ಆ್ಯಪ್ನಗರ

ತಾಯ್ನಾಡಿಗೆ ಮಾತ್ರ ತೊಂದರೆ ಕೊಡಬೇಡಿ: ಸಲ್ಮಾನ್ ಖಾನ್

ಬಾಲಿವುಡ್ ನಟ ಸಲ್ಮಾನ್ ಖಾನ್ ಏನೇ ಮಾಡಿದರೂ ಅದೊಂದು ಸಂಚಲನ ಮೂಡಿಸುತ್ತದೆ. ಸಿನಿಮಾ ಮಾಡಿದರೂ, ರಿಯಾಲಿಟಿ ಶೋ ಮಾಡಿದರೂ, ಕೊನೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ವೀಟ್ ಮಾಡಿದರೂ ಸಿಕ್ಕಾಪಟ್ಟೆ ರೆಸ್ಪಾನ್ಸ್ ಬರುವುದಂತೂ ಗ್ಯಾರಂಟಿ.

Vijaya Karnataka Web 13 Aug 2018, 7:25 pm
ಬಾಲಿವುಡ್ ನಟ ಸಲ್ಮಾನ್ ಖಾನ್ ಏನೇ ಮಾಡಿದರೂ ಅದೊಂದು ಸಂಚಲನ ಮೂಡಿಸುತ್ತದೆ. ಸಿನಿಮಾ ಮಾಡಿದರೂ, ರಿಯಾಲಿಟಿ ಶೋ ಮಾಡಿದರೂ, ಕೊನೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ವೀಟ್ ಮಾಡಿದರೂ ಸಿಕ್ಕಾಪಟ್ಟೆ ರೆಸ್ಪಾನ್ಸ್ ಬರುವುದಂತೂ ಗ್ಯಾರಂಟಿ.
Vijaya Karnataka Web ತಾಯಿ ಜತೆಗೆ ಸಲ್ಮಾನ್ ಖಾನ್


ಇತ್ತೀಚೆಗೆ ಹಮ್ ಫಿಟ್ ತೋ ಇಂಡಿಯಾ ಫಿಟ್ ಚಾಲೆಂಜ್ ಸ್ವೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ ವೀಡಿಯೋ ತುಂಬಾ ವೈರಲ್ ಆಗಿತ್ತು. ಇದೀಗ ಸಲ್ಮಾನ್ ಅದಕ್ಕೆ ಸಂಬಂಧಿಸಿದಂತೆ ಟ್ವೀಟ್ ಒಂದನ್ನು ಮಾಡಿದ್ದಾರೆ. ಇದು ಸಹ ಈಗ ವೈರಲ್ ಆಗಿದೆ.

ಭಾರತ ದೇಶ ಸ್ವಚ್ಛವಾಗಿ ಇದ್ದರೆ ನಾವು ಫಿಟ್ ಆಗಿರುತ್ತೇವೆ. ನಾವು ಫಿಟ್ ಆಗಿದ್ದರೆ ದೇಶ ಚೆನ್ನಾಗಿರುತ್ತದೆ. ನಿಮಗೇನನ್ನಿಸುತ್ತದೋ ಅದನ್ನು ಮಾಡಿ. ಆದರೆ ತಾಯ್ನಾಡಿಗೆ ಮಾತ್ರ ತೊಂದರೆ ಕೊಡಬೇಡಿ ಎಂದು ಸಲ್ಮಾನ್ ಖಾನ್ ವಾರ್ನಿಂಗ್ ಕೊಡುವಂತೆ ಟ್ವೀಟ್ ಮಾಡಿದ್ದಾರೆ.


ಸದ್ಯಕ್ಕೆ ಸಲ್ಮಾನ್ ಖಾನ್ 'ಭರತ್' ಸಿನಿಮಾ ಶೂಟಿಂಗ್‌ನಲ್ಲಿ ಬಿಝಿಯಾಗಿದ್ದಾರೆ. ಇದೀಗ ಸಲ್ಲು ಮಾಡಿರುವ ಟ್ವೀಟ್ ಐದು ಸಾವಿರಕ್ಕೂ ಅಧಿಕ ರೀಟ್ವೀಟ್ ಆಗಿದ್ದು, 1800ಕ್ಕೂ ಹೆಚ್ಚು ಕಾಮೆಂಟ್‌ಗಳು ಹರಿದುಬಂದಿವೆ. ಒಟ್ಟು 39 ಸಾವಿರ ಲೈಕ್ಸ್ ಸಿಕ್ಕಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌