ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿರುವ ’ರೇಸ್ 3’ ಟ್ರೇಲರ್ ಮಂಗಳವಾರ ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ ಸಿನಿಮಾ ಪ್ರಚಾರದ ಭಾಗವಾಗಿ ಸಲ್ಮಾನ್ ಮಾಧ್ಯಮಗಳ ಜತೆಗೆ ಮಾತನಾಡಿದರು. ಈ ಸಂದರ್ಭದಲ್ಲಿ1998ರ ಕೃಷ್ಣಮೃಗ ಬೇಟೆಗೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಯೊಬ್ಬರು ಪ್ರಶ್ನೆ ಕೇಳಿದರು.
”ಕೃಷ್ಣಮೃಗ ಪ್ರಕರಣದಲ್ಲಿ ನೀವು ಅಪರಾಧಿಯಾಗಿದ್ದ ಸಮಯದಲ್ಲಿ, ನಿಮ್ಮ ಸಿನಿಮಾ ನಿರ್ಮಾಪಕರ ಬಗ್ಗೆ, ಅವರ ಹಣದ ಬಗ್ಗೆ ನಿಮಗೆ ನೋವಾಗಲಿಲ್ಲವೇ?" ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದರು, "ಅಂದರೆ ನಾನು ಜೀವನ ಪರ್ಯಂತ ಅಲ್ಲೇ (ಜೈಲಿನಲ್ಲೇ) ಇರುತ್ತೇನೆ ಎಂದುಕೊಂಡ್ರಾ" ಎಂದು ಮರು ಪ್ರಶ್ನಿಸಿದರು ಸಲ್ಲು. ಅನಿರೀಕ್ಷಿತವಾಗಿ ಸಲ್ಲುರಿಂದ ತೂರಿಬಂಡ ಈ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಪತ್ರಕರ್ತ "ಹಾಗೇನು ಇಲ್ಲ" ಎಂದರು. "ಥ್ಯಾಂಕ್ಯೂ, ಅದರ ಬಗ್ಗೆ ನಾನೇನು ತಲೆಕೆಡಿಸಿಕೊಳ್ಳಲಿಲ್ಲ" ಎಂದು ಮತ್ತೆ ಉತ್ತರಿಸಿದರು.
ಕೃಷ್ಣಮೃಗ ಬೇಟೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸಲ್ಮಾನ್ ಖಾನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು ಸಿನಿಮಾ ಶೂಟಿಂಗ್ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರೆಮೋ ಡಿಸೋಜಾ ಆ್ಯಕ್ಷನ್ ಕಟ್ ಹೇಳಿರುವ ರೇಸ್ 3 ಸಿನಿಮಾದಲ್ಲಿ ಸಲ್ಮಾನ್ ಜತೆಗೆ ಅನಿಲ್ ಕಪೂರ್, ಬಾಬಿ ಡಿಯೋಲ್, ಜಾಕ್ವಲಿನ್ ಫರ್ನಾಂಡೀಸ್ ಮುಂತಾದವರು ನಟಿಸಿದ್ದಾರೆ. ಸದ್ಯಕ್ಕೆ ನಿರ್ಮಾಣ ನಂತರದ ಕೆಲಸಗಳಲ್ಲಿ ಸಿನಿಮಾ ತಂಡ ಬಿಝಿಯಾಗಿದೆ. ಜೂನ್ 15ರಂದು ಸಿನಿಮಾ ಪ್ರೇಕ್ಷಕರ ಮುಂದೆ ರೇಸ್ 3 ಬರುತ್ತಿದೆ.
”ಕೃಷ್ಣಮೃಗ ಪ್ರಕರಣದಲ್ಲಿ ನೀವು ಅಪರಾಧಿಯಾಗಿದ್ದ ಸಮಯದಲ್ಲಿ, ನಿಮ್ಮ ಸಿನಿಮಾ ನಿರ್ಮಾಪಕರ ಬಗ್ಗೆ, ಅವರ ಹಣದ ಬಗ್ಗೆ ನಿಮಗೆ ನೋವಾಗಲಿಲ್ಲವೇ?" ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದರು, "ಅಂದರೆ ನಾನು ಜೀವನ ಪರ್ಯಂತ ಅಲ್ಲೇ (ಜೈಲಿನಲ್ಲೇ) ಇರುತ್ತೇನೆ ಎಂದುಕೊಂಡ್ರಾ" ಎಂದು ಮರು ಪ್ರಶ್ನಿಸಿದರು ಸಲ್ಲು. ಅನಿರೀಕ್ಷಿತವಾಗಿ ಸಲ್ಲುರಿಂದ ತೂರಿಬಂಡ ಈ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಪತ್ರಕರ್ತ "ಹಾಗೇನು ಇಲ್ಲ" ಎಂದರು. "ಥ್ಯಾಂಕ್ಯೂ, ಅದರ ಬಗ್ಗೆ ನಾನೇನು ತಲೆಕೆಡಿಸಿಕೊಳ್ಳಲಿಲ್ಲ" ಎಂದು ಮತ್ತೆ ಉತ್ತರಿಸಿದರು.
ಕೃಷ್ಣಮೃಗ ಬೇಟೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸಲ್ಮಾನ್ ಖಾನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು ಸಿನಿಮಾ ಶೂಟಿಂಗ್ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರೆಮೋ ಡಿಸೋಜಾ ಆ್ಯಕ್ಷನ್ ಕಟ್ ಹೇಳಿರುವ ರೇಸ್ 3 ಸಿನಿಮಾದಲ್ಲಿ ಸಲ್ಮಾನ್ ಜತೆಗೆ ಅನಿಲ್ ಕಪೂರ್, ಬಾಬಿ ಡಿಯೋಲ್, ಜಾಕ್ವಲಿನ್ ಫರ್ನಾಂಡೀಸ್ ಮುಂತಾದವರು ನಟಿಸಿದ್ದಾರೆ. ಸದ್ಯಕ್ಕೆ ನಿರ್ಮಾಣ ನಂತರದ ಕೆಲಸಗಳಲ್ಲಿ ಸಿನಿಮಾ ತಂಡ ಬಿಝಿಯಾಗಿದೆ. ಜೂನ್ 15ರಂದು ಸಿನಿಮಾ ಪ್ರೇಕ್ಷಕರ ಮುಂದೆ ರೇಸ್ 3 ಬರುತ್ತಿದೆ.