ಆ್ಯಪ್ನಗರ

ಪ್ರಧಾನಿಯನ್ನು ಭೇಟಿಯಾದ ಬಾಲಿವುಡ್‌ ಯಂಗ್‌ಸ್ಟರ್ಸ್‌

ಹಿಂದಿ ಚಿತ್ರರಂಗ ಯುವ ನಟರು, ನಿರ್ದೇಶಕರು, ನಿರ್ಮಾಪಕರ ತಂಡವೊಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ...

Vijaya Karnataka 12 Jan 2019, 5:00 am
ಹಿಂದಿ ಚಿತ್ರರಂಗ ಯುವ ನಟರು, ನಿರ್ದೇಶಕರು, ನಿರ್ಮಾಪಕರ ತಂಡವೊಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಚಿತ್ರೋದ್ಯಮದ ಪ್ರಸಕ್ತ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿತು. ಆಲಿಯಾ ಭಟ್‌, ರಣಬೀರ್‌ ಕಪೂರ್‌, ರಣವೀರ್‌ ಸಿಂಗ್‌, ರಾಜ್‌ಕುಮಾರ್‌ ರಾವ್‌, ಆಯುಷ್ಮಾನ್‌ ಖುರಾನ, ಭೂಮಿ ಫಡ್ನೇಕರ್‌, ಕರಣ್‌ ಜೋಹರ್‌, ರೋಹಿತ್‌ ಶೆಟ್ಟಿ, ವರುಣ್‌ ಧವನ್‌, ಸಿದ್ಧಾರ್ಥ್‌ ಮಲ್ಹೋತ್ರಾ ಮುಂತಾದವರಿದ್ದ ಈ ತಂಡ ಮೋದಿಯವರೊಂದಿಗೆ ಸೆಲ್ಫಿ ತೆಗೆದುಕೊಂಡರು.
Vijaya Karnataka Web modi-1


ಕಳೆದ ಬಾರಿಯೂ ಬಾಲಿವುಡ್‌ ಗಣ್ಯರ ಒಂದು ತಂಡ ಪ್ರಧಾನಿಯನ್ನು ಭೇಟಿಯಾಗಿತ್ತು. ಆದರೆ ಈ ತಂಡದಲ್ಲಿ ಮಹಿಳಾ ಪ್ರತಿನಿಧಿಗಳೇ ಇಲ್ಲ ಎಂಬ ಟೀಕೆ ವ್ಯಕ್ತವಾಗಿತ್ತು. ಈ ಬಾರಿ ಭೇಟಿಯಾಗಿರುವ ಸಿಲೆಬ್ರಿಟಿಗಳ ತಂಡದಲ್ಲಿ ಮಹಿಳೆಯರೂ ಇರುವುದು ಗಮನಾರ್ಹವಾಗಿದೆ. ಮೋದಿಯೊಂದಿಗೆ ತೆಗೆದ ಸೆಲ್ಫಿಯನ್ನು ನಟರು ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಈ ಫೋಟೋಗಳ ವಿರುದ್ಧ ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲಿಂಗ್‌ ಆಗುತ್ತಿದ್ದು, ಬಾಲಿವುಡ್‌ ಸಿಲೆಬ್ರಿಟಿಗಳು ಮೋದಿಯನ್ನು ಭೇಟಿಯಾಗಿರುವುದರ ಹಿಂದೆ ರಾಜಕೀಯ ಉದ್ದೇಶವಿದೆ ಎಂಬ ಟೀಕೆಗಳು ಕೇಳಿ ಬಂದಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌