ಆ್ಯಪ್ನಗರ

ಜಗತ್ತಿಗೆ ವಿಭಿನ್ನವಾಗಿ ಸಂದೇಶ ನೀಡಿದ ನಟ ಸಲ್ಮಾನ್ ಖಾನ್

ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರು 'ನೀರನ್ನು ಉಳಿಸಿ' ಎಂಬ ಸಂದೇಶವನ್ನು ವಿಭಿನ್ನ ಹಾಗೂ ವಿಶಿಷ್ಠ ರೀತಿಯಲ್ಲಿ ನೀಡಿದ್ದಾರೆ. ನೀರಿಗೆ ನಮಸ್ಕರಿಸಿ ಅದನ್ನು ಕುಡಿದು 'ನೀರು ಅತ್ಯಮೂಲ್ಯ. ಎಂಥ ದೊಡ್ಡ ವ್ಯಕ್ತಿಗಾದರೂ ನೀರು ಬೇಕೇ ಬೇಕು' ಎಂಬ ಸಂದೇಶವನ್ನು ''ಡೋಂಕ್ ಥಕಾವೋ ಪಾನೀ ಬಚಾವೋ..' ಎಂದು ಸಿಂಪಲ್ ಆಗಿ ಪೋಸ್ಟ್ ಮಾಡುವ ಮೂಲಕ ಹಲವರ ಮೆಚ್ಚುಗೆ ಪಡೆದಿದ್ದಾರೆ.

Vijaya Karnataka Web 15 Jul 2019, 1:03 pm
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಯಾವಾಗಲೂ ವಿಭಿನ್ನವಾಗಿಯೇ ಯೋಚಿಸುವ ಸ್ಟಾರ್. ನಟರಾಗಿ ಸಲ್ಮಾನ್ ಖಾನ್ ಇಂದು ತಲುಪಿರುವ ಹಂತ ಬಹಳಷ್ಟು ಜನರಿಗೆ ಗೊತ್ತಿರುವಂತೆ ಅತ್ಯಂತ ಉತ್ಕೃಷ್ಟವಾದುದು ಮತ್ತು ಮಹತ್ವವಾದುದು. ಸದ್ಯಕ್ಕೆ 'ದಬಾಂಗ್ 3' ಚಿತ್ರದ ಶೂಟಿಂಗ್‌ನಲ್ಲಿ ನಿರತರಾಗಿರುವ ಸಲ್ಮಾನ್ ಖಾನ್ ಅವರು ಈಗಾಗಲೇ ಬಾಲಿವುಡ್‌ನಲ್ಲಿ ಬಹಳಷ್ಟು ಹೆಸರು ಮಾಡಿದವರು. ಪ್ರತಿಯೊಂದು ವಿಷಯದಲ್ಲೂ ಸಲ್ಮಾನ್ ವಿಭಿನ್ನ ಮತ್ತು ವಿಶಿಷ್ಠ ಎಂಬುದು ಅವರ ನಡೆಯಿಂದಲೇ ಅರಿವಾಗುತ್ತದೆ.
Vijaya Karnataka Web salman1507


ಸದ್ಯಕ್ಕೆ ಸಲ್ಮಾನ್ ಖಾನ್ ಅವರು ಟ್ವೀಟರ್‌ನಲ್ಲಿ 'ನೀರು ಉಳಿಸಿ' ಎಂಬ ಸ್ಲೋಗನ್ ಪೋಸ್ಟ್ ಮಾಡಿದ್ದಾರೆ. ಇತ್ತೀಚೆಗೆ ಸಿನಿಮಾ ತಾರೆಗಳು ಸೇರಿದಂತೆ, ಬಹಳಷ್ಟು ಜನರು 'ಬಾಟೆಲ್ ಕ್ಯಾಪ್ ಚಾಲೆಂಜ್‌' ಸ್ವೀಕರಿಸಿ ಅದನ್ನು ಮಾಡಿ ಟ್ರೆಂಡ್ ಸೃಷ್ಟಿಸಿರುವುದು ಬಹಳಷ್ಟು ಮಂದಿಗೆ ಗೊತ್ತೇ ಇದೆ. ಆದರೆ, ಸಲ್ಮಾನ್ ಖಾನ್ ಅದನ್ನು ವಿಭಿನ್ನ ಬಗೆಯಲ್ಲಿ ಬಳಸಿಕೊಂಡಿದ್ದಾರೆ. ಸಲ್ಮಾನ್ ಈ ನಡೆಗೆ ಹಲವರು ಮೆಚ್ಚುಗೆ ಸೂಚಿಸಿದ್ದು, ಅವರ ಈ ಟ್ವೀಟ್ ಸಾಕಷ್ಟು ರೀ-ಟ್ವೀಟ್ ಸಹ ಆಗಿದೆ.

'ನೀರನ್ನು ಉಳಿಸಿ' ಎಂಬ ಘೋಷಣೆಗೆ 'ಬಾಟೆಲ್ ಚಾಲೆಂಜ್' ಬಳಸಿಕೊಂಡಿರುವ ಸಲ್ಮಾನ್, ನೀರಿಗೆ ಕೈಮುಗಿದು ಬಾಟೆಲ್ ಕ್ಯಾಪ್ ತೆಗೆದು 'ಪಾನಿ ಬಚಾವೋ (ನೀರನ್ನು ಉಳಿಸಿ)' ಎಂದು ಹೇಳಿ ಅದನ್ನು ಕುಡಿಯುತ್ತಾರೆ. ಅಂದರೆ, 'ನೀರು ಅತ್ಯಂತ ಅಮೂಲ್ಯವಾದುದು. ಎಂಥ ದೊಡ್ಡ ಸ್ಟಾರ್ ಆಗಿದ್ದರೂ ಬದುಕಲು ನೀರು ಅನಿವಾರ್ಯ. ಅದನ್ನು ವೇಸ್ಟ್ ಮಾಡಬೇಡಿ. ಬೇರೆಯವರು ಕುಡಿಯಲು ನೀರನ್ನು ಉಳಿಸಿ, ಯಾರೂ ಬಾಯಾರಿಕೆಯಿಂದ ಬಳಲದಂತೆ ನೋಡಿಕೊಳ್ಳಿ..' ಎಂಬ ಸಂದೇಶವನ್ನು ನಟ ಸಲ್ಮಾನ್ ಖಾನ್ ಅವರು ಸೂಕ್ಷ್ಮವಾಗಿ ನೀಡಿದ್ದಾರೆ.

ಸಿಂಪಲ್ ಆಗಿ 'ಡೋಂಕ್ ಥಕಾವೋ ಪಾನೀ ಬಚಾವೋ..' ಎಂದು ಹೇಳುವ ಮೂಲಕ ನಟ ಸಲ್ಮಾನ್ ಭಾರೀ ದೊಡ್ಡ ಸಂದೇಶವನ್ನೇ ಜಗತ್ತಿನ ಜನತೆಗೆ ಕೊಟ್ಟಿದ್ದಾರೆ. 'ಯಾರೂ ಬಾಯಾರಿಕೆಯಿಂದ ಬಳಲದಂತೆ ಆಗಲಿ.. ನೀರು ಅತ್ಯಮೂಲ್ಯ, ಅದನ್ನು ಉಳಿಸಿ..' ಎಂದು ಹೇಳಿ ತಾವು ಗಟಗಟನೆ ನೋರು ಕುಡಿದು 'ಎಂಥ ದೊಡ್ಡ ವ್ಯಕ್ತಿಗಾದರೂ ಕುಡಿಯಲು ನೀರು ಬೇಕೇಬೇಕು' ಎಂಬ ಮೆಸೇಜ್ ನೀಡಿದ್ದಾರೆ. ಪ್ರತಿ ವಿಷಯದಲ್ಲೂ ಸಲ್ಮಾನ್ ವಿಭಿನ್ನವಾಗಿ ಯೋಚಿಸಿ ಅದಕ್ಕೆ ಸೂಕ್ತವಾಗಿ ನಡೆದುಕೊಳ್ಳುವುದೇ ಅವರ ಈ ಪರಿಯ ಯಶಸ್ಸಿನ ಗುಟ್ಟು ಎಂದು ಹೇಳಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌