ಆ್ಯಪ್ನಗರ

ಡ್ರಗ್ಸ್‌ ದಂಧೆ: NCB ವಿಚಾರಣೆ ವೇಳೆ ದೀಪಿಕಾಗೆ ಆಗಬಹುದಾದ ದೊಡ್ಡ ಸಮಸ್ಯೆ ತಪ್ಪಿಸ್ತಾರಾ ರಣವೀರ್‌?

ನಟಿ ದೀಪಿಕಾ ಪಡುಕೋಣೆ ಮೇಲೆ ಡ್ರಗ್ಸ್‌ ಸೇವನೆ ಆರೋಪ ಕೇಳಿಬಂದಿದ್ದು, ಶನಿವಾರ (ಸೆ.26) ಅವರು ಎನ್‌ಸಿಬಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಲಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಒಂದು ದೊಡ್ಡ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಪತಿ ರಣವೀರ್‌ ಸಿಂಗ್‌ ಹೇಳಿದ್ದಾರೆ!

Vijaya Karnataka Web 25 Sep 2020, 10:10 am
ಮಾದಕ ವಸ್ತು ಸೇವನೆ ಆರೋಪದ ಮೇಲೆ ನಟಿ ದೀಪಿಕಾ ಪಡುಕೋಣೆಗೆ ಎನ್‌ಸಿಬಿ ಅಧಿಕಾರಿಗಳು ನೋಟಿಸ್‌ ಜಾರಿ ಮಾಡಿದ್ದು, ಶನಿವಾರ (ಸೆ.26) ಅವರು ವಿಚಾರಣೆ ಎದುರಿಸಲಿದ್ದಾರೆ. ಅಚ್ಚರಿ ಏನೆಂದರೆ, ಈ ವಿಚಾರಣೆಯಲ್ಲಿ ತಮಗೂ ಭಾಗಿಯಾಗಲು ಅವಕಾಶ ನೀಡಬೇಕು ಎಂದು ದೀಪಿಕಾ ಪತಿ ರಣವೀರ್‌ ಸಿಂಗ್ ಮನವಿ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ!
Vijaya Karnataka Web ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌


ಈವರೆಗೂ ಡ್ರಗ್ಸ್‌ಗೆ ಸಂಬಂಧ ಪಟ್ಟಂತೆ ರಣವೀರ್‌ ಸಿಂಗ್ ಹೆಸರು ಎಲ್ಲಿಯೂ ಕೇಳಿಬಂದಿಲ್ಲ. ಸಮನ್ಸ್‌ ನೀಡಿರುವುದು ದೀಪಿಕಾ ಪಡುಕೋಣೆ ಅವರಿಗೆ ಮಾತ್ರ. ಹಾಗಾದರೆ ಈ ವಿಚಾರಣೆಯಲ್ಲಿ ರಣವೀರ್‌ ಸಿಂಗ್‌ಗೆ ಏನು ಕೆಲಸ? ಅದಕ್ಕೆ ಉತ್ತರ; ದೀಪಿಕಾಗೆ ಇರುವ ಮಾನಸಿಕ ಸಮಸ್ಯೆ! ಹೌದು, ಇಂಥ ಕಠಿಣ ಸಂದರ್ಭಗಳಲ್ಲಿ ದೀಪಿಕಾ ಆತಂಕಕ್ಕೆ ಒಳಗಾಗುತ್ತಾರೆ ಹಾಗೂ ಅವರಿಗೆ ಪ್ಯಾನಿಕ್‌ ಅಟ್ಯಾಕ್‌ ಆಗುವ ಸಾಧ್ಯತೆ ಇದೆ ಎಂಬ ಕಾರಣ ನೀಡುವ ಮೂಲಕ ತಮ್ಮನ್ನೂ ಕೂಡ ವಿಚಾರಣೆಯಲ್ಲಿ ಸೇರಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ರಣವೀರ್‌ ಸಿಂಗ್‌ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಈ ಮನವಿಯನ್ನು ಅಧಿಕಾರಿಗಳು ಒಪ್ಪುತ್ತಾರೋ ಇಲ್ಲವೋ ಎಂಬ ಕೌತುಕ ಈಗ ನಿರ್ಮಾಣ ಆಗಿದೆ. ವಿಚಾರಣೆ ಎದುರಿಸಲು ದೀಪಿಕಾ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಗೋವಾದಲ್ಲಿ ನಡೆಯುತ್ತಿದ್ದ ತಮ್ಮ ಹೊಸ ಸಿನಿಮಾದ ಶೂಟಿಂಗ್ ಅನ್ನು ಅರ್ಧಕ್ಕೆ ನಿಲ್ಲಿಸಿ ಅವರೀಗ ಮುಂಬೈಗೆ ಮರಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಅವರ ಜೊತೆ ರಣವೀರ್‌ ಸಿಂಗ್‌ ಕೂಡ ಕಾಣಿಸಿಕೊಂಡಿದ್ದಾರೆ.

also read: ದೀಪಿಕಾ ಪಡುಕೋಣೆಗೆ ಡ್ರಗ್ಸ್‌ ಜಾಲದ ಕಂಟಕ: ಪ್ರಭಾಸ್‌ ಚಿತ್ರಕ್ಕೂ ಎದುರಾಗಲಿದೆಯಾ ತೊಂದರೆ?

'ಟೈಮ್ಸ್ ನೌ' ಸುದ್ದಿ ವಾಹಿನಿಯ ಪ್ರಕಾರ, ಕರೀಷ್ಮಾ ಎಂಬ ಮ್ಯಾನೇಜರ್‌ ಜೊತೆ ದೀಪಿಕಾ ಪಡುಕೋಣೆ ಮಾದಕ ವಸ್ತು ಬೇಕು ಎಂದು ಬೇಡಿಕೆ ಇಟ್ಟಿದ್ದರು. ಆ ವಿಷಯ ಗೊತ್ತಾಗುತ್ತಿದ್ದಂತೆಯೇ ವಿಚಾರಣೆಯಲ್ಲಿ ಹಾಜರಾಗುವಂತೆ ಕರೀಷ್ಮಾಗೆ ಎನ್‌ಸಿಬಿ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ. ಕರೀಷ್ಮಾ ಮತ್ತು ದೀಪಿಕಾ ನಡುವೆ ನಡೆದಿತ್ತು ಎನ್ನಲಾದ ವಾಟ್ಸಪ್‌ ಸಂದೇಶ ಸಖತ್‌ ವೈರಲ್‌ ಆಗಿದೆ. 2017ರಲ್ಲಿ ಡ್ರಗ್ಸ್‌ ಬೇಕು ಎಂದು ದೀಪಿಕಾ ವಾಟ್ಸಪ್‌ ಮೂಲಕ ಕೇಳಿಕೊಂಡಿದ್ದರು.

also read: ದೀಪಿಕಾ ಡ್ರಗ್ಸ್‌ ಕೇಸ್‌: ತಾವೇ ಪರಿಚಯಿಸಿದ ಹುಡುಗಿ ಬಗ್ಗೆ ಇಂಥ ಸುದ್ದಿ ಕೇಳಿ ಶಾಕ್‌ ಆದ ಇಂದ್ರಜಿತ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌