ವಿಚಾರವಾದಿ ಹಾಗೂ ಕಾರ್ಯಕರ್ತ ಡಾ.ನರೇಂದ್ರ ದಾಬೋಲ್ಕರ್ ಹತ್ಯೆಯಾಗಿ ವರ್ಷಗಳೇ ಉರುಳಿಹೋಗಿವೆ. ಮೂಢನಂಬಿಕೆಗಳ ವಿರುದ್ಧ ಹೋರಾಡಿದ ದಾಬೋಲ್ಕರ್ 2013ರ ಆಗಸ್ಟ್ 20ರಂದು ಪುಣೆಯಲ್ಲಿ ಹಾಡು ಹಗಲೇ ಹತ್ಯೆಗೀಡಾದರು.
19080ರ ದಶಕದಿಂದಲೇ ಮಹಾರಾಷ್ಟ್ರದಲ್ಲಿ ಮೂಢನಂಬಿಕೆಗಳ ವಿರುದ್ಧ ಸಮರ ಸಾರಿದ ಅವರು ’ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಮಿತಿ’ (ಎಂಎಎನ್ಎಸ್-ಮನ್ಸ್) ಸ್ಥಾಪಿಸಿದರು. ಇದೀಗ ಅವರ ಬಗ್ಗೆ ಸಿನಿಮಾ ಮಾಡುವುದಾಗಿ ಜ್ಯೋತಿಷಿಯೊಬ್ಬರು ಘೋಷಿಸಿದ್ದಾರೆ.
ಜ್ಯೋತಿಷ್ಯ, ಭವಿಷ್ಯ, ಮೂಢನಂಬಿಕೆಗಳ ವಿರುದ್ಧ ಹೋರಾಡಿದ ದಾಬೋಲ್ಕರ್ ಮೇಲೆ ಜ್ಯೋತಿಷಿಯೊಬ್ಬರು ಸಿನಿಮಾ ಮಾಡಲು ಹೊರಟಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ವಿಶೇಷ ಎಂದರೆ ಅವರ ಕುರಿತ ಕಿರುಚಿತ್ರಕ್ಕೆ 'ದಾಬೋಲ್ಕರಾಂಚೆ ಭೂತ್' (ದಾಬೋಲ್ಕರ್ ಭೂತ್) ಎಂದು ಹೆಸರಿಡಲಾಗಿದೆ.
ಈ ಸಿನಿಮಾ ಮಾಡುತ್ತಿರುವ ಜ್ಯೋತಿಷಿ ಹೆಸರು ಅತುಲ್ ಚಾಜೇಡ್. ಪುಣೆಯ ಮಂಗಳವಾರ್ ಪೇಟೆಯಲ್ಲಿರುವ ಇವರು ದಾಬೋಲ್ಕರ್ ಸಿನಿಮಾದಲ್ಲಿ ಹಲವಾರು ಸತ್ಯ ಸಂಗತಿಗಳನ್ನು ತೆರೆದಿಡುತ್ತೇನೆ ಎಂದಿದ್ದಾರೆ. ದಾಬೋಲ್ಕರ್ ಕುಟುಂಬ ಇದೆಲ್ಲಾ ಪ್ರಚಾರದ ಗಿಮಿಕ್ ಅಷ್ಟೇ ಎಂದಿದೆ. ಪುಣೆಯಲ್ಲಿ ಅಲ್ಲಲ್ಲಿ ಪೋಸ್ಟರ್ಗಳನ್ನು ಅಂಟಿಸಲಾಗಿದ್ದು ಆಡಿಷನ್ಗೂ ಕರೆಯಲಾಗಿದೆ. ಸಾಮಾಜಿಕ ಮಾಧ್ಯಮಗಳ ಲಿಂಕ್ಗಳನ್ನೂ ಇದರಲ್ಲಿ ಹಾಕಲಾಗಿದೆ.
ಸ್ವಯಂ ಘೋಷಿತ ಈ ಜ್ಯೋತಿಷಿ ವಿಜಯ ಕರ್ನಾಟಕ ಸೋದರ ಪತ್ರಿಕೆ ಪುಣೆ ಮಿರರ್ ಜತೆಗೆ ಮಾತನಾಡಿದ್ದು, 'ದಾಬೋಲ್ಕರ್ ಅವರ ಮಾತುಗಳನ್ನು ಹಲವಾರು ಸಲ ಕೇಳಿದ್ದೇನೆ. ನಿಮ್ಮ ಅನುಭವಕ್ಕೆ ಬಂದದ್ದನ್ನು ನಂಬಿ ಎಂದು ಹೇಳುತ್ತಿದ್ದರು. ನಮ್ಮ ಅನುಭವಕ್ಕೆ ಬಂದಿದ್ದು, ನೋಡಿದ್ದು ಅಸ್ತಿತ್ವದಲಿರುತ್ತದೆ. ಆದರೆ ಅವರ ಸಿದ್ಧಾಂತವನ್ನು ಅವರ ಅನುಯಾಯಿಗಳು ತಿರಸ್ಕರಿಸಿದರು. ಈಗ ಅವರ ಹೆಸರನ್ನು ಬಳಸಿಕೊಂಡು ಮನ್ಸ್ ಸದಸ್ಯರು, ಅನುಯಾಯಿಗಳು ತಮ್ಮದೇ ಅಜೆಂಡಾ ಮೂಲಕ ಮುನ್ನಡೆಯುತ್ತಿದ್ದಾರೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದೇನೆ. ಈ ಕಿರುಚಿತ್ರದ ಮೂಲಕ ಸತ್ಯ ಏನು ಎಂದು ಹೇಳುತ್ತೇನೆ. ಜತೆಗೆ ಅವರ ನಿಜವಾದ ಆಲೋಚನೆಗಳನ್ನು ತಿಳಿಸುತ್ತೇನೆ. ಇದುವರೆಗೆ 85 ಎನ್ಜಿಓಗಳ ಬೆಂಬಲವೂ ಸಿಕ್ಕಿದೆ. ಸತ್ಯವನ್ನು ತಿಳಿಸುವುದಷ್ಟೇ ನನ್ನ ಉದ್ದೇಶ' ಎಂದಿದ್ದಾರೆ.
ಈ ಬಗ್ಗೆ ದಾಬೋಲ್ಕರ್ ಕುಟುಂಬದ ಜತೆಗೆ ಚರ್ಚಿಸಿದ್ದೀರಾ ಎಂಬ ಪ್ರಶ್ನೆಗೆ, 'ಅವರೊಬ್ಬ ಸಾರ್ವಜನಿಕ ವ್ಯಕ್ತಿಯಾಗಿರುವ ಕಾರಣ ಅವರ ಹೆಸರು ಬಳಸಿಕೊಳ್ಳಲು ಅವರ ಕುಟುಂಬದ ಅನುಮತಿ ಬೇಕಾಗಿಲ್ಲ ಅನ್ನಿಸುತ್ತದೆ.' ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ದಾಬೋಲ್ಕರ್ ಪುತ್ರ, ಮನ್ಸ್ ಕಾರ್ಯಕರ್ತರೂ ಆಗಿರುವ ಹಮೀದ್, 'ತುಂಬಾ ವರ್ಷಗಳಿಂದ ಪ್ರಚಾರಕ್ಕಾಗಿ ಚಾಜೇಡ್ ಪ್ರಯತ್ನಿಸುತ್ತಲೇ ಇದ್ದಾರೆ. ಈ ಹಿಂದೊಮ್ಮೆ ಮನ್ಸ್ ಒಂದು ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಜ್ಯೋತಿಷ್ಯ ಶೇ.100ರಷ್ಟು ನಿಖರ ಎಂಬುದನ್ನು ಸಾಬೀತುಪಡಿಸುವ ಸವಾಲು ಹಾಕಲಾಗಿತ್ತು. ಆಗ ಯಾರೂ ಆ ಸವಾಲನ್ನು ಸ್ವೀಕರಿಸಲಿಲ್ಲ. ಮನ್ಸ್ ಕಾರ್ಯಕರ್ತರು ಸಾಂಗ್ಲಿಯಲ್ಲಿ ಅವರನ್ನು ತಡೆದಾಗ ಅಲ್ಲಿಂದ ಪರಾರಿಯಾಗಿದ್ದರು. ಈಗ ಬಿಟ್ಟಿ ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ' ಎಂದಿದ್ದಾರೆ.
19080ರ ದಶಕದಿಂದಲೇ ಮಹಾರಾಷ್ಟ್ರದಲ್ಲಿ ಮೂಢನಂಬಿಕೆಗಳ ವಿರುದ್ಧ ಸಮರ ಸಾರಿದ ಅವರು ’ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಮಿತಿ’ (ಎಂಎಎನ್ಎಸ್-ಮನ್ಸ್) ಸ್ಥಾಪಿಸಿದರು. ಇದೀಗ ಅವರ ಬಗ್ಗೆ ಸಿನಿಮಾ ಮಾಡುವುದಾಗಿ ಜ್ಯೋತಿಷಿಯೊಬ್ಬರು ಘೋಷಿಸಿದ್ದಾರೆ.
ಜ್ಯೋತಿಷ್ಯ, ಭವಿಷ್ಯ, ಮೂಢನಂಬಿಕೆಗಳ ವಿರುದ್ಧ ಹೋರಾಡಿದ ದಾಬೋಲ್ಕರ್ ಮೇಲೆ ಜ್ಯೋತಿಷಿಯೊಬ್ಬರು ಸಿನಿಮಾ ಮಾಡಲು ಹೊರಟಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ವಿಶೇಷ ಎಂದರೆ ಅವರ ಕುರಿತ ಕಿರುಚಿತ್ರಕ್ಕೆ 'ದಾಬೋಲ್ಕರಾಂಚೆ ಭೂತ್' (ದಾಬೋಲ್ಕರ್ ಭೂತ್) ಎಂದು ಹೆಸರಿಡಲಾಗಿದೆ.
ಈ ಸಿನಿಮಾ ಮಾಡುತ್ತಿರುವ ಜ್ಯೋತಿಷಿ ಹೆಸರು ಅತುಲ್ ಚಾಜೇಡ್. ಪುಣೆಯ ಮಂಗಳವಾರ್ ಪೇಟೆಯಲ್ಲಿರುವ ಇವರು ದಾಬೋಲ್ಕರ್ ಸಿನಿಮಾದಲ್ಲಿ ಹಲವಾರು ಸತ್ಯ ಸಂಗತಿಗಳನ್ನು ತೆರೆದಿಡುತ್ತೇನೆ ಎಂದಿದ್ದಾರೆ. ದಾಬೋಲ್ಕರ್ ಕುಟುಂಬ ಇದೆಲ್ಲಾ ಪ್ರಚಾರದ ಗಿಮಿಕ್ ಅಷ್ಟೇ ಎಂದಿದೆ. ಪುಣೆಯಲ್ಲಿ ಅಲ್ಲಲ್ಲಿ ಪೋಸ್ಟರ್ಗಳನ್ನು ಅಂಟಿಸಲಾಗಿದ್ದು ಆಡಿಷನ್ಗೂ ಕರೆಯಲಾಗಿದೆ. ಸಾಮಾಜಿಕ ಮಾಧ್ಯಮಗಳ ಲಿಂಕ್ಗಳನ್ನೂ ಇದರಲ್ಲಿ ಹಾಕಲಾಗಿದೆ.
ಸ್ವಯಂ ಘೋಷಿತ ಈ ಜ್ಯೋತಿಷಿ ವಿಜಯ ಕರ್ನಾಟಕ ಸೋದರ ಪತ್ರಿಕೆ ಪುಣೆ ಮಿರರ್ ಜತೆಗೆ ಮಾತನಾಡಿದ್ದು, 'ದಾಬೋಲ್ಕರ್ ಅವರ ಮಾತುಗಳನ್ನು ಹಲವಾರು ಸಲ ಕೇಳಿದ್ದೇನೆ. ನಿಮ್ಮ ಅನುಭವಕ್ಕೆ ಬಂದದ್ದನ್ನು ನಂಬಿ ಎಂದು ಹೇಳುತ್ತಿದ್ದರು. ನಮ್ಮ ಅನುಭವಕ್ಕೆ ಬಂದಿದ್ದು, ನೋಡಿದ್ದು ಅಸ್ತಿತ್ವದಲಿರುತ್ತದೆ. ಆದರೆ ಅವರ ಸಿದ್ಧಾಂತವನ್ನು ಅವರ ಅನುಯಾಯಿಗಳು ತಿರಸ್ಕರಿಸಿದರು. ಈಗ ಅವರ ಹೆಸರನ್ನು ಬಳಸಿಕೊಂಡು ಮನ್ಸ್ ಸದಸ್ಯರು, ಅನುಯಾಯಿಗಳು ತಮ್ಮದೇ ಅಜೆಂಡಾ ಮೂಲಕ ಮುನ್ನಡೆಯುತ್ತಿದ್ದಾರೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದೇನೆ. ಈ ಕಿರುಚಿತ್ರದ ಮೂಲಕ ಸತ್ಯ ಏನು ಎಂದು ಹೇಳುತ್ತೇನೆ. ಜತೆಗೆ ಅವರ ನಿಜವಾದ ಆಲೋಚನೆಗಳನ್ನು ತಿಳಿಸುತ್ತೇನೆ. ಇದುವರೆಗೆ 85 ಎನ್ಜಿಓಗಳ ಬೆಂಬಲವೂ ಸಿಕ್ಕಿದೆ. ಸತ್ಯವನ್ನು ತಿಳಿಸುವುದಷ್ಟೇ ನನ್ನ ಉದ್ದೇಶ' ಎಂದಿದ್ದಾರೆ.
ಈ ಬಗ್ಗೆ ದಾಬೋಲ್ಕರ್ ಕುಟುಂಬದ ಜತೆಗೆ ಚರ್ಚಿಸಿದ್ದೀರಾ ಎಂಬ ಪ್ರಶ್ನೆಗೆ, 'ಅವರೊಬ್ಬ ಸಾರ್ವಜನಿಕ ವ್ಯಕ್ತಿಯಾಗಿರುವ ಕಾರಣ ಅವರ ಹೆಸರು ಬಳಸಿಕೊಳ್ಳಲು ಅವರ ಕುಟುಂಬದ ಅನುಮತಿ ಬೇಕಾಗಿಲ್ಲ ಅನ್ನಿಸುತ್ತದೆ.' ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ದಾಬೋಲ್ಕರ್ ಪುತ್ರ, ಮನ್ಸ್ ಕಾರ್ಯಕರ್ತರೂ ಆಗಿರುವ ಹಮೀದ್, 'ತುಂಬಾ ವರ್ಷಗಳಿಂದ ಪ್ರಚಾರಕ್ಕಾಗಿ ಚಾಜೇಡ್ ಪ್ರಯತ್ನಿಸುತ್ತಲೇ ಇದ್ದಾರೆ. ಈ ಹಿಂದೊಮ್ಮೆ ಮನ್ಸ್ ಒಂದು ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಜ್ಯೋತಿಷ್ಯ ಶೇ.100ರಷ್ಟು ನಿಖರ ಎಂಬುದನ್ನು ಸಾಬೀತುಪಡಿಸುವ ಸವಾಲು ಹಾಕಲಾಗಿತ್ತು. ಆಗ ಯಾರೂ ಆ ಸವಾಲನ್ನು ಸ್ವೀಕರಿಸಲಿಲ್ಲ. ಮನ್ಸ್ ಕಾರ್ಯಕರ್ತರು ಸಾಂಗ್ಲಿಯಲ್ಲಿ ಅವರನ್ನು ತಡೆದಾಗ ಅಲ್ಲಿಂದ ಪರಾರಿಯಾಗಿದ್ದರು. ಈಗ ಬಿಟ್ಟಿ ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ' ಎಂದಿದ್ದಾರೆ.