ಆ್ಯಪ್ನಗರ

ನಾನು ರಾಮನ ಭಕ್ತೆ, ಎಂದೂ ಕೊಟ್ಟ ಮಾತು ತಪ್ಪಲ್ಲ, ಇದು ಕ್ಷತ್ರಿಯನ ಪ್ರಜ್ಞೆ: ಕಂಗನಾ ರಣಾವತ್!

ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ವಿವಾದಗಳನ್ನು ಲೆಕ್ಕ ಹಾಕಿ ಹೇಳೋದು ಕಷ್ಟ. ಈಗ ಅವರ ಪ್ರಶಸ್ತಿಗಳನ್ನು ಹಿಂತಿರುಗಿಸುವಂತೆ ಅನೇಕರು ಹೇಳುತ್ತಿದ್ದಾರೆ. ಇದಕ್ಕೆ ಕಂಗನಾ ಖಡಕ್ ಆಗಿ ಉತ್ತರ ನೀಡಿದ್ದಾರೆ. ಏನದು?

THE TIMES OF INDIA NEWS SERVICE 8 Oct 2020, 2:16 pm
ನಟಿ ರಿಯಾ ಚಕ್ರವರ್ತಿಗೆ ಜಾಮೀನು ಸಿಕ್ಕಿದ ನಂತರದಲ್ಲಿ ಟ್ವಿಟರ್‌ನಲ್ಲಿ 'ಕಂಗನಾ ಅವಾರ್ಡ್ ವಾಪಸ್ ಕರ್' ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್‌ನಲ್ಲಿದೆ. ಸ್ವರಾ ಭಾಸ್ಕರ್ ಕೂಡ ಇದನ್ನೇ ಒತ್ತಾಯಿಸಿದ್ದರು. ಇದಕ್ಕೆ ಕಂಗನಾ ಉತ್ತರ ನೀಡಿದ್ದಾರೆ.
Vijaya Karnataka Web bollywood actress kangana ranaut ready to return award if she did wrong
ನಾನು ರಾಮನ ಭಕ್ತೆ, ಎಂದೂ ಕೊಟ್ಟ ಮಾತು ತಪ್ಪಲ್ಲ, ಇದು ಕ್ಷತ್ರಿಯನ ಪ್ರಜ್ಞೆ: ಕಂಗನಾ ರಣಾವತ್!


ಪ್ರಶಸ್ತಿ ಬಗ್ಗೆ ಕಂಗನಾ ಹೇಳಿದ್ದೇನು?
'ನಾನು ರಾಮನ ಭಕ್ತೆ. ನನ್ನ ಜೀವನಕ್ಕಿಂತ ಮಾತಿಗೆ ಹೆಚ್ಚು ಬೆಲೆ ಕೊಡ್ತೀನಿ' ಎಂದು ಕಂಗನಾ ಹೇಳಿದ್ದಾರೆ. ಸ್ವರಾ ಭಾಸ್ಕರ್ ಅವರು, ಮುಂಬೈ ಹೈಕೋರ್ಟ್‌ಗೆ ಸ್ವರಾ ಧನ್ಯವಾದ್ ತಿಳಿಸಿದ್ದಾರೆ. 'ಸಿಬಿಐ ಹಾಗೂ ಏಮ್ಸ್‌ ಕೂಡ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಈಗ ಕೆಲವರು ಸರ್ಕಾರಕ್ಕೆ ಪ್ರಶಸ್ತಿ ವಾಪಸ್ ನೀಡುತ್ತಾರಾ? ನೆಟ್ಟಿಗರು ಈ ಕೇಸ್‌ನಲ್ಲಿ ಸತ್ಯಾ ಸತ್ಯತೆಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರ ಬಗ್ಗೆ ಸ್ವರಾರನ್ನು ಪ್ರಶ್ನಿಸಿದ್ದಾರೆ. ಸಿಬಿಐ ಇದುವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಸ್ವಲ್ಪ ಕಾಯೋಣ, ಆಮೇಲೆ ನೀವು ಬೇರೆಯವರಿಗೆ ಪ್ರಶಸ್ತಿಯನ್ನು ಸರ್ಕಾರಕ್ಕೆ ವಾಪಸ್ ನೀಡಿ ಅಂತ ಹೇಳಿ' ಎಂದು ಸ್ವರಾ ಭಾಸ್ಕರ್‌ಗೆ ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಕಂಗನಾ ರಣಾವತ್ ಹೇಳುವುದೇನು?
ಈ ಬಗ್ಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಕಂಗನಾ, 'ನಿಮಗೇನಾದರೂ ನೆನಪಿನ ಶಕ್ತಿ ಕುಂದಿದೆಯೇ? ಇಲ್ಲಿದೆ ನನ್ನ ಸಂದರ್ಶನ, ನೋಡಿ. ನಾನು ತಪ್ಪು ಅಂತಾದರೆ ನಾನು ಈಗಲೂ ಕೂಡ ಪ್ರಶಸ್ತಿ ಹಿಂದಿರುಗಿಸಲು ರೆಡಿಯಿದ್ದೇನೆ. ಇದು ಕ್ಷತ್ರಿಯನ ಪ್ರತಿಜ್ಞೆ' ಎಂದು ಕಂಗನಾ ಹೇಳಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಅವರ ಕೇಸ್ ತನಿಖೆ ಇನ್ನೂ ನಡೆಯುತ್ತಿದೆ. ಹಿರಿಯ ಉನ್ನತ ಅಧಿಕಾರಿಗಳು ಎಲ್ಲ ದೃಷ್ಟಿಯಿಂದಲೂ ಸುಶಾಂತ್ ಕೇಸ್ ತನಿಖೆ ಮಾಡುತ್ತಿದ್ದಾರೆ.

Also Read-sushant singh rajput: ಸುಶಾಂತ್ ಸಿಂಗ್ ರಜಪೂತ್ ಪ್ರೇಯಸಿ ರಿಯಾ ಚಕ್ರವರ್ತಿಗೆ ಗುಡ್‌ನ್ಯೂಸ್ ಕೊಟ್ಟ ಹೈಕೋರ್ಟ್!

ಅನೇಕರ ವಿರೋಧ ಕಟ್ಟಿಕೊಂಡ ಕಂಗನಾ!
ಕಂಗನಾ ರಣಾವತ್ ಅವರು ಸುಶಾಂತ್ ಸಿಂಗ್ ರಜಪೂತ್ ನಿಧನದ ನಂತರದಲ್ಲಿ ಒಂದಾದ ಮೇಲೆ ಒಂದರಂತೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಅನೇಕರು ಕಂಗನಾ ಹೇಳಿಕೆಯನ್ನು ವಿರೋಧಿಸಿದ್ದರು. ಕೆಲ ಸೆಲೆಬ್ರಿಟಿಗಳು ಕಂಗನಾರನ್ನು ವಿರೋಧಿಸಿದ್ದರು. ಬಾಲಿವುಡ್‌ನ ಬಹುತೇಕ ನಟ-ನಟಿಯರ ಬಗ್ಗೆ ಕಂಗನಾ ಮಾತನಾಡಿದ್ದರು. ಹೀಗಾಗಿ ಕಂಗನಾ ಧೈರ್ಯವನ್ನು ಕೆಲವರು ಮೆಚ್ಚಿದ್ದರು.

Also Read-ಡ್ರಗ್ಸ್‌ ಕೇಸ್‌ನಲ್ಲಿ ಜಾಮೀನು ಪಡೆದುಕೊಂಡ ರಿಯಾ ಚಕ್ರವರ್ತಿ ಮೇಲಿದೆ ಈ 8 ಷರತ್ತುಗಳು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌