ಆ್ಯಪ್ನಗರ

ಖಾಸಗಿ ಪ್ರಶ್ನೆಯಿಂದ ಕೆಂಡಾಮಂಡಲರಾದ ಧನುಷ್‌!

ಸದ್ಯಕ್ಕೆ ಕಾಲಿವುಡ್‌ ಸ್ಟಾರ್‌ ಧನುಷ್‌ ತಮ್ಮ 'ವಿಐಪಿ 2' ಚಿತ್ರದ ಪ್ರಚಾರದಲ್ಲಿ ಬಿಝಿಯಾಗಿದ್ದಾರೆ.

ವಿಕ ಸುದ್ದಿಲೋಕ 25 Jul 2017, 2:41 pm
ಸದ್ಯಕ್ಕೆ ಕಾಲಿವುಡ್‌ ಸ್ಟಾರ್‌ ಧನುಷ್‌ ತಮ್ಮ 'ವಿಐಪಿ 2' ಚಿತ್ರದ ಪ್ರಚಾರದಲ್ಲಿ ಬಿಝಿಯಾಗಿದ್ದಾರೆ. ಈ ಸಂಬಂಧ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಧನುಷ್, ಸಂದರ್ಶಕರು ಕೇಳಿದ ಖಾಸಗಿ ಪ್ರಶ್ನೆಯೊಂದಕ್ಕೆ ಕೆಂಡಾಮಂಡಲವಾಗಿದ್ದಾರೆ.
Vijaya Karnataka Web dhanush walks out of interview
ಖಾಸಗಿ ಪ್ರಶ್ನೆಯಿಂದ ಕೆಂಡಾಮಂಡಲರಾದ ಧನುಷ್‌!


ನಿಮಗೆ ನೆನಪಿರಬಹುದು ಕೆಲವು ತಿಂಗಳ ಹಿಂದೆ ದಕ್ಷಿಣ ಭಾರತದ ಜನಪ್ರಿಯ ಗಾಯಕಿ ಸುಚಿತ್ರಾ 'ನಟ, ನಟಿಯರ ಖಾಸಗಿ ಕ್ಷಣ'ಗಳ ಫೋಟೋಗಳನ್ನು ಟ್ವೀಟ್‌ ಮಾಡುವ ಮೂಲಕ ಕಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದರು. ಸೂಪರ್‌ ಸ್ಟಾರ್‌ ರಜನಿಕಾಂತ್‌ ಅಳಿಯನ ಖಾಸಗಿ ಫೋಟೋಗಳನ್ನೂ ಟ್ವಿಟರ್‌ನಲ್ಲಿ ಹಾಕಿ ವಿವಾದಕ್ಕೆಡೆ ಮಾಡಿಕೊಟ್ಟಿದ್ದರು.

ಧನುಷ್‌ ನಟಿಯೊಬ್ಬರ ಜತೆಗಿನ ಖಾಸಗಿ ಸಮಯದ ಫೋಟೋಗಳನ್ನು ಟ್ವಿಟರ್‌ನಲ್ಲಿ ಹರಿಬಿಟ್ಟಿದ್ದರು ಸುಚಿತ್ರಾ. ಅಷ್ಟೇ ಅಲ್ಲ ಒಂದಾದ ಮೇಲೆ ಒಂದರಂತೆ ಗಾಯಕ ಅನಿರುದ್ಧ್‌, ನಟಿ ಹಂಸಿಕಾ, ಟಿವಿ ವಾಹಿನಿಯ ನಿರೂಪಕಿ ದಿವ್ಯದರ್ಶಿನಿಯ ಖಾಸಗಿ ಫೋಟೋಗಳನ್ನೂ ರಿವೀಲ್‌ ಮಾಡಿದ್ದರು.

ಸಂದರ್ಶನದಲ್ಲಿ ಈ ಕುರಿತಾಗಿ ಪ್ರಶ್ನೆ ಕೇಳಿದಾಗ, ಧನುಷ್‌ ಕೋಪ ನೆತ್ತಿಗೇರಿತು. 'ಸುಚಿಲೀಕ್ಸ್‌ ಸಂದರ್ಭದಲ್ಲಿ ಮಾನಸಿಕ ಹಿಂಸೆ ಎದುರಿಸಿದಿರಾ?' ಎಂದು ಕೇಳಿದ ಸಂದರ್ಶಕರ ಪ್ರಶ್ನೆಗೆ ಧನುಷ್‌ ಕೆಂಡಾಮಂಡಲರಾದರು ಎನ್ನಲಾಗಿದೆ. 'ನಾನು ಆಗ ಮಾನಸಿಕ ಹಿಂಸೆ ಅನುಭವಿಸಿದೆ ಎಂದು ನಿಮಗ್ಯಾರು ಹೇಳಿದ್ದು?' ಎಂದು ಮರುಪ್ರಶ್ನಿಸಿದರಂತೆ.

ಇಷ್ಟಕ್ಕೆ ಸುಮ್ಮನಿರದ ಸಂದರ್ಶಕರು ಕಾಲಿವುಡ್‌ನಲ್ಲಿ ನಿಮ್ಮ ಬಗ್ಗೆ ಆರೋಪಗಳು ಕೇಳಿ ಬಂದಿದ್ವಲ್ಲ. ಆಗ ನಿಮ್ಮ ಕುಟುಂಬದ ವಾತಾವರಣ ಚೆನ್ನಾಗಿರಲಿಲ್ಲವಂತೆ....' ಎಂಬ ಇತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಾರೆ. ಇದರಿಂದ ಧನುಷ್‌ ಕೋಪ ಮತ್ತಷ್ಟು ಏರಿ, ಸಂದರ್ಶನದ ಮಧ್ಯದಲ್ಲಿಯೇ ನಿರ್ಗಮಿಸಿದರು ಎಂದು ಮೂಲಗಳು ವರದಿ ಮಾಡಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌