ಆ್ಯಪ್ನಗರ

ಟೀಂ ಇಂಡಿಯಾ ಸೋಲಿಗೆ ಜತೆಗಿದ್ದ ಪತ್ನಿಯರೇ ಕಾರಣ: ರಾಖಿ ಸಾವಂತ್!

ಬಾಲಿವುಡ್ ನಟಿ ರಾಖಿ ಸಾವಂತ್ ಟೀಂ ಇಂಡಿಯಾ ಸೋಲಿಗೆ ಆಕ್ರೋಶ ವ್ಯಕ್ತಪಡಿಸಿ "ಟೀಂ ಇಂಡಿಯಾ ಸೋಲಿಗೆ ಮುಖ್ಯ ಕಾರಣವಿದೆ. ಯಾವ ಕ್ರಿಕೆಟಿಗರ ಪತ್ನಿಯರು ಇಂಗ್ಲೆಂಡ್ ತೆರಳಿದ್ದಾರೋ ಅವರೆಲ್ಲಾ ಬಹುಬೇಗನೆ ಪೆವಿಲಿಯನ್ ಸೇರಿಕೊಂಡಿದ್ದಾರೆ. ಪತ್ನಿಯರು ಜೊತೆಗಿದ್ದ ಕ್ರಿಕೆಟ್ ಆಟಗಾರರಿಗೆ ಸಾಕಷ್ಟು ಶಕ್ತಿಯೇ ಇರಲ್ಲಿಲ್ಲ. ಅವರಿಗೆ ಮೈದಾನದಲ್ಲಿ ಆಟ ಆಡುವ ಆಸಕ್ತಿಯೂ ಇರಲಿಲ್ಲ"ಎಂದು ಆರೋಪಿಸಿದ್ದಾರೆ.

Vijaya Karnataka Web 31 Jul 2019, 4:50 pm
ಇತ್ತೀಚೆಗೆ ಮುಗಿದ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸೋಲು ಬಹಳಷ್ಟು ಜನರಿಗೆ ಬೇಸರ ತಂದಿದೆ. ಸಾಕಷ್ಟು ಕ್ರಿಕೆಟ್ ಅಭಿಮಾನಿಗಳು ಭಾರತದ ಆಟಗಾರರ ಕೆಚ್ಚೆದೆಯ ಹೋರಾಟವನ್ನು ಮೆಚ್ಚಿದ್ದಾರೆ. ಆದರೆ ಕೆಲವು ಅಭಿಮಾನಿಗಳು ಸೋಲಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವರು ಭಾರತೀಯ ಆಟಗಾರರ ಸೋಲಿಗೆ ಕಾರಣಗಳನ್ನು ಹೇಳಿದ್ದಾರೆ. ಇದೀಗ ಬಾಲಿವುಡ್ ನಟಿ ರಾಖಿ ಸಾವಂತ್ ಟೀಂ ಇಂಡಿಯಾ ಸೋಲಿಗೆ ಆಕ್ರೋಶ ವ್ಯಕ್ತಪಡಿಸಿ ಸೋಲಿಗೆ ಕಾರಣವನ್ನು ಅವರದೇ ಆದ ರೀತಿಯಲ್ಲಿ ಹೇಳಿದ್ದಾರೆ.
Vijaya Karnataka Web rakhi3107


ವಿಶ್ವಕಪ್ ಕ್ರಿಕೆಟ್ ಎಂದರೆ ಹಲವರಿಗೆ ಅದು ಜೀವನಕ್ಕಿಂತ ಹೆಚ್ಚು. ಭಾರತದಲ್ಲಂತೂ ವಿಶ್ವಕಪ್ ಕ್ರಿಕೆಟ್ ಜ್ವರ ಭಾರೀ ಎಂಬಷ್ಟು ಮಿತಿಮೀರಿತ್ತು. ಎಷ್ಟೋ ತಾಯಂದಿರು ತಮ್ಮ ಮಕ್ಕಳಿಗೆ 'ಸ್ವಲ್ಪ ಹೊತ್ತಿಗೆ ವಿಶ್ವಕಪ್ ಪ್ರಾರಂಭವಾಗುತ್ತೆ. ಬೇಗ ಹಾಲು ಕುಡಿದು ಮುಗಿಸು' ಎನ್ನುತ್ತಿದ್ದರು. ಅಷ್ಟರಮಟ್ಟಿಗೆ ಭಾರತದ ಕ್ರೀಡಾಪ್ರೇಮಿಗಳು ವಿಶ್ವಕಪ್ ಗೆಲುವಿಗಾಗಿ ತುಂಬಾ ಹಂಬಲಿಸಿದ್ದರು. ಅದರೆ ಆಗಿದ್ದೇನು? ಭಾರತ ಸೆಮಿಫೈನಲ್‌ನಲ್ಲೇ ಮುಗ್ಗರಿಸಿ ವಾಪಸ್ ಮನೆಗೆ ಬಂದಿದೆ.

"ಇಂಡಿಯಾ ಸೋಲಿಗೆ ಮುಖ್ಯ ಕಾರಣವಿದೆ. ಯಾವ ಕ್ರಿಕೆಟಿಗರ ಪತ್ನಿಯರು ಇಂಗ್ಲೆಂಡ್ ತೆರಳಿದ್ದಾರೋ ಅವರೆಲ್ಲಾ ಬಹುಬೇಗನೆ ಪೆವಿಲಿಯನ್ ಸೇರಿಕೊಂಡಿದ್ದಾರೆ. ಪತ್ನಿಯರು ಜೊತೆಗಿದ್ದ ಕ್ರಿಕೆಟ್ ಆಟಗಾರರಿಗೆ ಸಾಕಷ್ಟು ಶಕ್ತಿಯೇ ಇರಲ್ಲಿಲ್ಲ. ಅವರಿಗೆ ಮೈದಾನದಲ್ಲಿ ಆಟ ಆಡುವ ಆಸಕ್ತಿಯೂ ಇರಲಿಲ್ಲ"ಎಂದು ರಾಖಿ ಸಾವಂತ್ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, "ಈ ಸಲದ ವಿಶ್ವಕಪ್ ಟೂರ್ನಿ ಕ್ರಿಕೆಟ್‌ಗಿಂತ ಹೆಚ್ಚು ಹನಿಮೂನ್ ಆಗಿತ್ತು. ಹೀಗಾಗಿಯೇ ಟೀಂ ಇಂಡಿಯಾ ಸೋಲು ಕಂಡಿದೆ. ಕ್ರಿಕೆಟ್ ಆಟಗಾರರಿಗೆ ಆಟಕ್ಕಿಂತ ಅವರ ಸಂಸಾರವೇ ಹೆಚ್ಚು. ವಿಶ್ವಕಪ್‌ ಆಡುವ ದಿನಗಳಲ್ಲಿ ಆಟಗಾರರ ಪತ್ನಿಯರು ಅದ್ಯಾಕೆ ಜೊತೆಗಿರಬೇಕು" ಎಂದು ನಟಿ ರಾಖಿ ಸಾವಂತ್ ಆಕ್ರೋಶ ಹೊರಹಾಕಿದ್ದಾರೆ.

ಅಂದಹಾಗೆ, ನಟಿ ರಾಖಿ ಸಾವಂತ್ ಅವರು ಭಾರೀ ಕ್ರಿಕೆಟ್ ಪ್ರೇಮಿಯಂತೆ. ಭಾರತ ವಿಶ್ವಕಪ್‌ನಲ್ಲಿ ಜಯಭೇರಿ ಭಾರಿಸಲಿ ಎಂದು ಆಶಿಸಿದ್ದರಂತೆ. ಆದರೆ, ಆಟಗಾರರಲ್ಲಿ ಹಲವರು ತಮ್ಮ ಪತ್ನಿಯರ ಜತೆ ಅಲ್ಲಿಗೆ ಹೋಗಿ 'ಹನಿಮೂನ್' ಮುಗಿಸಿಕೊಂಡು ಬಂದಿದ್ದಾರೆ. ಇಲ್ಲಿ ಭಾರೀ ನಿರೀಕ್ಷೆಯಿಂದ ಕಾಯುತ್ತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಆಟಗಾರರು ಮೋಸ ಮಾಡಿದ್ದಾರೆ ಎಂದು ರಾಖಿ ಸಾವಂತ್ ತಮ್ಮ ಕೋಪ ಹೊರಹಾಕಿದ್ದಾರೆ. ರಾಖಿ ಮಾತನ್ಮು ಹಲವರು ಮೆಚ್ಚಿಕೊಂಡು ಕಾಮೆಂಟ್ ಮಾಡಿದ್ದಾರೆ ಎಂಬುದು ವಿಶೇಷ ಸಂಗತಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌