ಆ್ಯಪ್ನಗರ

ನಮಗೆ ಇದುವರೆಗೂ ಮಕ್ಕಳಾಗಿಲ್ಲ, ಎಲ್ಲವೂ ದೇವರ ಕೈಯಲ್ಲಿದೆ: ನಟಿ ಬಿಪಾಶಾ ಬಸು

ಬಾಲಿವುಡ್ ನಟಿ ಬಿಪಾಶಾ ಬಸು ಅವರು ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದು, ಈಗ ಅವರು ಮಗುವನ್ನು ಹೊಂದುವ ಪ್ಲ್ಯಾನ್‌ನಲ್ಲಿದ್ದಾರೆ. ಆದರೆ ಅವರಿಗೆ ಸಮಸ್ಯೆ ಎದುರಾಗಿದ್ದು, ಎಲ್ಲವನ್ನು ದೇವರಿಗೆ ಬಿಟ್ಟಿದ್ದಾರಂತೆ. ಯಾಕೆ ಬಿಪಾಶಾ ದಂಪತಿಗೆ ಏನಾಯ್ತು?

Vijaya Karnataka Web 18 Aug 2020, 9:31 pm
ಬಾಲಿವುಡ್ ನಟಿ, ಗ್ಲಾಮರಸ್ ಚೆಲುವೆ, ಕೃಷ್ಣ ಸುಂದರಿ ಬಿಪಾಶಾ ಬಸು ಕುಟುಂಬವನ್ನು ವಿಸ್ತರಿಸುವ ಪ್ಲ್ಯಾನ್‌ನಲ್ಲಿದ್ದಾರಂತೆ. ಆದರೆ ಅವರು ಇದೆಲ್ಲ ದೇವರ ಕೈಯಲ್ಲಿದೆ ಎಂದಿದ್ದಾರೆ. ಸಮಸ್ಯೆ ಇರೋದರಿಂದ ಅವರು ಮಕ್ಕಳನ್ನು ದತ್ತು ಪಡೆಯುವ ಆಲೋಚನೆಯಲ್ಲಿದ್ದಾರೆ.
Vijaya Karnataka Web bollywood celebrity couple bipasha basu and karan grover singh speaks about children
ನಮಗೆ ಇದುವರೆಗೂ ಮಕ್ಕಳಾಗಿಲ್ಲ, ಎಲ್ಲವೂ ದೇವರ ಕೈಯಲ್ಲಿದೆ: ನಟಿ ಬಿಪಾಶಾ ಬಸು


ಮಕ್ಕಳನ್ನು ದತ್ತು ಪಡೆಯುತ್ತೇವೆ: ಬಿಪಾಶಾ ಬಸು!
'ನಮಗೆ ಇನ್ನೂ ಮಕ್ಕಳಾಗಿಲ್ಲ, ಪರವಾಗಿಲ್ಲ. ದೇವರು ಏನು ಅಂದುಕೊಳ್ತಾನೋ ಅದೇ ಆಗುತ್ತದೆ. ದೇಶದಲ್ಲಿ ಸಾಕಷ್ಟು ಮಕ್ಕಳಿವೆ. ನಾವು ಅವುಗಳ ಕಾಳಜಿ ಕೂಡ ಮಾಡಬಹುದು. ನಾವೆಲ್ಲ ನಿಜಕ್ಕೂ ಅದೃಷ್ಟವಂತರು. ಆದರೆ ವಿಶ್ವದಲ್ಲಿ ಮೂಲಭೂತ ಅವಶ್ಯಕತೆಯಿಲ್ಲದ ಎಷ್ಟೋ ಮಕ್ಕಳಿದ್ದಾರೆ. ಅವರನ್ನು ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಭವಿಷ್ಯದಲ್ಲಿ ಏನಾಗತ್ತೆ ನೋಡೋಣ' ಎಂದು ಮಾಧ್ಯಮವೊಂದಕ್ಕೆ ನಟಿ ಬಿಪಾಶಾ ಬಸು ಹೇಳಿದ್ದಾರೆ.

ಯಾವುದು ನಮ್ಮ ಕೈಯಲ್ಲಿಲ್ಲ ಎಂದ ಕರಣ್ ಗ್ರೋವರ್

'ಬಿಪಾಶಾ ಮಕ್ಕಳಾಗುವ ವಿಚಾರದ ಬಗ್ಗೆ ದೇವರಿಗೆ ಬಿಟ್ಟಿದ್ದಾಳೆ. ಜಗತ್ತಿನಲ್ಲಿರುವ ಶಕ್ತಿಯು ತನ್ನದೇ ಆದ ಪ್ಲ್ಯಾನ್ ಹಾಗೂ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ನಾವು ಆಗಾಗ ಮರೆಯುತ್ತೇವೆ. ಯಾವುದು ನಮ್ಮ ಕೈಯಲ್ಲಿಲ್ಲ' ಎಂದು ಬಿಪಾಶಾ ಬಸು ಪತಿ ಕರಣ್ ಗ್ರೋವರ್ ಹೇಳಿದ್ದಾರೆ.

ಪ್ರೀತಿಸಿ ಮದುವೆಯಾಗಿರುವ ಬಿಪಾಶಾ-ಕರಣ್

ನಟ ಡಿನೋ ಮೋರಿಯಾ ಜೊತೆ ಬಿಪಾಶಾ ಬಸು 4 ವರ್ಷಗಳ ಕಾಲ ರಿಲೇಶನ್‌ಶಿಪ್‌ನಲ್ಲಿದ್ದರು. ಆಮೇಲೆ ಜಾನ್ ಅಬ್ರಹಾಂ ಜೊತೆ ಕೂಡ ಡೇಟ್ ಮಾಡಿದ್ದರು. ಆಮೇಲೆ 2005ರಲ್ಲಿ 'ಅಲೋನ್‌' ಸಿನಿಮಾ ಮೂಲಕ ಕರಣ್ ಗ್ರೋವರ್ ಸಿಂಗ್ ಭೇಟಿ ಮಾಡಿದ್ದ ಬಿಪಾಶಾ ಬಸು ಪ್ರೀತಿಯಲ್ಲಿ ಬಿದ್ದು, 2016ರಲ್ಲಿ ಕರಣ್‌ರನ್ನೇ ಮದುವೆಯಾಗಿದ್ದರು. ಕರಣ್‌ಗೆ ಇದು ಮೂರನೇ ಮದುವೆಯಾಗಿದೆ.

Also Read-ಮೇಕಪ್‌ ಇಲ್ಲದೆ ಈ ನಟಿ ಯಾರು ಎಂದು ಕಂಡುಹಿಡಿಯೋದು ಅಸಾಧ್ಯ! ಯಾರಿದು ಗೊತ್ತಾಯ್ತಾ?

ತೆರೆ ಮೇಲೆ ಮತ್ತೆ ಒಂದಾದ ಈ ಜೋಡಿ
'ಡೇಂಜರಸ್' ಸಿನಿಮಾಕ್ಕೋಸ್ಕರ 5 ವರ್ಷಗಳ ನಂತರದಲ್ಲಿ ಈ ಜೋಡಿ ತೆರೆ ಮೇಲೆ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈ ಮೂಲಕ ಬಿಪಾಶಾ ಕೂಡ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದರು. ಈ ಸಿನಿಮಾವನ್ನು ಗಾಯಕ ಮಿಕಾ ನಿರ್ಮಿಸಿದ್ದರು. ಇದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಕಳೆದ ವಾರ ರಿಲೀಸ್ ಆಗಿತ್ತು.

Also Read-ಎಲ್ಲರಿಗೂ ನನ್ನ ಚರ್ಮದ ಮೇಲೆ ಯಾಕೆ ಕಣ್ಣು? ನಟಿ ಬಿಪಾಶಾ ಬಸು ಕೇಳಿದ ಖಡಕ್‌ ಪ್ರಶ್ನೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌