ನಟಿ ಕಂಗನಾ ರಣಾವತ್ ಅವರ ಬಂಗಲೆ ಕೆಡವಲು ಬೃಹನ್ ಮುಂಬೈ ಪಾಲಿಕೆ ನೀಡಿದ್ದ ನೋಟಿಸ್ನ್ನು ರದ್ದುಗೊಳಿಸಿದೆ. ಇದರಿಂದ ಕಂಗನಾ ನಿಟ್ಟುಸಿರು ಬಿಡುವಂತಾಗಿದೆ.
ಕೋರ್ಟ್ ಹೇಳಿದ್ದೇನು?
'ಕಾನೂನನ್ನು ದುರುಪಯೋಗ ಮಾಡಿಕೊಂಡು ಈ ರೀತಿ ಮಾಡಲಾಗಿದೆ' ಎಂದು ಹೈಕೋರ್ಟ್ ಹೇಳಿದ್ದು, ಈಗಾಗಲೇ ಕೆಡವಿರುವ ಬಿಲ್ಡಿಂಗ್ ರಿಪೇರಿ ಕಾರ್ಯಕ್ಕೆ ಎಷ್ಟು ಖರ್ಚು ತಗಲುವುದು ಎಂದು ಅಂದಾಜು ಮಾಡಲು ಸರ್ವೇ ಅಧಿಕಾರಿಯನ್ನು ನಿಯೋಜಿಸಿದೆ. 2021ರ ಮಾರ್ಚ್ ಒಳಗೆ ಈ ರಿಪೋರ್ಟ್ ರೆಡಿಯಾಗಿರಬೇಕು ಎಂದು ಹೇಳಲಾಗಿದೆ.
ಏನಿದು ಘಟನೆ?
ಕಾನೂನು ಬಾಹಿರವಾಗಿ ಕಟ್ಟಡ ಕಟ್ಟಲಾಗಿದೆ ಎಂಬ ಆರೋಪದಡಿ (ಬಿಎಂಸಿ ಆಕ್ಟ್ 354A) ಕಂಗನಾ ಅವರ ಆಫೀಸ್ ಕೆಡವಲಾಗಿತ್ತು. ಮುಂಬೈನ ಬಾಂದ್ರಾದ ಪಾಲಿ ಹಿಲ್ನಲ್ಲಿರುವ ಕಂಗನಾ ರಣಾವ ಕಚೇರಿಗೆ ಭೇಟಿ ನೀಡಿದ್ದ ಬೃಹನ್ ಮುಂಬೈ ಪಾಲಿಕೆ ಅಧಿಕಾರಿಗಳು, ಕಚೇರಿಯನ್ನು ಅಕ್ರಮವಾಗಿ ವಿನ್ಯಾಸಗೊಳಿಸಲಾಗಿದೆ ಎಂಬ ಆರೋಪದಡಿಯಲ್ಲಿ ನೋಟಿಸ್ ನೀಡಿದ್ದರು. ಒಟ್ಟು 14 ಉಲ್ಲಂಘನೆ ಮಾಡಿರುವ ಪಟ್ಟಿಯನ್ನು ಬಿಎಂಸಿ ಸಿದ್ಧಗೊಳಿಸಿ, ಕಚೇರಿ ಒಡೆದಿತ್ತು.
ತಿರುಗೇಟು ನೀಡಿದ್ದ ಕಂಗನಾ!
ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಕಂಗನಾ, 'ನನ್ನ ಮುಂಬೈ ಈಗ ಪಾಕ್ ಆಕ್ರಮಿತ ಕಾಶ್ಮೀರವಾಗಿದೆ. ನನ್ನ ಕಚೇರಿ ರಾಮ ಮಂದಿರ. ಅದನ್ನು ಧ್ವಂಸ ಮಾಡುತ್ತಿರುವ ನೀವು ಬಾಬರ್. ಕಚೇರಿ ಒಡೆಯಲು ಬಂದ ಅಧಿಕಾರಿಗಳು ಬಾಬರ್ನ ಸೇನೆ' ಪ್ರಜಾಪ್ರಭುತ್ವದ ಸಾವು' ಎಂದು ತಿರುಗೇಟು ನೀಡಿದ್ದರು.
'
Also Read-ಮಹಾರಾಷ್ಟ್ರ ಮುಖ್ಯಮಂತ್ರಿಗೆ ಏಕವಚನದಲ್ಲಿ ಕ್ಲಾಸ್ ತೆಗೆದುಕೊಂಡ ನಟಿ ಕಂಗನಾ ರಣಾವತ್!
ಉದ್ಭವ್ ಠಾಕ್ರೆಯನ್ನು ತರಾಟೆಗೆ ತೆಗೆದುಕೊಂಡಿದ್ದ ವಿವಾದದ ರಾಣಿ
ಉದ್ಭವ್ ಠಾಕ್ರೆ... ನಿಮಗೆ ಏನು ಅನಿಸುತ್ತಿದೆ? ನೀನು ಸಿನಿಮಾ ಮಾಫಿಯಾದ ಜೊತೆ ಸೇರಿಕೊಂಡು ನನ್ನ ವಿರುದ್ಧ ಸೇಡು ತೀರಿಸಿಕೊಂಡೆ ಎಂದುಕೊಂಡಿದ್ದೀಯಾ?' ಎಂದು ಏಕವಚನದಲ್ಲಿಯೇ ಕಂಗನಾ ರಣಾವತ್ ಮಾತನಾಡಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯನ್ನು ತರಾಟೆಗೆ ತೆಗೆದುಕೊಂಡಿದ್ದರು.
ಕೋರ್ಟ್ ಹೇಳಿದ್ದೇನು?
'ಕಾನೂನನ್ನು ದುರುಪಯೋಗ ಮಾಡಿಕೊಂಡು ಈ ರೀತಿ ಮಾಡಲಾಗಿದೆ' ಎಂದು ಹೈಕೋರ್ಟ್ ಹೇಳಿದ್ದು, ಈಗಾಗಲೇ ಕೆಡವಿರುವ ಬಿಲ್ಡಿಂಗ್ ರಿಪೇರಿ ಕಾರ್ಯಕ್ಕೆ ಎಷ್ಟು ಖರ್ಚು ತಗಲುವುದು ಎಂದು ಅಂದಾಜು ಮಾಡಲು ಸರ್ವೇ ಅಧಿಕಾರಿಯನ್ನು ನಿಯೋಜಿಸಿದೆ. 2021ರ ಮಾರ್ಚ್ ಒಳಗೆ ಈ ರಿಪೋರ್ಟ್ ರೆಡಿಯಾಗಿರಬೇಕು ಎಂದು ಹೇಳಲಾಗಿದೆ.
ಏನಿದು ಘಟನೆ?
ಕಾನೂನು ಬಾಹಿರವಾಗಿ ಕಟ್ಟಡ ಕಟ್ಟಲಾಗಿದೆ ಎಂಬ ಆರೋಪದಡಿ (ಬಿಎಂಸಿ ಆಕ್ಟ್ 354A) ಕಂಗನಾ ಅವರ ಆಫೀಸ್ ಕೆಡವಲಾಗಿತ್ತು. ಮುಂಬೈನ ಬಾಂದ್ರಾದ ಪಾಲಿ ಹಿಲ್ನಲ್ಲಿರುವ ಕಂಗನಾ ರಣಾವ ಕಚೇರಿಗೆ ಭೇಟಿ ನೀಡಿದ್ದ ಬೃಹನ್ ಮುಂಬೈ ಪಾಲಿಕೆ ಅಧಿಕಾರಿಗಳು, ಕಚೇರಿಯನ್ನು ಅಕ್ರಮವಾಗಿ ವಿನ್ಯಾಸಗೊಳಿಸಲಾಗಿದೆ ಎಂಬ ಆರೋಪದಡಿಯಲ್ಲಿ ನೋಟಿಸ್ ನೀಡಿದ್ದರು. ಒಟ್ಟು 14 ಉಲ್ಲಂಘನೆ ಮಾಡಿರುವ ಪಟ್ಟಿಯನ್ನು ಬಿಎಂಸಿ ಸಿದ್ಧಗೊಳಿಸಿ, ಕಚೇರಿ ಒಡೆದಿತ್ತು.
ತಿರುಗೇಟು ನೀಡಿದ್ದ ಕಂಗನಾ!
ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಕಂಗನಾ, 'ನನ್ನ ಮುಂಬೈ ಈಗ ಪಾಕ್ ಆಕ್ರಮಿತ ಕಾಶ್ಮೀರವಾಗಿದೆ. ನನ್ನ ಕಚೇರಿ ರಾಮ ಮಂದಿರ. ಅದನ್ನು ಧ್ವಂಸ ಮಾಡುತ್ತಿರುವ ನೀವು ಬಾಬರ್. ಕಚೇರಿ ಒಡೆಯಲು ಬಂದ ಅಧಿಕಾರಿಗಳು ಬಾಬರ್ನ ಸೇನೆ' ಪ್ರಜಾಪ್ರಭುತ್ವದ ಸಾವು' ಎಂದು ತಿರುಗೇಟು ನೀಡಿದ್ದರು.
'
Also Read-ಮಹಾರಾಷ್ಟ್ರ ಮುಖ್ಯಮಂತ್ರಿಗೆ ಏಕವಚನದಲ್ಲಿ ಕ್ಲಾಸ್ ತೆಗೆದುಕೊಂಡ ನಟಿ ಕಂಗನಾ ರಣಾವತ್!
ಉದ್ಭವ್ ಠಾಕ್ರೆಯನ್ನು ತರಾಟೆಗೆ ತೆಗೆದುಕೊಂಡಿದ್ದ ವಿವಾದದ ರಾಣಿ
ಉದ್ಭವ್ ಠಾಕ್ರೆ... ನಿಮಗೆ ಏನು ಅನಿಸುತ್ತಿದೆ? ನೀನು ಸಿನಿಮಾ ಮಾಫಿಯಾದ ಜೊತೆ ಸೇರಿಕೊಂಡು ನನ್ನ ವಿರುದ್ಧ ಸೇಡು ತೀರಿಸಿಕೊಂಡೆ ಎಂದುಕೊಂಡಿದ್ದೀಯಾ?' ಎಂದು ಏಕವಚನದಲ್ಲಿಯೇ ಕಂಗನಾ ರಣಾವತ್ ಮಾತನಾಡಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯನ್ನು ತರಾಟೆಗೆ ತೆಗೆದುಕೊಂಡಿದ್ದರು.