ಆ್ಯಪ್ನಗರ

ವಿಂಗ್ ಕಮಾಂಡರ್‌ಗೆ 'ಅಭಿನಂದನೆ' ಸಲ್ಲಿಸಿದ ಬಾಲಿವುಡ್ ತಾರೆಗಳು

ಶತ್ರು ದೇಶದವರ ಕೈಗೆ ಸೆರೆ ಸಿಕ್ಕರೂ ಅಪ್ರತಿಮ ಧೈರ್ಯ, ಸಾಹಸ ಮೆರೆದು ದೇಶದ ರಹಸ್ಯ ಕಾಪಾಡುವಿಕೆ ಮತ್ತು ಸಾರ್ವಭೌಮತೆ ಮರೆದ ಹೆಮ್ಮೆಯ ಯೋಧ ಅಭಿನಂದನ್ ಅವರಿಗೆ ಸಾಕಷ್ಟು ಬಾಲಿವುಡ್ ತಾರೆಯರು ಟ್ವೀಟರ್ ಮೂಲಕ ಮಸೇಜ್ ಮಾಡಿ 'ಅಭಿನಂದನೆ' ಸಲ್ಲಿಸಿದ್ದಾರೆ.

Vijaya Karnataka Web 2 Mar 2019, 4:56 pm
ಭಾರತದ ಸೈನಿಕರ ಮೇಲೆ ಭಯೋತ್ಪಾದಕರಿಂದ ಪುಲ್ವಾಮಾದಲ್ಲಿ ನಡೆದ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಏರ್ ಸರ್ಜಿಕಲ್ ಸ್ಟ್ರೈಕ್ ಗೊತ್ತೇ ಇದೆ. ಈ ವೇಳೆ ಪಾಕಿಸ್ತಾನಿ ಫ್ಲೈಟ್ ಹೊರೆದುರುಳಿಸಿ ನಂತರ ಆಕಸ್ಮಿಕವಾಗಿ ಪಾಕಿಸ್ತಾದನ ಸೇನೆಗೆ ಸೆರೆ ಸಿಕ್ಕು ಅಲ್ಲಿ ಎರಡು ದಿನ ಕಳೆದು ಈಗ ಬಿಡುಗಡೆಯಾಗಿರುವ ಭಾರತದ ಹೆಮ್ಮೆಯ ಯೋಧ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ದೇಶದ ಎಲ್ಲ ಕಡೆಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.
Vijaya Karnataka Web abhinandan0103


ಜನಸಾಮಾನ್ಯರಿಂದು ಹಿಡಿದು ವಿವಿಧ ರಾಜಕೀಯ ಪಕ್ಷಗಳ ನಾಯಕರು, ಸಿನಿಮಾ ತಾರೆಯರು, ಕ್ರಿಕೆಟ್ ತಾರೆಗಳು ಎಲ್ಲರೂ ಕೂಡ ಅಭಿನಂದನ್ ಅವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ. ಶತ್ರು ದೇಶದವರ ಕೈಗೆ ಸೆರೆ ಸಿಕ್ಕರೂ ಅಪ್ರತಿಮ ಧೈರ್ಯ, ಸಾಹಸ ಮೆರೆದು ದೇಶದ ರಹಸ್ಯ ಕಾಪಾಡುವಿಕೆ ಮತ್ತು ಸಾರ್ವಭೌಮತೆ ಮರೆದ ಹೆಮ್ಮೆಯ ಯೋಧ ಅಭಿನಂದನ್ ಅವರಿಗೆ ಸಾಕಷ್ಟು ಬಾಲಿವುಡ್ ತಾರೆಯರು ಟ್ವೀಟರ್ ಮೂಲಕ ಮಸೇಜ್ ಮಾಡಿ ಮತ್ತೆ ತವರೂರಿಗೆ ಸ್ವಾಗತ ಕೋರಿದ್ದಾರೆ. ಮರಳಿ ತಾಯ್ನೆಲಕ್ಕೆ ಬಂದ ಹೆಮ್ಮೆಯ ಯೋಧ ಅಭಿನಂದನ್ ಅವರಿಗೆ 'ಸಲಾಂ' ಎಂದಿದ್ದಾರೆ.

ಬಾಲಿವುಡ್ ನಟರಾದ ಶಾಹಿದ್ ಕಪೂರ್, ಅಭಿಷೇಕ್ ಬಚ್ಚನ್, ಅಕ್ಷಯ್ ಕುಮಾರ್, ಶಾರುಖ್ ಖಾನ್, ಸಲ್ಮಾನ್ ಖಾನ್ ಹಾಗೂ ಸಾಕಷ್ಟು ನಟರು ಅಭಿನಂದನ್ ಅವರಿಗೆ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ನಟ ಶಾರೂಖ್ ಖಾನ್ ಅವರು "ನಿಜಕ್ಕೂ ನಿಮ್ಮ ಶಕ್ತಿ, ಪರಾಕ್ರಮ ನಮಗೆ ಹೆಮ್ಮೆ. ಸುರಕ್ಷಿತವಾಗಿ ನೀವು ಪಾಸ್ ಬಂದಿರೋದು ಖುಷಿಯ ಜೊತೆಗೆ ನಮಗೆ ಭಾರೀ ಹೆಮ್ಮೆಯನ್ನೂ ನೀಡಿದೆ" ಎಂದಿದ್ದಾರೆ.

ನಟಿಯರಾದ ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ, ಆಲಿಯಾ ಭಟ್ ಕೂಡ ಅಭಿನಂದನ್ ಅವರಿಗೆ ಟ್ವೀಟ್ ಮಾಡಿ ಅಭಿನಂದನೆ ಹೇಳಿದ್ದಾರೆ. ನಡೆದಿದ್ದು ನಿಜವಾಗಿಯೂ ದುರಂತ. ಆದರೆ, ನೀವು ತೋರಿರುವ ಧೈರ್ಯ, ಸಮಯಪ್ರಜ್ಞೆ ಮತ್ತು ಪ್ರಾಮಾಣಿಕತೆ ನಮಗೆಲ್ಲರಿಗೂ ಸ್ಪೂರ್ತಿ ಎಂದು ಅವರನ್ನು ಕೊಂಡಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌