ಆ್ಯಪ್ನಗರ

Raju Srivastava Health Update: ಹಾಸ್ಯನಟ ರಾಜು ಶ್ರೀವಾಸ್ತವ್ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ ಯೋಗಿ ಆದಿತ್ಯನಾಥ್

ಖ್ಯಾತ ಬಾಲಿವುಡ್ ಹಾಸ್ಯನಟ, ಸ್ಟ್ಯಾಂಡಪ್ ಕಾಮಿಡಿಯನ್ ರಾಜು ಶ್ರೀವಾಸ್ತವ್ ಅವರಿಗೆ ಹೃದಯಾಘಾತವಾಗಿದ್ದು, ದೆಹಲಿಯ ಆಸ್ಪತ್ರೆಯಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಯೋಗಿ ಆದಿತ್ಯನಾಥ್ ಅವರು ನೆರವಿನ ಹಸ್ತ ಚಾಚಿದ್ದಾರೆ. ಅಂದಹಾಗೆ 1980ರಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ರಾಜು ಅವರು 'Baaziga', 'Maine Pyar Kiya' ಸಿನಿಮಾದಲ್ಲಿ ನಟಿಸಿದ್ದಾರೆ.

Authored byಪದ್ಮಶ್ರೀ ಭಟ್ | TIMESOFINDIA.COM 11 Aug 2022, 2:15 pm
ಹಾಸ್ಯನಟ ರಾಜು ಶ್ರೀವಾಸ್ತವ್ ( Raju Srivastava ) ಅವರು ಹೃದಯಾಘಾತವಾಗಿದ್ದು, ಸದ್ಯ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ( Yogi Adityanath ) ಅವರು ಈ ಕುಟುಂಬಕ್ಕೆ ಸಹಾಯಹಸ್ತ ಚಾಚಿದ್ದಾರೆ.
Vijaya Karnataka Web raju


ರಾಜು ಶ್ರೀವಾಸ್ತವ್ ಆರೋಗ್ಯ ವಿಚಾರಿಸಿದ ರಾಜ್‌ನಾಥ್ ಸಿಂಗ್

ರಾಜು ಶ್ರೀವಾಸ್ತವ್ ಅವರ ಆರೋಗ್ಯ ಸ್ಥಿತಿ ತುಂಬ ಚಿಂತಾಜನಕವಾಗಿದೆಯಂತೆ, ಹಾಗಾಗಿ ರಾಜು ಪತ್ನಿ ಶಿಖಾ ಶ್ರೀವಾಸ್ತವ ಅವರಿಗೆ ಯೋಗಿ ಅವರು ಸಹಾಯ ಮಾಡುವುದಾಗಿ ಹೇಳಿದ್ದಾರೆ. ಜಿಮ್‌ನಲ್ಲಿ ವರ್ಕೌಟ್ ಮುಗಿಸಿದ ನಂತರದಲ್ಲಿ ರಾಜು ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದು, ಅವರನ್ನು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ದಾಖಲು ಮಾಡಲಾಯ್ತು. ಸದ್ಯ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಈ ಆಸ್ಪತ್ರೆಯ ವೈದ್ಯರ ಸಂಪರ್ಕದಲ್ಲಿದ್ದು ರಾಜು ಆರೋಗ್ಯವನ್ನು ವಿಚಾರಿಸುತ್ತಿದ್ದಾರೆ.

Raju Srivastav: ಕಾಮಿಡಿಯನ್ ರಾಜು ಶ್ರೀವಾಸ್ತವ್‌ಗೆ ಹೃದಯಾಘಾತ

ರಾಜುರಿಗೆ ಏನಾಗಿದೆ?
ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್ ಅವರು ಬೆಳಗ್ಗೆ ಎಂದಿನಂತೆ ವರ್ಕೌಟ್ ಮಾಡಲು ಜಿಮ್‌ಗೆ ಹೋಗಿದ್ದರು. ಥ್ರೆಡ್‌ಮಿಲ್‌ನಲ್ಲಿ ವಾಕ್ ಮಾಡುತ್ತಿದ್ದಾಗ ರಾಜು ಶ್ರೀವಾಸ್ತವ್ ಅವರಿಗೆ ಎದೆನೋವು ಕಂಡುಬಂದಿತು. ಥ್ರೆಡ್‌ಮಿಲ್ ಬಳಿಯೇ ರಾಜು ಶ್ರೀವಾಸ್ತವ್ ಕುಸಿದುಬಿದ್ದರು. ಕೂಡಲೆ ರಾಜು ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬರಲಾಯ್ತು. ರಾಜುಗೆ ಹೃದಯಾಘಾತ ಆಗಿದೆ ಎಂದು ತಿಳಿದಾಗ ವೈದ್ಯರು ರಾಜು ಶ್ರೀವಾಸ್ತವ್‌ಗೆ ಎರಡು ಬಾರಿ ಸಿಪಿಆರ್‌ ನೀಡಲಾಯಿತು.

Dil Raju: ಮೊದಲ ಪತ್ನಿ ಹಾಗೂ 2ನೇ ಪತ್ನಿಯ ಹೆಸರನ್ನು ಸೇರಿಸಿ ಮಗನಿಗೆ ನಾಮಕರಣ ಮಾಡಿದ ನಿರ್ಮಾಪಕ 'ದಿಲ್' ರಾಜು

ಚಿತ್ರರಂಗದಲ್ಲಿ ಸಕ್ರಿಯ
ಅಂದಹಾಗೆ ರಾಜು ಅವರಿಗೆ 58 ವರ್ಷವಾಗಿದೆ. ಉತ್ತರ ಪ್ರದೇಶದಲ್ಲಿ ಜನಿಸಿದ ರಾಜು ( ಸತ್ಯಪ್ರಕಾಶ್ ಶ್ರೀವಾಸ್ತವ್ ) ಅನೇಕ ಸ್ಟೇಜ್ ಶೋಗಳನ್ನು ನೀಡಿದ್ದಾರೆ. The Great Indian Laughter Challenge ಶೋನಲ್ಲಿ ಭಾಗಿಯಾದ ನಂತರದಲ್ಲಿ ಅವರಿಗೆ ದೊಡ್ಡ ಪಾಪುಲಾರಿಟಿ ಸಿಕ್ಕಿತು. 1980ರಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ರಾಜು ಅವರು 'Baaziga', 'Maine Pyar Kiya' ಸಿನಿಮಾದಲ್ಲಿ ನಟಿಸಿದ್ದಾರೆ. ಬಿಗ್ ಬಾಸ್ ಸೀಸನ್ 3 ಶೋನಲ್ಲಿ ಅವರು ಭಾಗಿಯಾಗಿದ್ದರು.

'ದಿ ಕಪಿಲ್ ಶರ್ಮಾ ಶೋ', 'ಶಕ್ತಿಮಾನ್', 'ಕಾಮಿಡಿ ಸರ್ಕಸ್', 'ಲಾಫ್ ಇಂಡಿಯಾ ಲಾಫ್', 'ನಚ್ ಬಲಿಯೇ' ಮುಂತಾದ ರಿಯಾಲಿಟಿ ಶೋಗಳಲ್ಲಿ ರಾಜು ಶ್ರೀವಾಸ್ತವ್ ಭಾಗವಹಿಸಿದ್ದಾರೆ.
ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌