿ ಕೂಡ ಹಾಗೆಯೇ ಆಗಿದೆ. 'ಮೆಹೆಂದಿ', 'ಫರೆಬ್‌' ಮುಂತಾದ ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದ ಅವರಿಗೆ ಈಗ ತೀವ್ರ ಅನಾರೋಗ್ಯ ಕಾಡುತ್ತಿದೆ!
Vijaya Karnataka Web ಫರಾಜ್‌ ಖಾನ್‌


ಶ್ವಾಸಕೋಶದ ಇನ್‌ಫೆಕ್ಷನ್‌ನಿಂದ ಬಳಲುತ್ತಿರುವ ಫರಾಜ್‌ ಖಾನ್‌ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ಕೆಮ್ಮಿನಿಂದ ಬಳಲುತ್ತಿರುವ ಅವರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಕುಟುಂಬದವರ ಬಳಿ ಇದ್ದ ಹಣವೆಲ್ಲ ಖಾಲಿ ಆಗಿದೆ. ಚಿಕಿತ್ಸೆಗಾಗಿ ಇನ್ನೂ 25 ಲಕ್ಷ ರೂ. ಬೇಕಾಗಿದ್ದು, ಅದಕ್ಕಾಗಿ ಜನರಿಂದ ಆರ್ಧಿಕ ನೆರವಿಗಾಗಿ ಬೇಡಿಕೊಂಡಿದ್ದಾರೆ ಫರಾಜ್‌ ಕುಟುಂಬದವರು.

'ಒಂದು ವರ್ಷದಿಂದ ಫರಾಜ್‌ಗೆ ತೀವ್ರ ಕೆಮ್ಮು ಇತ್ತು. ಆಸ್ಪತ್ರೆಗೆ ದಾಖಲಿಸಿದ ಬಳಿಕ ಶ್ವಾಸಕೋಶ ಮಾತ್ರವಲ್ಲದೆ ಮಿದುಳಿನಲ್ಲಿಯೂ ಅವರಿಗೆ ಇನ್‌ಫೆಕ್ಷನ್‌ ಆಗಿರುವುದು ಗೊತ್ತಾಯಿತು. ಕಳೆದ ಕೆಲವು ದಿನಗಳಿಂದ ಅವರು ವೆಂಟಿಲೇಟರ್‌ನಲ್ಲಿ ಇದ್ದಾರೆ. ಬದುಕುಳಿಯುವ ಸಾಧ್ಯತೆ ಶೇ. 50ರಷ್ಟು ಇದೆ ಅಂತ ವೈದ್ಯರು ತಿಳಿಸಿದ್ದಾರೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಆದರೂ ಪ್ರಜ್ಞೆ ಬಂದಿಲ್ಲ. ನಮ್ಮ ಬಳಿ ಇದ್ದ ಹಣವೆಲ್ಲ ಖಾಲಿ ಆಗಿದೆ. ಚಿಕಿತ್ಸೆಗೆ 25 ಲಕ್ಷ ರೂ. ಬೇಕು. ಏನು ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ' ಎಂದಿದ್ದಾರೆ ಫರಾಜ್‌ ಸಹೋದರ ಫಹ್ಮಾನ್‌ ಖಾನ್‌.

also read: ಹಣವೆಲ್ಲ ಖಾಲಿಯಾಗಿ ಬೈಕ್‌ ಮಾರಿಕೊಳ್ಳುವ ಸ್ಥಿತಿಗೆ ಬಂದ ಖ್ಯಾತ ನಿರೂಪಕ, ಗಾಯಕ! ಕಾರಣ ಏನು?

ಈ ವಿಷಯ ಗೊತ್ತಾಗುತ್ತಿದ್ದಂತೆಯೇ ನಟಿ-ನಿರ್ದೇಶಕಿ ಪೂಜಾ ಭಟ್‌ ಟ್ವೀಟ್‌ ಮಾಡಿದ್ದಾರೆ. 'ದಯವಿಟ್ಟು ಈ ಮಾಹಿತಿಯನ್ನು ಶೇರ್‌ ಮಾಡಿ. ಸಾಧ್ಯವಾದರೆ ನೀವು ಕೂಡ ಹಣದ ಸಹಾಯ ಮಾಡಿ. ನಾನು ಮಾಡಿದ್ದೇನೆ. ನಿಮ್ಮಲ್ಲಿ ಯಾರಾದರೂ ಸಹಾಯ ಮಾಡಿದರೆ ಋಣಿಯಾಗಿರುತ್ತೇವೆ' ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. 1998ರಲ್ಲಿ ತೆರೆಕಂಡ 'ಮೆಹೆಂದಿ' ಸಿನಿಮಾದಲ್ಲಿ ನಟಿ ರಾಣಿ ಮುಖರ್ಜಿ ಜೊತೆ ಫರಾಜ್‌ ನಟಿಸಿದ್ದರು. ಅವರ ತಂದೆ ಯೂಸುಫ್‌ ಖಾನ್‌ ಕೂಡ ಪೋಷಕ ನಟನಾಗಿ ಖ್ಯಾತಿ ಪಡೆದುಕೊಂಡಿದ್ದರು.

also read: ದುಸ್ಥಿತಿಯಲ್ಲಿ ರಾನು ಮಂಡಲ್‌? ಸಿನಿಮೀಯವಾಗಿ ಮಿಂಚಿದ ಗಾಯಕಿಯ ಬದುಕು ಮತ್ತೆ ಬೀದಿಗೆ ಬಂತಾ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌