ಆ್ಯಪ್ನಗರ

ಅರ್ಜೆಂಟೀನಾದ ರೆಸ್ಟೋರಂಟ್‌ಗೆ ಸಲ್ಮಾನ್ ಖಾನ್ ಸಿನಿಮಾ ಹೆಸರು!

ನಟ ಸಲ್ಮಾನ್ ಖಾನ್ ಅವರು ತಮ್ಮ ಮುಂಬರುವ ಬಹುನಿರೀಕ್ಷಿತ 'ದಬಾಂಗ್-3' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಶೂಟಿಂಗ್ ಸದ್ಯಕ್ಕೆ ಮುಂಬೈನಲ್ಲಿ ನಡೆಯುತ್ತಿದೆ. ಈ ಚಿತ್ರದಲ್ಲಿ ಕನ್ನಡದ ನಟ ಕಿಚ್ಚ ಸುದೀಪ್ ಅವರು ಸಹ ಮುಖ್ಯವಾದ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Vijaya Karnataka Web 12 May 2019, 3:10 pm
Vijaya Karnataka Web salman1205
ಬಾಲಿವುಡ್ ಸ್ಟಾರ್ ನಟ, ಸದ್ಯಕ್ಕೆ 'ದಬಾಂಗ್ -3' ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಸಲ್ಮಾನ್ ಖಾನ್ ಅವರಿಗೆ ಇಂಡಿಯಾ ಮೀರಿ ವಿದೇಶಗಳಲ್ಲಿ ಸಹ ಫ್ಯಾನ್ಸ್ ಇದ್ದಾರೆ. ಇದೀಗ, ಅರ್ಜೆಂಟೀನಾದಲ್ಲಿರುವ ರೆಸ್ಟೋರೆಂಟ್‌ವೊಂದಕ್ಕೆ ಸಲ್ಮಾನ್‌ ಖಾನ್‌ ನಟನೆಯ 'ದಬಾಂಗ್‌' ಸಿನಿಮಾದ ಹೆಸರನ್ನೇ ಇಡಲಾಗಿದೆ. 'ಗ್ರ್ಯಾನ್‌ ದಬಾಂಗ್‌' ಎಂಬ ಹೆಸರಿನಲ್ಲಿ ಕಂಗೊಳಿಸುತ್ತಿರುವ ಈ ರೆಸ್ಟೋರೆಂಟ್‌ ಈಗ ಜಗತ್ತಿನ ಹಲವು ಕಡೆ ಸುದ್ದಿಯ ಕೇಂದ್ರಬಿಂದುವಾಗಿದೆ.

ಈ 'ಗ್ರ್ಯಾನ್‌ ದಬಾಂಗ್‌' ರೆಸ್ಟೋರೆಂಟ್‌ನ ಮಾಲೀಕ ನಟ ಸಲ್ಮಾನ್ ಖಾನ್‌ ಅವರ ಕಟ್ಟಾ ಅಭಿಮಾನಿಯಾಗಿದ್ದು, ತಮ್ಮ ಮೆಚ್ಚಿನ ನಟನಿಗೆ ಗೌರವ ನೀಡುವ ಸಲುವಾಗಿ ತಮ್ಮ ಒಡೆತನದ ರೆಸ್ಟೋರೆಂಟ್‌ಗೆ ಸಲ್ಮಾನ್ ಸಿನಿಮಾದ ಹೆಸರಿಟ್ಟಿದ್ದಾರೆ. ಅಷ್ಟೇ ಅಲ್ಲ, ತಮ್ಮ ರೆಸ್ಟೋರೆಂಟ್‌ನ ಗೋಡೆಗಳನ್ನು ಸಲ್ಮಾನ್‌ ಖಾನ್‌ರ ಸಿನಿಮಾ ಪೋಸ್ಟರ್‌ ಹಾಗೂ ವೈಯಕ್ತಿಕ ಫೋಟೋಗಳಿಂದ ಅಲಂಕರಿಸಿದ್ದಾರೆ. ಈ 'ಗ್ರಾನ್
ದಬಾಂಗ್‌' ರೆಸ್ಟೋರೆಂಟ್‌ನ ಫೋಟೋಗಳೀಗ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಸಖತ್ ವೈರಲ್ ಆಗುತ್ತಿವೆ.

ಸದ್ಯಕ್ಕೆ ನಟ ಸಲ್ಮಾನ್ ಖಾನ್ ಅವರು ತಮ್ಮ ಮುಂಬರುವ ಬಹುನಿರೀಕ್ಷಿತ 'ದಬಾಂಗ್-3' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಶೂಟಿಂಗ್ ಸದ್ಯಕ್ಕೆ ಮುಂಬೈನಲ್ಲಿ ನಡೆಯುತ್ತಿದೆ. ಈ ಚಿತ್ರದಲ್ಲಿ ಕನ್ನಡದ ನಟ ಕಿಚ್ಚ ಸುದೀಪ್ ಅವರು ಸಹ ಮುಖ್ಯವಾದ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ, ಈ ಚಿತ್ರದ ಚೀತ್ರೀಕರಣಕ್ಕೆಂದು ನಟ ಸುದೀಪ್ ಅವರು ಮುಂಬೈನಲ್ಲೇ ಇದ್ದು, ನಟ ಸಲ್ಮಾನ್ ಎದುರು ಭರ್ಜರಿಯಾಗಿ ಅಬ್ಬರಿಸುತ್ತಿದ್ದಾರೆ. ಚಿತ್ರದ ನಾಯಕಿಯಾಗಿ ಸೋನಾಕ್ಷಿ ಸಿನ್ಹಾ ನಟಿಸಿದ್ದಾರೆ. ಒಟ್ಟಿನಲ್ಲಿ, ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ವಿದೇಶಗಳಲ್ಲೂ ಭಾರೀ ಫ್ಯಾನ್ಸ್ ಇದ್ದಾರೆ ಈ ಮೂಲಕವೂ ಜಗಜ್ಜಾಹೀರಾಗಿದೆ.

ನಟ ಸಲ್ಮಾನ್ ಖಾನ್ ನಾಯಕತ್ವದ 'ಭಾರತ್' ಚಿತ್ರದ ಶೂಟಿಂಗ್ ಸ್ವಲ್ಪ ದಿನಗಳ ಹಿಂದೆ ಮುಗಿದಿದ್ದು, ಈ ಚಿತ್ರವು ಈ ವರ್ಷದ ಕೊನೆಯಲ್ಲಿ, ಅಂದರೆ ಮುಂಬರುವ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಭಾರತ್ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರಿಗೆ ನಾಯಕಿಯಾಗಿ ನಟಿ ಕತ್ರಿನಾ ಕೈಫ್ ನಟಿಸಿದ್ದಾರೆ. ಸದ್ಯಕ್ಕೆ ಸಲ್ಮಾನ್ ಖಾನ್ ಅವರು 'ದಬಾಂಗ್-3' ಚಿತ್ರದ ನಟನೆಯಲ್ಲಿ ಬ್ಯುಸಿಯಾಗಿದ್ದು, ಆ ಬಳಿಕ 'ಇನ್‌ಶಾಅಲ್ಲಾ' ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. 'ಇನ್‌ಶಾಅಲ್ಲಾ' ಚಿತ್ರಕ್ಕೆ ಆಲಿಯಾ ಭಟ್ ನಾಯಕಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌