ಆ್ಯಪ್ನಗರ

ಶ್ರದ್ಧಾ ಕಪೂರ್ ಜಾಗದಲ್ಲಿ ಪರಿಣೀತಿ ಚೋಪ್ರಾ ಬಂದು ಕೂತಿದ್ಯಾಕೆ?

ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅವರು ಬ್ಯಾಂಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಬಯೋಪಿಕ್‌ ಚಿತ್ರದಿಂದ ಹೊರಬಂದಿದ್ದಾರೆ. ಆ ಜಾಗಕ್ಕೆ ಈಗ ನಟಿ ಪರಿಣೀತಿ ಚೋಪ್ರಾ ಅವರು ಬಂದಿದ್ದಾರೆ. ನಟ ಇಶಾನ್ ನಾಕ್ವಿ ನಾಯಕರು.

Bangalore Mirror Bureau 15 Mar 2019, 12:20 pm
ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅವರು ಬ್ಯಾಂಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಬಯೋಪಿಕ್‌ ಚಿತ್ರದಿಂದ ಹೊರಬಂದಿದ್ದಾರೆ. ನಟ ಇಶಾನ್ ನಾಕ್ವಿ ನಾಯಕರಾಗಿರುವ ಈ ಚಿತ್ರದಲ್ಲಿ ನಟಿ ಶ್ರದ್ಧಾ ಕಪೂರ್ ನಾಯಕಿಯಾಗಿ ಆಯ್ಕೆಯಾಗಿದ್ದು ಶೂಟಿಂಗ್ ನಡೆದಿತ್ತು. ಆದರೆ. ಶೂಟಿಂಗ್ ನಡೆಯುತ್ತಿದ್ದ ವೇಳೆಯಲ್ಲಿ ಡೆಂಗ್ಯೂ ಜ್ವರಕ್ಕೆ ತುತ್ತಾದ ನಟಿ ಶ್ರದ್ಧಾ ಕಪೂರ್ ವಿಶ್ರಾಂತಿ ತೆಗೆದುಕೊಂಡರು. ಅಲ್ಲಿಗೆ ಆ ಚಿತ್ರದ ಶೂಟಿಂಗ್ ನಿಂತು ಹೋಗಿತ್ತು. ಆ ಜಾಗಕ್ಕೆ ಈಗ ನಟಿ ಪರಿಣೀತಿ ಚೋಪ್ರಾ ಅವರು ಬಂದಿದ್ದಾರೆ.
Vijaya Karnataka Web saina1503


ಇತ್ತೀಚಿಗೆ ಬಂದ ವರದಿ ಪ್ರಕಾರ, ನಟಿ ಶ್ರದ್ಧಾ ಕಪೂರ್ ಅವರು ಆ ಚಿತ್ರದಿಂದ ಹೊರಬಂದಿದ್ದಾರೆ. ಅಷ್ಟೇ ಅಲ್ಲ, ಆ ಚಿತ್ರದ ನಾಯಕಿ ಸ್ಥಾನವನ್ನು ಬಾಲಿವುಡ್‌ನ ಇನ್ನೊಬ್ಬರು ನಟಿ ಪರಿಣೀತಿ ಚೋಪ್ರಾ ಅವರು ಈಗಾಗಲೇ ತುಂಬಿದ್ದಾರೆ. ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರ ಬಯೋಪಿಕ್‌ಗಾಗಿ ನಟಿ ಪರಿಣೀತಿ ಚೋಪ್ರಾ ಅವರು ಸಾಕಷ್ಟು ಹೋಂ ವರ್ಕ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಮೊದಲು ಆ ಜಾಗದಲ್ಲಿದ್ದ ನಟಿ ಶ್ರದ್ಧಾ ಕಪೂರ್ ಕೂಡ ಸ್ವತಃ ಕ್ರೀಡಾ ತಾರೆ ಸೈನಾ ಅವರನ್ನು ಮೀಟ್ ಮಾಡಿ ಅವರ ಬಗ್ಗೆ ತಿಳಿದುಕೊಂಡಿದ್ದರು.

ಆದರೆ, ಜ್ವರ ಬಂದ ಮಲಗಿ, ನಂತರ ವಿಶ್ರಾಂತಿಯಿಂದ ಎದ್ದು ಬಂದ ಮೇಲೆ, ಆ ಚಿತ್ರದಿಂದ ನಟಿ ಶ್ರದ್ಧಾ ಕಪೂರ್ ಹೊರಗೆ ಬರಲು ಕಾರಣ, ಅವರು ಸಿಕ್ಕಾಪಟ್ಟೆ ಚಿತ್ರಗಳಲ್ಲಿ ಬ್ಯುಸಿಯಾಗಿರುವುದು ಎನ್ನಲಾಗುತ್ತಿದೆ. ಹಾಗಿದ್ದರೆ, ರೆಸ್ಟ್ ತೆಗೆದುಕೊಳ್ಳುತ್ತಿದ್ದಾಗಲೇ ಶ್ರದ್ಧಾ ಅವರು ಸಾಕಷ್ಟು ಕಥೆ ಕೇಳಿ ಒಪ್ಪಿಕೊಂಡಿದ್ದಾರೆ ಎನ್ನಬಹುದು. ಈಗ ಶ್ರದ್ಧಾ ಕಪೂರ್ ಟೈಮ್ ಇಲ್ಲ ಎನ್ನಲು ಬೇರೆ ಚಿತ್ರಗಳು ಕಾರಣ ಎಂದಾದರೆ, ಆ ಚಿತ್ರಕ್ಕೆ ಅವರ ಕಮಿಟ್‌ಮೆಂಟ್ ಅಷ್ಟಕಷ್ಟೇ ಇತ್ತು ಎನ್ನಬಹುದಲ್ಲವೇ?

ಅದೇನೇ ಇರಲಿ, ಯಾರೋ ಹೋದರೆ ಇನ್ನೊಬ್ಬರು ಆ ಜಾಗಕ್ಕೆ ಬಂದೇ ಬರುತ್ತಾರೆ. ಪ್ರೇಕ್ಷಕರು ಸೈನಾ ನೆಹ್ವಾಲ್ ಪಾತ್ರದಲ್ಲಿ ಶ್ರದ್ಧಾ ಕಪೂರ್ ಬದಲು ಪರಣೀತಿ ಚೋಪ್ರಾ ಅವರನ್ನು ನೋಡಬಹುದು. ನಾಯಕ ಇಶಾನ್ ಅವರೇ ಇದ್ದಾರೆ ಎನ್ನಲಾಗಿದ್ದು, ಚಿತ್ರತಂಡದಲ್ಲಿ ಬೇರೆ ಯಾವುದೇ ಬದಲಾವಣೆ ಆಗಿಲ್ಲ. ಈ ಚಿತ್ರವು ಶೂಟಿಂಗ್ ಮುಗಿಸಿಕೊಂಡು ಈ ವರ್ಷದ ಕೊನೆಗೆ, 2019 ಮುಗಿಯುವ ಮೊದಲ;ು ತೆರೆ ಕಾಣಲಿರುವುದ ಪಕ್ಕಾ ಎನ್ನಲಾಗಿದೆ.

ಅಂದಹಾಗೆ, ನಟಿ ಶ್ರದ್ಧಾ ಕಪೂರ್ ಸದ್ಯಕ್ಕೆ ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಜೋಡಿಯಾಗಿ ಸಾಹೋ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ, 'ಬಾಗಿ 3' ಚಿತ್ರ ಕೂಡ ನಟಿ ಶ್ರದ್ಧಾ ಕೈನಲ್ಲಿದೆ. ಒಟ್ಟಿನಲ್ಲಿ, ಬ್ಯಾಂಡ್ಮಿಂಟನ್ ತಾರೆ ಸೈನಾ ನೈಹ್ವಾಲ್ ಜೀವನ ಚರಿತ್ರೆಯನ್ನು ತೆರೆಯ ಮೇಲೆ ನೋಡಲು ಕಾತರಗೊಂಡಿರುವ ಮಂದಿಗೆ ಸ್ವಲ್ಪ ಲೇಟ್ ಆಗಿರುವುದಂತೂ ಸತ್ಯ ಎನ್ನಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌