ಆ್ಯಪ್ನಗರ

ಟ್ರೋಲ್ ಮಾಡುವವರ ವಿರುದ್ಧ ಸಿಡಿದೆದ್ದ ಕರಣ್ ಜೋಹರ್‌! ಕಾನೂನಿನ ಮೊರೆ ಹೋಗಲು ಸಿದ್ಧತೆ

ನಿರ್ಮಾಪಕ/ನಿರ್ದೇಶಕ ಕರಣ್ ಜೋಹರ್‌ಗೆ ಬಾಲಿವುಡ್‌ನಲ್ಲಿ ದೊಡ್ಡ ಹೆಸರಿದೆ. ತಮ್ಮ ಧರ್ಮ ಪ್ರೊಡಕ್ಷನ್ಸ್ ಮೂಲಕ ಅನೇಕ ಸ್ಟಾರ್‌ಗಳ ಮಕ್ಕಳನ್ನು ಲಾಂಚ್ ಮಾಡಿದ ಕೀರ್ತಿ ಅವರಿಗೆ ಇದೆ. ಈಗ ಅವರನ್ನು ಸುಶಾಂತ್ ಸಾವಿಗೆ ಸಂಬಂಧಿಸಿದಂತೆ ಟ್ರೋಲ್ ಮಾಡಲಾಗುತ್ತಿದೆ.

Vijaya Karnataka Web 23 Jul 2020, 11:54 am
ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬಳಿಕ ಬಾಲಿವುಡ್‌ನಲ್ಲಿ ಅನೇಕ ಬೆಳವಣಿಗೆಗಳು ನಡೆಯುತ್ತಿವೆ. ನೆಪೊಟಿಸಂ, ಕುಟುಂಬ ರಾಜಕೀಯ ಮುಂತಾದ ವಿಚಾರಗಳ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಅದರಲ್ಲೂ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಮೇಲೆ ಅನೇಕರು ಕೆಂಡ ಕಾರುತ್ತಿದ್ದಾರೆ. ನಟಿ ಕಂಗನಾ ರಣಾವತ್ ನೇರವಾಗಿಯೇ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು, ಕರಣ್‌ರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಇದೆಲ್ಲದರಿಂದ ನೊಂದಿರುವ ಅವರು, ಕಾನೂನಿನ ಮೊರೆ ಹೋಗುವ ನಿರ್ಧಾರ ಮಾಡಿದ್ದಾರಂತೆ!
Vijaya Karnataka Web director karan johar ready to take legal action against trollers
ಟ್ರೋಲ್ ಮಾಡುವವರ ವಿರುದ್ಧ ಸಿಡಿದೆದ್ದ ಕರಣ್ ಜೋಹರ್‌! ಕಾನೂನಿನ ಮೊರೆ ಹೋಗಲು ಸಿದ್ಧತೆ


ತಮ್ಮನ್ನು ತೆಗಳುತ್ತಿರುವ ಹಾಗೂ ತಮ್ಮ ಕುಟುಂಬದವರಿಗೆ ಬೆದರಿಕೆ ಹಾಕುವವರ ವಿರುದ್ಧ ಕಠಿಣ ಕ್ರಮಕ್ಕೆ ಮಂದಾಗಿರುವ ಕರಣ್‌, ಈಗಾಗಲೇ ಅನೇಕ ವಕೀಲರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರಂತೆ. ಈ ಕುರಿತು ಅವರ ಆಪ್ತ ಮೂಲಗಳು ಮಾಹಿತಿ ನೀಡಿವೆ. 'ಟ್ರೋಲ್ ಮಾಡುವವರ ವಿರುದ್ಧ ಕರಣ್‌ ಕಾನೂನು ಸಮರಕ್ಕೆ ಸಿದ್ಧರಾಗಿದ್ದಾರೆ. ವಕೀಲರ ತಂಡ ಹಾಗೂ ಆನ್‌ಲೈನ್ ಪರಿಣಿತರ ತಂಡ ಈ ಬಗ್ಗೆ ಗಮನ ನೀಡಿದೆ. ಟ್ರೋಲ್‌ ಮಾಡುವ ಸೋಶಿಯಲ್ ಮೀಡಿಯಾ ಖಾತೆಗಳನ್ನು ಟ್ರ್ಯಾಕ್ ಮಾಡುವುದರಲ್ಲಿ ಟೆಕ್ ತಂಡ ನಿರತವಾಗಿದೆ. ಇದರಲ್ಲಿ ನಕಲಿ ಖಾತೆಗಳೆಷ್ಟು, ಅಸಲಿ ಖಾತೆಗಳೆಷ್ಟು ಎಂಬೆಲ್ಲ ಮಾಹಿತಿಗಳನ್ನು ಕಲೆ ಹಾಕಿ, ಸಂಬಂಧಪಟ್ಟವರಿಗೆ ನೀಡಲಾಗುತ್ತದೆ. ಕರಣ್‌ ಅವರ ಮಕ್ಕಳಿಗೆ ಮತ್ತು ಅವರ ತಾಯಿಗೆ ಕಾಮೆಂಟ್‌ಗಳ ಮೂಲಕ ಬೆದರಿಕೆ ಹಾಕಿರುವವರ ಮಾಹಿತಿಯನ್ನು ಕಲೆ ಹಾಕಲಾಗಿದೆ' ಎಂಬುದು ಅವರ ಆಪ್ತ ಮೂಲಗಳು ನೀಡುವ ಮಾಹಿತಿ.

ಈ ಹಿಂದೆ ನಟಿ ಆಲಿಯಾ ಭಟ್ ಮತ್ತು ಅವರ ಸಹೋದರಿ ಶಹೀನ್ ಭಟ್ ಅವರಿಗೂ ಟ್ರೋಲ್ ಮಾಡಲಾಗಿತ್ತು ಮತ್ತು ಬೆದರಿಕೆ ಹಾಕಲಾಗಿತ್ತು. ಇನ್ನು, ಸುಶಾಂತ್ ಸಿಂಗ್ ರಜಪೂತ್ ಅವರ ಗರ್ಲ್‌ಫ್ರೆಂಡ್ ರಿಯಾ ಚಕ್ರವರ್ತಿಗೂ ಸೋಶಿಯಲ್‌ ಮೀಡಿಯಾದಲ್ಲಿ ಕೆಟ್ಟದಾಗಿ ಟ್ರೋಲ್ ಮಾಡಲಾಗಿತ್ತು. ಜೊತೆಗೆ ಅವರಿಗೂ ಅನೇಕ ರೀತಿಯ ಬೆದರಿಕೆಗಳನ್ನು ಹಾಕಲಾಗಿತ್ತು. ಇದೀಗ ಕರಣ್‌ ಜೋಹರ್‌, ತಮ್ಮ ವಿರುದ್ಧ ಟ್ರೋಲ್‌ ಮಾಡುವವರನ್ನು ಕಾನೂನಿನ ಮೂಲಕ ಮಟ್ಟ ಹಾಕಲು ಮುಂದಾಗಿದ್ದಾರೆ.

ಮೂರು ದಿನ ಮೊದಲೇ ತಮ್ಮ ಸಿಬ್ಬಂದಿಗೆ ಸಂಬಳ ನೀಡಿದ್ದ ಸುಶಾಂತ್ ಸಿಂಗ್ ರಜಪೂತ್‌!

ಇನ್ನು, ಕರಣ್ ಬರೀ ಇದೇ ಯೋಚನೆಯಲ್ಲಿದ್ದಾರೆ ಎಂದಲ್ಲ. ತಮ್ಮ ನಿರ್ಮಾಣ ಸಂಸ್ಥೆಯ ಕಡೆಗೂ ಗಮನ ನೀಡಿದ್ದಾರೆ. ಈ ಬಾರಿ 'ನಚ್‌ ಬಲಿಯೇ 10' ಡ್ಯಾನ್ಸ್ ರಿಯಾಲಿಟಿ ಶೋವನ್ನು ನಿರ್ಮಿಸುವುದಕ್ಕೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈವರೆಗೂ ಸಲ್ಮಾನ್ ಖಾನ್ ನಿರ್ಮಾಣ ಮಾಡುತ್ತಿದ್ದ ಈ ಶೋವನ್ನು ಈಗ ಕರಣ್ ಪ್ರೊಡ್ಯೂಸ್ ಮಾಡಲಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ, ಸೆಪ್ಟಂಬರ್ ತಿಂಗಳಲ್ಲಿ ಈ ಶೋ ಲಾಂಚ್ ಆಗಲಿದೆ.

ಸುಶಾಂತ್ ಸಿಂಗ್ ಜೀವನವನ್ನಾಧರಿಸಿ ಸಿನಿಮಾ ನಿರ್ಮಾಣ! ಅಚ್ಚರಿ ಮೂಡಿಸಿದ ಹೀರೋ ಆಯ್ಕೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌