ಆ್ಯಪ್ನಗರ

ರಣ್‌ಬೀರ್ ಕಪೂರ್ ಮೇಲೆ 'ಬ್ರಹ್ಮಾಸ್ತ್ರ' ಬಿಡಲು ಸಜ್ಜಾದ ಮೌನಿ ರಾಯ್

ಬಾಲಿವುಡ್ ಬೆಡಗಿ ಮೌನಿ ರಾಯ್ ಅವರು 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ವಿಲನ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಎಂಬಂತೆ, ನಟಿ ಮೌನಿ ರಾಯ್ ಅವರು ಕನ್ನಡ ಸೇರಿದಂತೆ 5 ಬಾಷೆಗಳಲ್ಲಿ ಬಿಡುಗಡೆಯಾಗಿ ಈಗಲೂ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಕನ್ನಡದ 'ಕೆಜಿಎಫ್' ಚಿತ್ರದಲ್ಲೂ ನಟಿಸಿದ್ದಾರೆ

Vijaya Karnataka Web 20 Mar 2019, 10:59 am
ಬಾಲಿವುಡ್ ಖ್ಯಾತ ಸ್ಟಾರ್ ಜೋಡಿ ಆಲಿಯಾ ಭಟ್ ಮತ್ತು ರಣ್‌ಬೀರ್ ಕಪೂರ್ ಅವರು ಬ್ರಹ್ಮಾಸ್ತ್ರ ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರದಲ್ಲಿ ಇನ್ನೊಬ್ಬಳು ಬಾಲಿವುಡ್ ಬೆಡಗಿ ಮೌನಿ ರಾಯ್ ಅವರು ವಿಲನ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಗೆ ಈ ಪಾತ್ರ ದೊರಕಿದ್ದು ಸ್ವತಃ ಭಾರಿ ಅಚ್ಚರಿಯನ್ನು ಉಂಟುಮಾಡಿದೆಯಂತೆ. ವಿಶೇಷ ಎಂಬಂತೆ, ನಟಿ ಮೌನಿ ರಾಯ್ ಅವರು ಕನ್ನಡ ಸೇರಿದಂತೆ 5 ಬಾಷೆಗಳಲ್ಲಿ ಬಿಡುಗಡೆಯಾಗಿ ಈಗಲೂ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಕನ್ನಡದ 'ಕೆಜಿಎಫ್' ಚಿತ್ರದಲ್ಲೂ ನಟಿಸಿದ್ದಾರೆ.
Vijaya Karnataka Web mouniroy2003


ಈ ಬಗ್ಗೆ ಮಾತನಾಡಿರುವ ನಟಿ ಮೌನಿ ರಾಯ್ ಅವರು "ನನಗೆ ಮೊದಲಿನಿಂದಲೂ ವಿಭಿನ್ನ ಪಾತ್ರಗಳಲ್ಲಿ ನಟಿಸುವುದು ತುಂಬಾ ಖುಷಿ ಕೊಡುತ್ತದೆ. ಏಕೆಂದರೆ, ನಾಯಕಿಯಾಗಿ, ಅಥವಾ ಒಂದೇ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಕ್ಕಿಂತ ವಿಭಿನ್ನ ಪಾತ್ರಗಳಲ್ಲಿ ನಟಿಸುವುದು ಹೆಚ್ಚು ಚಾಲೆಂಜಿಂಗ್ ಆಗಿರುತ್ತದೆ. ನನಗೆ ಯಾವಾಗಲೂ ಒಂದೇ ರೀತಿಯ ಪಾತ್ರಗಳಲ್ಲಿ ನಟಿಸುವುದು ಸಖತ್ ಬೋರ್ ಎನಿಸುತ್ತದೆ. ಆದರೆ, ನನ್ನ ಇಷ್ಟದಂತೆ ಬ್ರಹ್ಮಾಸ್ತ್ರ ಚಿತ್ರದಲ್ಲಿ ನನಗೆ ನೆಗೆಟಿವ್ ಶೇಡ್ ಇರುವ ಪಾತ್ರ ಕೊಟ್ಟಿರುವುದು ನನಗೆ ನಿಜಕ್ಕೂ ತುಂಬಾ ಅಚ್ಚರಿಯನ್ನು ಉಂಟುಮಾಡಿದೆ.

ನನ್ನ ಮೈಂಡ್ ರೀಡಿಂಗ್ ಮಾಡಿದ ಥರ ಬ್ರಹ್ಮಾಸ್ತ್ರ ಚಿತ್ರತಂಡವು ನನಗೆ ವಿಭಿನ್ನ ಮತ್ತು ಪ್ರಮುಖ ವಿಲನ್ ರೋಲ್ ನೀಡಿದೆ. ಬಾಲಿವುಡ್ ಅಂಗಳದಲ್ಲಿ, ಅದರಲ್ಲೂ ಪ್ರತಿಭಾನ್ವಿತ ಕಲಾವಿದರಾದ ಆಲಿಯಾ ಭಟ್ ಮತ್ತು ರಣ್‌ಬೀರ್ ಕಪೂರ್ ಅವರಂಥ ಘಟಾನುಘಟಿಗಳ ಜೊತೆ ನನಗೆ ತೆರೆ ಹಂಚಿಕೊಳ್ಳುವ ಛಾನ್ಸ್ ಸಿಕ್ಕಿರುವುದು ನನ್ನ ಅದೃಷ್ಟ" ಎಂದು ಹೇಳುವ ಮೂಲಕ ಮೌನಿ ರಾಯ್ ಅವರು ತಾವು ಚಿತ್ರದಲಲ್ಲಿ ಕೇವಲ ಗ್ಲಾಮರ್ ಬಯಸುವ ಗೊಂಬೆಯಲ್ಲ. ಕಲಾವಿದೆಯಾಗಿ ಬಾಲಿವುಡ್‌ನಲ್ಲಿ ವಿಭಿನ್ನವಾಗಿ ಗುರುತಿಸಿಕೊಳ್ಳಬೇಕೆಂದು ಬಯಸುವ ನಟಿ ಎಂಬ ಮೆಸೇಜ್ ನೀಡಿದ್ದಾರೆ ಎನ್ನಬಹುದು.

ಅಂದಹಾಗೆ, ಬ್ರಹ್ಮಾಸ್ತ್ರ ಚಿತ್ರದ ಶೂಟಿಂಗ್ ಈಗಾಗಲೇ ಶುರುವಾಗಿದ್ದು, ಆಲಿಯಾ ಭಟ್ ಮತ್ತು ರಣ್‌ಬೀರ್ ಕಪೂರ್ ಅವರು ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ನಟಿ ಮೌನಿ ರಾಯ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಚಿತ್ರತಂಡವನ್ನು ಸದ್ಯದಲ್ಲೇ ಸೇರಿಕೊಳ್ಳಲಿದ್ದಾರೆ. ಆರ್ಯನ್ ಮುಖರ್ಜಿ ನಿರ್ದೇಶನದ ಈ ಚಿತ್ರಕ್ಕೆ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಬಂಡವಾಳ ಹೂಡಿದ್ದಾರೆ. ಆಲಿಯಾಭಟ್-ರಣ್‌ಬೀರ್ ಕಪೂರ್ ಜೋಡಿ ಜೊತೆ, ಅಮಿತಾಭ್‌ ಬಚ್ಚನ್, ಆದಿತ್ಯ ರಾಯ್ ಕಪೂರ್, ಕಲ್ಕಿ ಕೊಚ್ಲಿನ್ ಹಾಗೂ ಮೌನಿ ರಾಯ್ ಮುಂತಾದ ನಟನಟಿಯರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌