ಆ್ಯಪ್ನಗರ

ನವಾಜುದ್ದೀನ್ ಸಿದ್ಧಿಕಿ ಕುತ್ತಿಗೆ ಎಳೆದು ಗಾಯಗೊಳಿಸಿದ ಅಭಿಮಾನಿ

ಸೆಟ್ಸ್‌ನಲ್ಲಿ ನವಾಜುದ್ದೀನ್‌ರನ್ನು ನೋಡಿದ ಆನಂದದಲ್ಲಿ ಅಭಿಮಾನಿಗಳು ಅವರ ಜತೆಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಈ ಹಿನ್ನೆಲೆಯಲ್ಲಿ ಅಭಿಮಾನಿಯೊಬ್ಬ ಅತಿ ಉತ್ಸಾಹ ತೋರಿದ್ದಾನೆ. ನವಾಜ್ ಕಾರು ಹತ್ತುವ ಸಂದರ್ಭದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಅವರ ಕುತ್ತಿಗೆ ಹಿಡಿದು ತನ್ನತ್ತ ಬರಸೆಳೆದುಕೊಳ್ಳುವ ಬರದಲ್ಲಿ ಅವರನ್ನು ಕೆಳಗೆ ಬೀಳಿಸಿದ್ದ.

Vijaya Karnataka Web 9 Apr 2019, 4:36 pm
ಅಭಿಮಾನಿಗಳು ಒಮ್ಮೊಮ್ಮೆ ತೋರುವ ಅತಿಯಾದ ಅಭಿಮಾನ ಅತಿರೇಕವಾದಂತಹ ಹಲವಾರು ಉದಾಹರಣೆಗಳಿವೆ. ಇದೀಗ ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿಗೂ ಅಂತಹದ್ದೇ ಘಟನೆ ಎದುರಾಗಿದೆ. ಕೆಲವು ದಿನಗಳ ಹಿಂದೆ ಸಿನಿಮಾ ಚಿತ್ರೀಕರಣಕ್ಕಾಗಿ ಉತ್ತರ ಪ್ರದೇಶದ ಕಾನ್ಪುರಕ್ಕೆ ಹೋದಾಗ ಈ ಘಟನೆ ನಡೆದಿದೆ.
Vijaya Karnataka Web siddiqi


ಸೆಟ್ಸ್‌ನಲ್ಲಿ ನವಾಜುದ್ದೀನ್‌ರನ್ನು ನೋಡಿದ ಆನಂದದಲ್ಲಿ ಅಭಿಮಾನಿಗಳು ಅವರ ಜತೆಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಈ ಹಿನ್ನೆಲೆಯಲ್ಲಿ ಅಭಿಮಾನಿಯೊಬ್ಬ ಅತಿ ಉತ್ಸಾಹ ತೋರಿದ್ದಾನೆ. ನವಾಜ್ ಕಾರು ಹತ್ತುವ ಸಂದರ್ಭದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಅವರ ಕುತ್ತಿಗೆ ಹಿಡಿದು ತನ್ನತ್ತ ಬರಸೆಳೆದುಕೊಳ್ಳುವ ಬರದಲ್ಲಿ ಅವರನ್ನು ಕೆಳಗೆ ಬೀಳಿಸಿದ್ದ.

ಕೂಡಲೆ ಎಚ್ಚರಗೊಂಡ ಭದ್ರತಾ ಸಿಬ್ಬಂದಿ ನವಾಜ್‌ಗೆ ರಕ್ಷಣೆ ಕಲ್ಪಿಸಿ ಅವರನ್ನು ಎಚ್ಚರಿಕೆಯಿಂದ ಕಾರಿಗೆ ಹತ್ತಿಸಿದರು. ಬಳಿಕ ಆ ಅಭಿಮಾನಿಯನ್ನು ಪೊಲೀಸರಿಗೆ ಒಪ್ಪಿಸಿದರು. ಈ ವಿಷಯದ ಬಗ್ಗೆ ನವಾಜ್ ಮಾತನಾಡಿದ್ದು, "ಆ ಅಭಿಮಾನಿಯಿಂದ ನಾನು ಗಾಯಗೊಂಡೆ. ನನ್ನ ಕೈ ಮುರಿಯಿತು. ಸ್ನಾಯು ಸೆಳೆತ ಇದೆ. ಆದರೂ ಏನೂ ಪರ್ವಾಗಿಲ್ಲ. ಏನು ಮಾಡೋಣ? ಅದು ಅವರ ಅಭಿಮಾನ. ಅವರು ಹಾಗೆಯೇ ನಡೆದುಕೊಳ್ಳುತ್ತಾರೆ" ಎಂದಿದ್ದಾರೆ. ಸದ್ಯಕ್ಕೆ ನವಾಜ್ 'ಮೋತಿಚೂರ್ ಚಕ್ನಾಚೂರ್' ಎಂಬ ಸಿನಿಮಾದಲಿ ಬಿಝಿಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌