ಆ್ಯಪ್ನಗರ

ಕಂಗನಾ ಮೇಲೆ ಕೋಮು ಸೌಹಾರ್ದ ಕದಡಿದ ಆರೋಪ! ಎಫ್‌ಐಆರ್‌ ದಾಖಲಿಸಲು ಕೋರ್ಟ್‌ ಆದೇಶ!

ಬಾಲಿವುಡ್‌ ನಟಿ ಕಂಗನಾ ರಣಾವತ್‌ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಸೋಶಿಯಲ್‌ ಮೀಡಿಯಾ ಮೂಲಕ ಕೋಮು ಸೌಹಾರ್ದಕ್ಕೆ ಧಕ್ಕೆ ತಂದ ಆರೋಪ ಅವರ ಮೇಲಿದೆ. ಆ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.

Vijaya Karnataka Web 17 Oct 2020, 4:38 pm
ಪ್ರತಿದಿನ ಸೋಶಿಯಲ್‌ ಮೀಡಿಯಾದಲ್ಲಿ ಒಂದಲ್ಲ ಒಂದು ವಿಚಾರಗಳ ಬಗ್ಗೆ ಧೈರ್ಯವಾಗಿ ಅಭಿಪ್ರಾಯ ಹಂಚಿಕೊಳ್ಳುತ್ತಾರೆ ನಟಿ ಕಂಗನಾ ರಣಾವತ್‌. ಆದರೆ ಇತ್ತೀಚೆಗೆ ಅವರು ಮಾಡಿದ ಒಂದು ಟ್ವೀಟ್‌ ಅವರಿಗೆ ಮುಳುವಾಗಿದೆ. ಹಿಂದುಗಳ ಹತ್ಯೆ ಬಗ್ಗೆ ಮಾತನಾಡಿದ್ದಕ್ಕೆ ಕಂಗನಾ ಕೆಲವರ ಕೆಂಗಣ್ಣಿಗೆ ಗುರಿ ಆಗಿದ್ದಾರೆ.
Vijaya Karnataka Web ಕಂಗನಾ ರಣಾವತ್‌ ರಂಗೋಲಿ ಚಂಡೇಲ್‌


ಟ್ವಿಟರ್‌ ಮತ್ತು ಸಂದರ್ಶನಗಳ ಮೂಲಕ ಕೋಮು ಸೌಹಾರ್ದ ಕದಡಲು ಯತ್ನಿಸಿದ್ದಕ್ಕಾಗಿ ಕಂಗನಾ ರಣಾವತ್ ಮತ್ತು ಅವರ ಸಹೋದರಿ ರಂಗೋಲಿ ಚಂಡೇಲ್‌ ಮೇಲೆ ಎಫ್‌ಐಆರ್‌ ದಾಖಲಿಸುವಂತೆ ಬಾಂದ್ರಾದ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಸೂಚಿಸಿದೆ. ಈ ಸಂಬಂಧ ಈಗಾಗಲೇ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.

'ಹಿಂದುಗಳ ಜೀವ ಮುಖ್ಯವಲ್ಲ. 5-6 ಮಿಲಿಯನ್‌ ಯಹೂದಿಗಳ ಹತ್ಯೆ ಬಗ್ಗೆ ಈಗಲೂ ಪಾಶ್ವತ್ಯ ದೇಶಗಳು ಸಿನಿಮಾ ಮಾಡುತ್ತಿವೆ. ಹಾಗಾಗಿ ಅದು ಮರುಕಳಿಸಿಲ್ಲ. ನೂರಾರು ವರ್ಷಗಳ ಗುಲಾಮಗಿರಿಯಲ್ಲಿ ಎಷ್ಟು ಜನ ಹಿಂದುಗಳ ಕೊಲೆ ಆಯಿತು ಅಂತ ನಮಗೆ ಗೊತ್ತಾ? ಎರಡನೇ ಮಹಾಯುದ್ಧದಲ್ಲಿ ಸತ್ತ ಯಹೂದಿಗಳಿಗಿಂತಲೂ 100 ಪಟ್ಟು ಹೆಚ್ಚು. ಆದರೆ ಹಿಂದುಗಳ ಹತ್ಯೆ ಬಗ್ಗೆ ಯಾವುದೇ ಸಿನಿಮಾಗಳು ಇಲ್ಲ' ಎಂದು ಕಂಗನಾ ಟ್ವೀಟ್‌ ಮಾಡಿದ್ದರು.

also read: ಆಮೀರ್‌ ಖಾನ್‌ ಮಗಳಿಗೆ ಖಿನ್ನತೆ; ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದ ನಟಿ ಕಂಗನಾ ರಣಾವತ್‌!

ಅಷ್ಟೇ ಅಲ್ಲದೆ, ಸರಣಿ ಟ್ವೀಟ್‌ಗಳ ಮೂಲಕ ಅವರು ಅನ್ಯಕೋಮಿನ ಬಗ್ಗೆ ಅನೇಕ ಪ್ರಚೋದನಕಾರಿ ವಿಷಯಗಳನ್ನು ಬರೆದುಕೊಂಡಿದ್ದಾರೆ. ಈ ಕುರಿತು ಸಾಹಿಲ್‌ ಅಶ್ರಫಲಿ ಸಯ್ಯದ್‌ ಎಂಬುವವರು ದೂರು ದಾಖಲಿಸಿದ್ದಾರೆ. ಮುಸ್ಲಿಂ ಮತ್ತು ಹಿಂದು ಕಲಾವಿದರ ಮಧ್ಯೆ ಸಾಮರಸ್ಯ ಕೆಡಿಸುವ ಉದ್ದೇಶದಿಂದಲೇ ಕಂಗನಾ ಅವರು ತಮ್ಮ ಪ್ರತಿ ಟ್ವೀಟ್‌ ಮತ್ತು ಸಂದರ್ಶನದಲ್ಲಿ ಧರ್ಮದ ವಿಚಾರವನ್ನು ಎಳೆದು ತರುತ್ತಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

also read: ಬಾಲಿವುಡ್‌ನ 'ಅಲಿಖಿತ' ನಿಯಮದ ಬಗ್ಗೆ ಬಾಯಿಬಿಟ್ಟ ಕಂಗನಾ! ಸ್ಟಾರ್‌ಗಳ ವಿರುದ್ಧ 'ತಲೈವಿ' ವಾಗ್ದಾಳಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌