ಆ್ಯಪ್ನಗರ

ಕೇಸರಿ 'ಪರ' ಟ್ವೀಟ್ ನೋಡದಿದ್ದರೂ ಕ್ಷಮೆ ಕೇಳಿದ ಕರಣ್ ಜೋಹರ್!

ಅಚ್ಚರಿ ಎಂಬಂತೆ, ಕರಣ್ ಜೋಹರ್ ಮತ್ತು ಶಾರುಖ್ ಖಾನ್ ಈ ಇಬ್ಬರು ಬಾಲಿವುಡ್‌ನ ಉತ್ತಮ ಗೆಳೆಯರು. ಹೀಗಿದ್ದೂ ಕರಣ್ ಜೋಹರ್ ಯಾಕೆ ಹೀಗೆ ಮಾಡಿದ್ದಾರೆ ಅಂತ ಶಾರುಖ್ ಅಭಿಮಾನಿಗಳು ಕರಣ್ ಅವರನ್ನು ಟ್ವಿಟ್ಟರ್‌ನಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

Vijaya Karnataka Web 24 Mar 2019, 4:32 pm
ಲೈಕ್ ಮಾಡಿದ್ದರು. ಮನ್ನು ಯಾದವ್ ಎನ್ನುವ ಹೆಸರಿನ ಟ್ವೀಟ್ ಬಳಕೆದಾರರೊಬ್ಬರು ' Half day colls [collections] of Kesari on Holi day (which is worse than pre diwali day) [is] greater than Zero full festival day collection..'ಎಂದು ಟ್ಟೀಟ್ ಮಾಡಿದ್ದರು. ಅಷ್ಟೇ ಅಲ್ಲ, ಶಾರೂಖ್ ಹಾಗೂ ಅಕ್ಷಯ್ ಕುಮಾರ್ ಅವರ ಪ್ರಸಿದ್ಧಿ, ಸ್ಟಾರ್ ಡಮ್ ಬಗ್ಗೆಯೂ ಹೋಲಿಕೆ ಮಾಡಿ, ನಟ ಅಕ್ಷಯ್ ಎಲ್ಲಾ ರೀತಿಯಲ್ಲೂ ಶಾರುಖ್ ಅವರಿಗಿಂತ ಮೇಲು ಎಂದು ಸಮರ್ಥನೆ ನೀಡಿದ್ದರು.
Vijaya Karnataka Web karan-sha2403


ಈ ಟ್ವೀಟ್ ನ 'ಸ್ಕ್ರೀನ್ ಶಾಟ್' ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.ಅದು ಕರಣ್ ಜೋಹರ್ ಟ್ವೀಟರ್‌ ಪೇಜ್‌ನಲ್ಲಿ ಲೈಕ್ ಆಗಿತ್ತು. ಅಷ್ಟಾಗಿದ್ದೇ ತಡ, ಶಾರೂಖ್ ಅಭಿಮಾನಿಗಳು ನಿರ್ಮಾಪಕ ಕರಣ್ ಜೋಹರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಸಾಮಾಜಿಕ ಜಾಲತಾಣದಲ್ಲಿ ಆರಂಭವಾದ ವಾದ ಪ್ರತಿವಾದ, ಚರ್ಚೆಯಿಂದ ವಿಚಲಿತರಾದ ಕರಣ್ ಜೋಹರ್, ಆ ಲೈಕ್ ಕುರಿತಂತೆ ವಿವರಣೆ ನೀಡಿದ್ದಾರೆ.

"ಇದೊಂದು ತಾಂತ್ರಿಕ ತೊಂದರೆಯಿಂದಾಗಿರುವ ತಪ್ಪು. ನಾನು ಆ ಟ್ವೀಟ್‌ನ್ನು ನೋಡಿಯೂ ಇಲ್ಲ, ಓದಿಯೂ ಇಲ್ಲ" ಎಂದಿದ್ದಾರೆ. ಅಷ್ಟೇ ಅಲ್ಲ, ಸೋಷಿಯಲ್ ಮೀಡಿಯಾ ಬಳಕೆದಾರರಲ್ಲಿ ಕ್ಷಮೆಯನ್ನು ಕೂಡ ಯಾಚಿಸಿದ್ದಾರೆ. ನನ್ನಿಂದಾಗಿರುವ ತಪ್ಪಿಗೆ ನಾನು ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ ಕರಣ್ ಜೋಹರ್.

ಅಚ್ಚರಿ ಎಂಬಂತೆ, ಕರಣ್ ಜೋಹರ್ ಮತ್ತು ಶಾರುಖ್ ಖಾನ್ ಈ ಇಬ್ಬರು ಬಾಲಿವುಡ್‌ನ ಉತ್ತಮ ಗೆಳೆಯರು. ಹೀಗಿದ್ದೂ ಕರಣ್ ಜೋಹರ್ ಯಾಕೆ ಹೀಗೆ ಮಾಡಿದ್ದಾರೆ ಅಂತ ಶಾರುಖ್ ಅಭಿಮಾನಿಗಳು ಕರಣ್ ಅವರನ್ನು ಟ್ವಿಟ್ಟರ್‌ನಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ, 'ಶೇಮ್ ಆನ್ ಕರಣ್ ಜೋಹರ್' ಅಂತ ಹ್ಯಾಶ್ ಟ್ಯಾಗ್ ಬಳಸಿ ಅಭಿಯಾನ ಮಾಡುತ್ತಿದ್ದಾರೆ. ಈ ಅಭಿಯಾನ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ.

ಶಾರುಖ್ ಅಭಿಮಾನಿಗಳ ಈ ಅಭಿಯಾನ ತಾರಕಕ್ಕೇರಿದ್ದು, ಗಲಾಟೆ ನೋಡಿದ ಕರಣ್ ಜೋಹರ್ ತಕ್ಷಣ 'ನನ್ನ ಟ್ವಿಟ್ಟರ್ ಖಾತೆಯಲ್ಲಿ ತಾಂತ್ರಿಕ ಸಮಸ್ಯೆ ಆಗಿದೆ. ಅದರಿಂದ ಲೈಕ್ ಆಗಿದೆ. ಏನು ಬರೆದಿದ್ದಾರೆ ಎನ್ನುವುದನ್ನೇ ನಾನು ಓದಿಲ್ಲ. ದಯವಿಟ್ಟು ಕ್ಷಮಿಸಿ' ಎಂದು ಟ್ವೀಟ್ ಮಾಡಿದ್ದಾರೆ.

ಕರಣ್ ಟ್ವೀಟ್‌ಗೆ ಪ್ರತಿಯಾಗಿ ಶಾರುಖ್ ಖಾನ್ ಕೂಡ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಶಾರುಖ್ ಖಾನ್ 'ಕರಣ್ ಜೋಹರ್ ಸ್ಪಷ್ಟನೆ ನೀಡಿರುವುದು ಇಷ್ಟವಾಗಲಿಲ್ಲ. ಟ್ವಿಟ್ಟರ್‌ನಲ್ಲಿ ತೊಂದರೆ ಆಗುವುದು ಸಹಜ. ಇದರಿಂದ ಯುದ್ಧ ಮಾಡುವ ಅವಶ್ಯಕತೆ ಇಲ್ಲ. ಪ್ರೀತಿ ಮಾಡಿ, ಇದು ಇನ್ನೂ ಖುಷಿ ಕೊಡುತ್ತೆ" ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌