ಆ್ಯಪ್ನಗರ

ವಿವಾದದಲ್ಲಿ ದೀಪಿಕಾ-ರಣವೀರ್ ಸಿಂಧಿ ಶೈಲಿ ಮದುವೆ

ಇವರ ವಿರುದ್ಧ ಕ್ರಮಕೈಗೊಳ್ಳಲು ಇಟಲಿಯ ಸಿಖ್ ಸಂಘಟನೆಯ ಮುಖ್ಯಸ್ಥರು ಅಕಾಲ್ ತಖ್ತ್ ಜಾಥೇದಾರ್ ಗಮನಕ್ಕೆ ತರಲಾಗುತ್ತದೆ ಎಂದಿದ್ದಾರೆ. ನಮಗೆ ದೂರು ಸಲ್ಲಿಕೆಯಾದ ಬಳಿಕ ಐದು ಮಂದಿ ಹಿರಿಯ ಧಾರ್ಮಿಕ ಮುಖಂಡರನ್ನು ಸಂಪರ್ಕಿಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.

TIMESOFINDIA.COM 19 Nov 2018, 5:53 pm
ಬಾಲಿವುಡ್‌ನ ಜನಪ್ರಿಯ ತಾರಾ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇಟಲಿಯ ಲೇಕ್ ಕೊಮೊದಲ್ಲಿ ಸಪ್ತಪದಿ ತುಳಿದಿದ್ದು ಇದೀಗ ಮುಂಬೈಗೆ ಆಗಮಿಸಿದ್ದಾರೆ. ಈ ಜೋಡಿ ಕೊಂಕಣಿ ಮತ್ತು ಸಿಂಧಿ ಸಂಪ್ರದಾಯದಂತೆ ಮದುವೆಯಾಗಿತ್ತು. ಆದರೆ ಸಿಂಧಿ ಸಂಪ್ರದಾಯದ ಮದುವೆ ಈಗ ವಿವಾದಕ್ಕೆ ಕಾರಣವಾಗಿದೆ.
Vijaya Karnataka Web deepveer


ಆನಂದ್ ಕಾರಂಜ್ ಸಂಪ್ರದಾಯ ಎಂದು ಕರೆಯುವ ಇದರಲ್ಲಿ ಗುರು ಗ್ರಂಥ ಸಾಹೀಬ್‍ನ್ನು ಗುರುದ್ವಾರ ಹೊರತುಪಡಿಸಿ ಬೇರೆಲ್ಲೂ ಕೊಂಡೊಯ್ದು ಆಚರಿಸುವಂತಿಲ್ಲ ಎಂದು ಸಿಖ್ಖರ ಪರಮೋಚ್ಚ ಧರ್ಮಪೀಠ ಅಕಾಲ್ ತಖ್ತ್ ಹೇಳುತ್ತದೆ. ಅಕಾಲ್ ತಖ್ತ್‌ ನಿಯಮಗಳನ್ನು ಉಲ್ಲಂಘಿಸಿ ದೀಪಿಕಾ ಮತ್ತು ರಣವೀರ್ ಇಟಲಿಯ ಲೇಕ್ ಕೊಮೊದಲ್ಲಿ ಮದುವೆಯಾಗಿರುವುದು ಸಿಖ್ ಧಾರ್ಮಿಕ ಮುಖಂಡರ ಕೆಂಗಣ್ಣಿಗೆ ಕಾರಣವಾಗಿದೆ.

ಇವರ ವಿರುದ್ಧ ಕ್ರಮಕೈಗೊಳ್ಳಲು ಇಟಲಿಯ ಸಿಖ್ ಸಂಘಟನೆಯ ಮುಖ್ಯಸ್ಥರು ಅಕಾಲ್ ತಖ್ತ್ ಜಾಥೇದಾರ್ ಗಮನಕ್ಕೆ ತರಲಾಗುತ್ತದೆ ಎಂದಿದ್ದಾರೆ. ನಮಗೆ ದೂರು ಸಲ್ಲಿಕೆಯಾದ ಬಳಿಕ ಐದು ಮಂದಿ ಹಿರಿಯ ಧಾರ್ಮಿಕ ಮುಖಂಡರನ್ನು ಸಂಪರ್ಕಿಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಭಾನುವಾರ (ನವೆಂಬರ್ 18) ಮುಂಬೈಗೆ ಆಗಮಿಸಿರುವ ರಣವೀರ್-ದೀಪಿಕಾ ಜೋಡಿ ಕೆಲವೊಂದು ಸಂಪ್ರದಾಯಗಳಲ್ಲಿ ಭಾಗಿಯಾಗಿದೆ. ಇದೇ ನ.21ರಂದು ಬೆಂಗಳೂರಿನಲ್ಲಿ ಮತ್ತು 28ರಂದು ಮುಂಬಯಿಯಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಬಾಲಿವುಡ್‌ ಮತ್ತು ದಕ್ಷಿಣ ಭಾರತದ ಸಿನಿಮಾ ತಾರೆಯರು ಮತ್ತು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರಂತೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌